ಪ್ರೊಬೆಷನರಿ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದು, ಮೊದಲ ಬಾರಿಗೆ ಕಡೂರು ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದರು. ಮೆಸ್ಕಾಂ, ಉಳ್ಳಾಲ ಠಾಣೆ, ಮಂಗಳೂರು ಟ್ರಾಫಿಕ್, ಕಾರವಾರ ಹಾಗೂ ಕುದುರೆಮುಖ ಸೇರಿದಂತೆ ಹನ್ನೊಂದು ವರ್ಷ ವಿವಿಧೆಡೆ ಕರ್ತವ್ಯ ನಿರ್ವಹಿಸಿ ಪದೋನ್ನತಿ ಪಡೆದುಕೊಂಡರು. ಬಳಿಕ ರಾಮನಗರ ಎಸಿಬಿಯಲ್ಲಿಯೂ 3 ವರ್ಷ ಕರ್ತವ್ಯ ನಿರ್ವಹಿಸಿದ್ದರು. ನಂತರ ಸಿದ್ಧಾಪುರದಲ್ಲಿ ಸೇವೆ ಸಲ್ಲಿಸಿ ತಮ್ಮ ಹುಟ್ಟೂರಿನ ಕಾಪುನಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದರು.