<p><strong>ಮಂಗಳೂರು: </strong>ಪ್ರಯಾಣಿಕರಿಗೆ ಸಂಚಾರದ ಜೊತೆ ಹೊಸತನದ ಸಾಮಾಜಿಕ ಸೇವೆ– ಪ್ರಯೋಗ ಮಾಡುತ್ತಿರುವ ಮಂಗಳೂರು ನಗರ ಸಂಚಾರ ಸಾರಿಗೆ (ಖಾಸಗಿ ಸಿಟಿ ಬಸ್) ಈಗ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುತ್ತಿದೆ.</p>.<p>ಮಂಗಳೂರಿನ ರೂಟ್ ನಂಬರ್ 27ರ ಗಣೇಶ್ ಪ್ರಸಾದ್ ಬಸ್ ಮೇಲೆ ಡ್ರಗ್ಸ್ ವಿರುದ್ಧದ ಜಾಗೃತಿಯನ್ನು ಚಿತ್ರಿಸಲಾಗಿದೆ. ‘Life is in your hand', ‘Drug will doom', 'say no to drug' ಎಂಬಿತ್ಯಾದಿ ಘೋಷವಾಕ್ಯಗಳನ್ನು ಬರೆದು, ಚಿತ್ರಿಸಲಾಗಿದೆ. ಈ ಬಸ್ ಸ್ಟೇಟ್ ಬ್ಯಾಂಕ್ ಹಾಗೂ ಅತ್ತಾವರ ಮಾರ್ಗವಾಗಿ ಸಂಚರಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂದೇಶ ನೀಡುವುದು ಉದ್ದೇಶವಾಗಿದೆ.</p>.<p>‘ನಾವು (ಖಾಸಗಿ ಸಿಟಿ ಬಸ್) ಸಂಚಾರದ ಜೊತೆ ಸಾಮಾಜಿಕ ಸಂದೇಶ ಹಾಗೂ ಕೊಡುಗೆ ನೀಡುವ ಕೆಲಸವನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದೇವೆ. ಈ ಹಿಂದೆ ತುಳು ಅಭಿಯಾನ, ಸ್ವಚ್ಛ ಭಾರತ ಅಭಿಯಾನ, ನೀರು ಉಳಿಸಿ ಮತ್ತಿತರ ಜಾಗೃತಿ ಜೊತೆ ಕೈ ಜೋಡಿಸಿದ್ದೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ ತಿಳಿಸಿದರು.</p>.<p><strong>ಚೇತರಿಕೆ ನೀಡಿದ ದಸರಾ:</strong>ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಮಂಗಳೂರು ನಗರದ ಸಿಟಿ ಬಸ್ಗಳು ಕಿಕ್ಕಿರಿದು ತುಂಬಿರುತ್ತಿದ್ದವು. ಆದರೆ, ಈ ಬಾರಿ ಕೋವಿಡ್ ಪರಿಣಾಮ, ಹೆಚ್ಚಿನ ದಟ್ಟಣೆ ಕಂಡುಬಂದಿಲ್ಲ.</p>.<p>‘ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಲಾಭದಾಯಕವಾಗಿರುತ್ತಿತ್ತು. ಈ ಬಾರಿ ಲಾಕ್ಡೌನ್ ಬಳಿಕ ನಷ್ಟದಲ್ಲಿ ಇದ್ದೇವೆ. ಆದರೆ, ದಸರಾ ಬಳಿಕ ಸ್ವಲ್ಪ ಚೇತರಿಕೆ ಕಂಡಿದ್ದು, ಬಹುತೇಕ ಎಲ್ಲ ಬಸ್ಗಳೂ ರಸ್ತೆಗಿಳಿದಿವೆ’ ಎಂದು ಅವರು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು: </strong>ಪ್ರಯಾಣಿಕರಿಗೆ ಸಂಚಾರದ ಜೊತೆ ಹೊಸತನದ ಸಾಮಾಜಿಕ ಸೇವೆ– ಪ್ರಯೋಗ ಮಾಡುತ್ತಿರುವ ಮಂಗಳೂರು ನಗರ ಸಂಚಾರ ಸಾರಿಗೆ (ಖಾಸಗಿ ಸಿಟಿ ಬಸ್) ಈಗ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುತ್ತಿದೆ.</p>.<p>ಮಂಗಳೂರಿನ ರೂಟ್ ನಂಬರ್ 27ರ ಗಣೇಶ್ ಪ್ರಸಾದ್ ಬಸ್ ಮೇಲೆ ಡ್ರಗ್ಸ್ ವಿರುದ್ಧದ ಜಾಗೃತಿಯನ್ನು ಚಿತ್ರಿಸಲಾಗಿದೆ. ‘Life is in your hand', ‘Drug will doom', 'say no to drug' ಎಂಬಿತ್ಯಾದಿ ಘೋಷವಾಕ್ಯಗಳನ್ನು ಬರೆದು, ಚಿತ್ರಿಸಲಾಗಿದೆ. ಈ ಬಸ್ ಸ್ಟೇಟ್ ಬ್ಯಾಂಕ್ ಹಾಗೂ ಅತ್ತಾವರ ಮಾರ್ಗವಾಗಿ ಸಂಚರಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂದೇಶ ನೀಡುವುದು ಉದ್ದೇಶವಾಗಿದೆ.</p>.<p>‘ನಾವು (ಖಾಸಗಿ ಸಿಟಿ ಬಸ್) ಸಂಚಾರದ ಜೊತೆ ಸಾಮಾಜಿಕ ಸಂದೇಶ ಹಾಗೂ ಕೊಡುಗೆ ನೀಡುವ ಕೆಲಸವನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದೇವೆ. ಈ ಹಿಂದೆ ತುಳು ಅಭಿಯಾನ, ಸ್ವಚ್ಛ ಭಾರತ ಅಭಿಯಾನ, ನೀರು ಉಳಿಸಿ ಮತ್ತಿತರ ಜಾಗೃತಿ ಜೊತೆ ಕೈ ಜೋಡಿಸಿದ್ದೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ ತಿಳಿಸಿದರು.</p>.<p><strong>ಚೇತರಿಕೆ ನೀಡಿದ ದಸರಾ:</strong>ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಮಂಗಳೂರು ನಗರದ ಸಿಟಿ ಬಸ್ಗಳು ಕಿಕ್ಕಿರಿದು ತುಂಬಿರುತ್ತಿದ್ದವು. ಆದರೆ, ಈ ಬಾರಿ ಕೋವಿಡ್ ಪರಿಣಾಮ, ಹೆಚ್ಚಿನ ದಟ್ಟಣೆ ಕಂಡುಬಂದಿಲ್ಲ.</p>.<p>‘ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಲಾಭದಾಯಕವಾಗಿರುತ್ತಿತ್ತು. ಈ ಬಾರಿ ಲಾಕ್ಡೌನ್ ಬಳಿಕ ನಷ್ಟದಲ್ಲಿ ಇದ್ದೇವೆ. ಆದರೆ, ದಸರಾ ಬಳಿಕ ಸ್ವಲ್ಪ ಚೇತರಿಕೆ ಕಂಡಿದ್ದು, ಬಹುತೇಕ ಎಲ್ಲ ಬಸ್ಗಳೂ ರಸ್ತೆಗಿಳಿದಿವೆ’ ಎಂದು ಅವರು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>