<p><strong>ಮಂಗಳೂರು:</strong> ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2019–20 ನೇ ಸಾಲಿನಲ್ಲಿ ಒಟ್ಟು ₹9,05,35,412 ಮೌಲ್ಯದ ವಸ್ತುಗಳು ಕಳುವಾಗಿದ್ದು, ಈ ಪೈಕಿ ₹5,37,86,517 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ವಿಕಾಸ್ಕುಮಾರ್ ವಿಕಾಸ್ ತಿಳಿಸಿದರು.</p>.<p>ನಗರದ ಪೊಲೀಸ್ ಮೈದಾನದಲ್ಲಿ ಶನಿವಾರ ನಡೆದ ಕಳವಾದ ಸ್ವತ್ತು ಮರಳಿಸುವ ಕವಾಯತಿನಲ್ಲಿ ಅವರು ಮಾತನಾಡಿದ ಅವರು, ಶನಿವಾರ ₹1.49 ಕೋಟಿ ಮೌಲ್ಯದ ವಸ್ತುಗಳನ್ನು ಅವುಗಳ ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಇದರಲ್ಲಿ 2.277 ಕೆ.ಜಿ. ಚಿನ್ನ, 25 ದ್ವಿಚಕ್ರ ವಾಹನಗಳು, 19 ಮೊಬೈಲ್, 11 ಇತರ ಆಸ್ತಿಗಳು ಮತ್ತು ₹48,13,951 ನಗದು ಸೇರಿದೆ’ ಎಂದು ತಿಳಿಸಿದರು.</p>.<p>‘ಕೋರ್ಟ್ ಅನುಮತಿ ಪಡೆದ ನಂತರ ₹1.49 ಕೋಟಿ ಮೌಲ್ಯದ ಆಸ್ತಿಗಳನ್ನು ಹಿಂದಿರುಗಿಸಿದ್ದು, ಉಳಿದ ಸ್ವತ್ತುಗಳನ್ನು ಕೋರ್ಟ್ ಅನುಮತಿ ಬಂದ ಬಳಿಕ ಹಸ್ತಾಂತರಿಸಲಾಗುವುದು ಎಂದರು.</p>.<p>ದಕ್ಷಿಣ ಉಪವಿಭಾಗ ವ್ಯಾಪ್ತಿಯಲ್ಲಿ ₹19.54 ಲಕ್ಷ ಮೌಲ್ಯದ ಸ್ವತ್ತುಗಳು, ಉತ್ತರ ಉಪವಿಭಾಗ ವ್ಯಾಪ್ತಿಯಲ್ಲಿ ಒಟ್ಟು ₹43.08ಲಕ್ಷ ಮೌಲ್ಯದ ವಸ್ತುಗಳನ್ನು ಹಾಜರುಪಡಿಸಲಾಗಿದೆ. ಕೇಂದ್ರ ಉಪವಿಭಾಗ ವ್ಯಾಪ್ತಿಯಲ್ಲಿ ₹1.49 ಕೋಟಿ ಮೌಲ್ಯದ ಸ್ವತ್ತುಗಳು ಹಾಜರುಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.</p>.<p>ಪ್ರಕರಣ ಪತ್ತೆಹಚ್ಚುವಲ್ಲಿ ಯಶಸ್ವಿ ಕಾರ್ಯಾಚರಣೆಗೆ ನಡೆಸಿದ ಡಿಸಿಪಿಗಳಾದ ಅರುಣಾಂಗ್ಷು ಗಿರಿ ವಿನಯ್ ಗಾಂವ್ಕರ್, ಎಸಿಪಿಗಳಾದ ಬೆಳ್ಳಿಯಪ್ಪ, ಜಗದೀಶ್, ರಂಜಿತ್ ಸೇರಿದಂತೆ ನಗರ ಅಪರಾಧ ಪತ್ತೆದಳದ ತಂಡ, ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಎಎಸ್ಯ ಹಾಗೂ ಸಿಬ್ಬಂದಿಯನ್ನು ಅಭಿನಂದಿಸುವುದಾಗಿ ವಿಕಾಸ್ಕುಮಾರ್ ಹೇಳಿದರು.</p>.<p class="Briefhead"><strong>₹50 ಲಕ್ಷ ನಗದು ಹಸ್ತಾಂತರ</strong></p>.<p>ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಇಡ್ಯಾ ಗ್ರಾಮದ ಅಪಾರ್ಟ್ಮೆಂಟ್ನಲ್ಲಿ ಆಗಸ್ಟ್ 18ರಂದು ಕಳವಾಗಿದ್ದ ₹50 ಲಕ್ಷ ನಗದು, 200 ಗ್ರಾಂ ಚಿನ್ನಾಭರಣಗಳನ್ನು ವಾರಸುದಾರರಿಗೆ ನೀಡಲಾಯಿತು.</p>.<p>ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸುರತ್ಕಲ್ ಪೊಲೀಸರು, ನಾಲ್ವರು ಆರೋಪಿಗಳಾದ ರಘು ಸಿ., ಸೆಲ್ಲಪ್ಪನ್, ಅಮೇಶ್ ಅಯ್ಯಪ್ಪನ್, ನವೀನ್ ಪೂಜಾರಿ, ಸಂತೋಷ್ ಪೂಜಾರಿ ಅವರನ್ನು ಬಂಧಿಸಿದ್ದರು. ಎಸಿಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಚಂದ್ರಪ್ಪ ಮತ್ತು ತಂಡ ಕೇವಲ ತಿಂಗಳ ಅವಧಿಯಲ್ಲಿ ಈ ಪ್ರಕರಣ ಭೇದಿಸಿದೆ.</p>.<p>‘ಪೊಲೀಸರು ಮುತುವರ್ಜಿ ವಹಿಸಿ ಕಾರ್ಯಾಚರಣೆ ನಡೆಸಿದ್ದರಿಂದ ಕಳವಾದ ₹50ಲಕ್ಷ ಹಣ ಸಿಕ್ಕಿದೆ. ಇನ್ನೂ ಹಣ ಜಪ್ತಿ ಮಾಡಲು ಬಾಕಿಯಿದೆ. ಕೂಡಲೇ ಆರೋಪಿಗಳಿಂದ ಮುಟ್ಟುಗೋಲು ಹಾಕಿ ನೀಡಲಿ’ ಎಂದು ಮನೆಯ ಸಂತ್ರಸ್ತೆ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2019–20 ನೇ ಸಾಲಿನಲ್ಲಿ ಒಟ್ಟು ₹9,05,35,412 ಮೌಲ್ಯದ ವಸ್ತುಗಳು ಕಳುವಾಗಿದ್ದು, ಈ ಪೈಕಿ ₹5,37,86,517 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ವಿಕಾಸ್ಕುಮಾರ್ ವಿಕಾಸ್ ತಿಳಿಸಿದರು.</p>.<p>ನಗರದ ಪೊಲೀಸ್ ಮೈದಾನದಲ್ಲಿ ಶನಿವಾರ ನಡೆದ ಕಳವಾದ ಸ್ವತ್ತು ಮರಳಿಸುವ ಕವಾಯತಿನಲ್ಲಿ ಅವರು ಮಾತನಾಡಿದ ಅವರು, ಶನಿವಾರ ₹1.49 ಕೋಟಿ ಮೌಲ್ಯದ ವಸ್ತುಗಳನ್ನು ಅವುಗಳ ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಇದರಲ್ಲಿ 2.277 ಕೆ.ಜಿ. ಚಿನ್ನ, 25 ದ್ವಿಚಕ್ರ ವಾಹನಗಳು, 19 ಮೊಬೈಲ್, 11 ಇತರ ಆಸ್ತಿಗಳು ಮತ್ತು ₹48,13,951 ನಗದು ಸೇರಿದೆ’ ಎಂದು ತಿಳಿಸಿದರು.</p>.<p>‘ಕೋರ್ಟ್ ಅನುಮತಿ ಪಡೆದ ನಂತರ ₹1.49 ಕೋಟಿ ಮೌಲ್ಯದ ಆಸ್ತಿಗಳನ್ನು ಹಿಂದಿರುಗಿಸಿದ್ದು, ಉಳಿದ ಸ್ವತ್ತುಗಳನ್ನು ಕೋರ್ಟ್ ಅನುಮತಿ ಬಂದ ಬಳಿಕ ಹಸ್ತಾಂತರಿಸಲಾಗುವುದು ಎಂದರು.</p>.<p>ದಕ್ಷಿಣ ಉಪವಿಭಾಗ ವ್ಯಾಪ್ತಿಯಲ್ಲಿ ₹19.54 ಲಕ್ಷ ಮೌಲ್ಯದ ಸ್ವತ್ತುಗಳು, ಉತ್ತರ ಉಪವಿಭಾಗ ವ್ಯಾಪ್ತಿಯಲ್ಲಿ ಒಟ್ಟು ₹43.08ಲಕ್ಷ ಮೌಲ್ಯದ ವಸ್ತುಗಳನ್ನು ಹಾಜರುಪಡಿಸಲಾಗಿದೆ. ಕೇಂದ್ರ ಉಪವಿಭಾಗ ವ್ಯಾಪ್ತಿಯಲ್ಲಿ ₹1.49 ಕೋಟಿ ಮೌಲ್ಯದ ಸ್ವತ್ತುಗಳು ಹಾಜರುಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.</p>.<p>ಪ್ರಕರಣ ಪತ್ತೆಹಚ್ಚುವಲ್ಲಿ ಯಶಸ್ವಿ ಕಾರ್ಯಾಚರಣೆಗೆ ನಡೆಸಿದ ಡಿಸಿಪಿಗಳಾದ ಅರುಣಾಂಗ್ಷು ಗಿರಿ ವಿನಯ್ ಗಾಂವ್ಕರ್, ಎಸಿಪಿಗಳಾದ ಬೆಳ್ಳಿಯಪ್ಪ, ಜಗದೀಶ್, ರಂಜಿತ್ ಸೇರಿದಂತೆ ನಗರ ಅಪರಾಧ ಪತ್ತೆದಳದ ತಂಡ, ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಎಎಸ್ಯ ಹಾಗೂ ಸಿಬ್ಬಂದಿಯನ್ನು ಅಭಿನಂದಿಸುವುದಾಗಿ ವಿಕಾಸ್ಕುಮಾರ್ ಹೇಳಿದರು.</p>.<p class="Briefhead"><strong>₹50 ಲಕ್ಷ ನಗದು ಹಸ್ತಾಂತರ</strong></p>.<p>ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಇಡ್ಯಾ ಗ್ರಾಮದ ಅಪಾರ್ಟ್ಮೆಂಟ್ನಲ್ಲಿ ಆಗಸ್ಟ್ 18ರಂದು ಕಳವಾಗಿದ್ದ ₹50 ಲಕ್ಷ ನಗದು, 200 ಗ್ರಾಂ ಚಿನ್ನಾಭರಣಗಳನ್ನು ವಾರಸುದಾರರಿಗೆ ನೀಡಲಾಯಿತು.</p>.<p>ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸುರತ್ಕಲ್ ಪೊಲೀಸರು, ನಾಲ್ವರು ಆರೋಪಿಗಳಾದ ರಘು ಸಿ., ಸೆಲ್ಲಪ್ಪನ್, ಅಮೇಶ್ ಅಯ್ಯಪ್ಪನ್, ನವೀನ್ ಪೂಜಾರಿ, ಸಂತೋಷ್ ಪೂಜಾರಿ ಅವರನ್ನು ಬಂಧಿಸಿದ್ದರು. ಎಸಿಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಚಂದ್ರಪ್ಪ ಮತ್ತು ತಂಡ ಕೇವಲ ತಿಂಗಳ ಅವಧಿಯಲ್ಲಿ ಈ ಪ್ರಕರಣ ಭೇದಿಸಿದೆ.</p>.<p>‘ಪೊಲೀಸರು ಮುತುವರ್ಜಿ ವಹಿಸಿ ಕಾರ್ಯಾಚರಣೆ ನಡೆಸಿದ್ದರಿಂದ ಕಳವಾದ ₹50ಲಕ್ಷ ಹಣ ಸಿಕ್ಕಿದೆ. ಇನ್ನೂ ಹಣ ಜಪ್ತಿ ಮಾಡಲು ಬಾಕಿಯಿದೆ. ಕೂಡಲೇ ಆರೋಪಿಗಳಿಂದ ಮುಟ್ಟುಗೋಲು ಹಾಕಿ ನೀಡಲಿ’ ಎಂದು ಮನೆಯ ಸಂತ್ರಸ್ತೆ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>