‘ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 12.30ರವರೆಗೆ ಭೂಮಿಪೂಜೆ ನಡೆಯಲಿದ್ದು, ನೇರ ಪ್ರಸಾರ ಇರಲಿದೆ. ಈ ಸಂದರ್ಭದಲ್ಲಿ ರಾಮನಾಮ ಜಪ, ತಪ, ವಿಶೇಷ ಪೂಜೆಗಳನ್ನು ಮನೆಗಳಲ್ಲಿ ಹಾಗೂ ದೇಗುಲ, ಮಠ ಮಂದಿರಗಳಲ್ಲಿ ನೆರವೇರಿಸಲಾಗುವುದು. ವಾಹನಗಳಲ್ಲಿ ಭಗವಾಧ್ವಜ ಹಾರಿಸುವಂತೆಯೂ ಜನರಲ್ಲಿ ಮನವಿ ಮಾಡಲಾಗಿದೆ’ ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಎಂ. ತಿಳಿಸಿದ್ದಾರೆ.