<p><strong>ಉಪ್ಪಿನಂಗಡಿ</strong>: ರಾಷ್ಟ್ರೀಯ ಹೆದ್ದಾರಿ, ನೆಕ್ಕಿಲಾಡಿಯಲ್ಲಿ ಕುಮಾರಧಾರಾ ಸೇತುವೆ ಮೇಲೆ ಕೆಸರು ತುಂಬಿದ ರಸ್ತೆಯಲ್ಲಿ ಪಲ್ಟಿಯಾದ ದ್ವಿಚಕ್ರ ವಾಹನ ಸವಾರ, ಕಾಮಗಾರಿ ಗುತ್ತಿಗೆದಾರ ಸಂಸ್ಥೆ ಕೆಎನ್ಆರ್ ವಿರುದ್ಧ ಪೊಲೀಸ್ ದೂರು ನೀಡಿದ ಕೂಡಲೇ ಆ ರಸ್ತೆಯ ಹೊಂಡಗಳನ್ನು ಸಂಸ್ಥೆ ಡಾಂಬರೀಕರಣಗೊಳಿಸಿ ಮುಚ್ಚಿದೆ.</p>.<p>ನೆಕ್ಕಿಲಾಡಿಯಲ್ಲಿರುವ ಕುಮಾರಧಾರ ನದಿಯ ಒಂದು ಸೇತುವೆಯನ್ನು ಮುಚ್ಚಿ ಅದರಲ್ಲಿ ಚತುಷ್ಪಥ ಹೆದ್ದಾರಿಯ ಕಾಮಗಾರಿ ನಿರ್ವಹಿಸಲಾಗುತ್ತಿತ್ತು. ಅದರ ಬಳಿ ಇರುವ ಮತ್ತೊಂದು ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವ ಹೆದ್ದಾರಿಯಲ್ಲಿ ಹೊಂಡ-ಗುಂಡಿಗಳಿದ್ದವು. ಕಾಮಗಾರಿ ನಡೆಸುವ ಸಂದರ್ಭ ಈ ರಸ್ತೆಗೆ ಮಣ್ಣು ಬಿದ್ದಿತ್ತು. ದೂಳು ಏದ್ದೇಳಬಾರದೆಂದು ಗುತ್ತಿಗೆದಾರ ಸಂಸ್ಥೆಯು ರಸ್ತೆಗೆ ನೀರು ಹಾಕಿತ್ತು. ಇದರಿಂದಾಗಿ ರಸ್ತೆಯು ಕೆಸರಾಗಿ ಜಾರುತ್ತಿತ್ತು.</p>.<p>ನೆಕ್ಕಿಲಾಡಿಯ ಅಬ್ದುಲ್ ರಹಿಮಾನ್ ಯುನಿಕ್ ಅದೇ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಾಗ ಹೊಂಡಕ್ಕೆ ಬಿದ್ದು ಅವರ ದ್ವಿಚಕ್ರ ವಾಹನ ಪಲ್ಟಿಯಾಗಿ, ಅವರು ಗಾಯಗೊಂಡಿದ್ದರು. ಗುತ್ತಿಗೆದಾರ ಸಂಸ್ಥೆ ನಿರ್ವಹಿಸುತ್ತಿರುವ ಅವೈಜ್ಞಾನಿಕ ಕಾಮಗಾರಿಯೇ ಅಪಘಾತಕ್ಕೆ ಕಾರಣ ಎಂದು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.</p>.<p>ಈ ಬಗ್ಗೆ ಎಚ್ಚೆತ್ತುಕೊಂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ಗಳು, ಕೆಎನ್ಆರ್ ಸಂಸ್ಥೆಯ ಎಂಜಿನಿಯರ್ಗಳು, ಅಧಿಕಾರಿಗಳು ಕಾಮಗಾರಿ ನಡೆಸಿ ಹೊಂಡ-ಗುಂಡಿಗಳನ್ನು ಮುಚ್ಚಿದ್ದಾರೆ. ಅವರ ಮನವಿಯ ಬಳಿಕ ಅಬ್ದುಲ್ ರಹಿಮಾನ್ ಅವರು ಪೊಲೀಸರಿಗೆ ನೀಡಿದ ದೂರನ್ನು ಹಿಂಪಡೆದುಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಪ್ಪಿನಂಗಡಿ</strong>: ರಾಷ್ಟ್ರೀಯ ಹೆದ್ದಾರಿ, ನೆಕ್ಕಿಲಾಡಿಯಲ್ಲಿ ಕುಮಾರಧಾರಾ ಸೇತುವೆ ಮೇಲೆ ಕೆಸರು ತುಂಬಿದ ರಸ್ತೆಯಲ್ಲಿ ಪಲ್ಟಿಯಾದ ದ್ವಿಚಕ್ರ ವಾಹನ ಸವಾರ, ಕಾಮಗಾರಿ ಗುತ್ತಿಗೆದಾರ ಸಂಸ್ಥೆ ಕೆಎನ್ಆರ್ ವಿರುದ್ಧ ಪೊಲೀಸ್ ದೂರು ನೀಡಿದ ಕೂಡಲೇ ಆ ರಸ್ತೆಯ ಹೊಂಡಗಳನ್ನು ಸಂಸ್ಥೆ ಡಾಂಬರೀಕರಣಗೊಳಿಸಿ ಮುಚ್ಚಿದೆ.</p>.<p>ನೆಕ್ಕಿಲಾಡಿಯಲ್ಲಿರುವ ಕುಮಾರಧಾರ ನದಿಯ ಒಂದು ಸೇತುವೆಯನ್ನು ಮುಚ್ಚಿ ಅದರಲ್ಲಿ ಚತುಷ್ಪಥ ಹೆದ್ದಾರಿಯ ಕಾಮಗಾರಿ ನಿರ್ವಹಿಸಲಾಗುತ್ತಿತ್ತು. ಅದರ ಬಳಿ ಇರುವ ಮತ್ತೊಂದು ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವ ಹೆದ್ದಾರಿಯಲ್ಲಿ ಹೊಂಡ-ಗುಂಡಿಗಳಿದ್ದವು. ಕಾಮಗಾರಿ ನಡೆಸುವ ಸಂದರ್ಭ ಈ ರಸ್ತೆಗೆ ಮಣ್ಣು ಬಿದ್ದಿತ್ತು. ದೂಳು ಏದ್ದೇಳಬಾರದೆಂದು ಗುತ್ತಿಗೆದಾರ ಸಂಸ್ಥೆಯು ರಸ್ತೆಗೆ ನೀರು ಹಾಕಿತ್ತು. ಇದರಿಂದಾಗಿ ರಸ್ತೆಯು ಕೆಸರಾಗಿ ಜಾರುತ್ತಿತ್ತು.</p>.<p>ನೆಕ್ಕಿಲಾಡಿಯ ಅಬ್ದುಲ್ ರಹಿಮಾನ್ ಯುನಿಕ್ ಅದೇ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಾಗ ಹೊಂಡಕ್ಕೆ ಬಿದ್ದು ಅವರ ದ್ವಿಚಕ್ರ ವಾಹನ ಪಲ್ಟಿಯಾಗಿ, ಅವರು ಗಾಯಗೊಂಡಿದ್ದರು. ಗುತ್ತಿಗೆದಾರ ಸಂಸ್ಥೆ ನಿರ್ವಹಿಸುತ್ತಿರುವ ಅವೈಜ್ಞಾನಿಕ ಕಾಮಗಾರಿಯೇ ಅಪಘಾತಕ್ಕೆ ಕಾರಣ ಎಂದು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.</p>.<p>ಈ ಬಗ್ಗೆ ಎಚ್ಚೆತ್ತುಕೊಂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ಗಳು, ಕೆಎನ್ಆರ್ ಸಂಸ್ಥೆಯ ಎಂಜಿನಿಯರ್ಗಳು, ಅಧಿಕಾರಿಗಳು ಕಾಮಗಾರಿ ನಡೆಸಿ ಹೊಂಡ-ಗುಂಡಿಗಳನ್ನು ಮುಚ್ಚಿದ್ದಾರೆ. ಅವರ ಮನವಿಯ ಬಳಿಕ ಅಬ್ದುಲ್ ರಹಿಮಾನ್ ಅವರು ಪೊಲೀಸರಿಗೆ ನೀಡಿದ ದೂರನ್ನು ಹಿಂಪಡೆದುಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>