<p><strong>ಮಂಗಳೂರು</strong>: ‘ಜಾತ್ಯತೀತ ಪದವನ್ನು ಸಂವಿಧಾನದಿಂದ ತೆಗೆಯಲಾಗದು’ ಎಂದು ಅಲಹಾಬಾದ್ ಹೈಕೋರ್ಟ್ನ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಗೋವಿಂದ ಮಾಥುರ್ ಅಭಿಪ್ರಾಯಪಟ್ಟರು.</p><p>ಸಮದರ್ಶಿ ವೇದಿಕೆ, ‘ಹೊಸತು’ ಪತ್ರಿಕೆ ಮತ್ತು ಎಂ.ಎಸ್ ಕೃಷ್ಣ ಸ್ಮಾರಕ ಟ್ರಸ್ಟ್ ಇಲ್ಲಿ ಭಾನುವಾರ ಆಯೋಜಿಸಿದ್ದ ಬಿ.ವಿ. ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಾಮಾಜಿಕ ಮತ್ತು ಸಾಂವಿಧಾನಿಕ ನೈತಿಕತೆಗಳ ಸಮತೋಲನ’ ಕುರಿತು ಮಾತನಾಡಿ, ಸಭಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದರು.</p><p>‘ಜಾತ್ಯತೀತ ಪರಿಕಲ್ಪನೆ ಭಾರತದ ಸಂವಿಧಾನದ ಒಂದು ಭಾಗ. ಬಹುಸಂಖ್ಯಾತರಿಂದ ಬೇಡಿಕೆ ಎಂಬ ಕಾರಣಕ್ಕೆ ತೆಗೆದುಹಾಕಲು ಸಾಧ್ಯವಿಲ್ಲ. ಎಲ್ಲವನ್ನೂ ನ್ಯಾಯಾಂಗದ ಹೆಗಲಿಗೆ ಹೊರಿಸಿ ಸುಮ್ಮನಿರುವ ಬದಲು ಜಾಗೃತ ಸಮಾಜ ಈ ಬಗ್ಗೆ ಎಚ್ಚರದಿಂದ ಇರಬೇಕು’ ಎಂದು ಮಾಥುರ್ ಹೇಳಿದರು.</p><p>‘ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಯಾವ ಪ್ರಕ್ರಿಯೆಗಳಿಗೂ ಆಸ್ಪದ ನೀಡಬಾರದು. ಸಾಮಾಜಿಕ ಮತ್ತು ರಾಜಕೀಯ ಗುಂಪುಗಳು, ಸಣ್ಣ ಸಣ್ಣ ಕಾರ್ಯಕ್ರಮಗಳಲ್ಲಿ ಒಂದಾಗುವ ಜನಸಮುದಾಯ ಈ ಬಗ್ಗೆ ಯೋಚಿಸಿ, ಕಾರ್ಯತತ್ಪರರಾಗಬೇಕು’ ಎಂದರು.</p><p>‘ಸಾಮಾಜಿಕವಾಗಿ ಭಿನ್ನಮತ ಈಗ ದೇಶದಲ್ಲಿ ಉಚ್ಛ್ರಾಯ ಹಂತ ತಲುಪಿದೆ. ದಕ್ಷಿಣ ಭಾರತದಲ್ಲಿ ಅದರ ತೀವ್ರತೆ ಉತ್ತರ ಭಾರತದಷ್ಟು ಇಲ್ಲ’ ಎಂದು ಮೂಲತಃ ರಾಜಸ್ಥಾನದ ಮಾಥುರ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ‘ಜಾತ್ಯತೀತ ಪದವನ್ನು ಸಂವಿಧಾನದಿಂದ ತೆಗೆಯಲಾಗದು’ ಎಂದು ಅಲಹಾಬಾದ್ ಹೈಕೋರ್ಟ್ನ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಗೋವಿಂದ ಮಾಥುರ್ ಅಭಿಪ್ರಾಯಪಟ್ಟರು.</p><p>ಸಮದರ್ಶಿ ವೇದಿಕೆ, ‘ಹೊಸತು’ ಪತ್ರಿಕೆ ಮತ್ತು ಎಂ.ಎಸ್ ಕೃಷ್ಣ ಸ್ಮಾರಕ ಟ್ರಸ್ಟ್ ಇಲ್ಲಿ ಭಾನುವಾರ ಆಯೋಜಿಸಿದ್ದ ಬಿ.ವಿ. ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಾಮಾಜಿಕ ಮತ್ತು ಸಾಂವಿಧಾನಿಕ ನೈತಿಕತೆಗಳ ಸಮತೋಲನ’ ಕುರಿತು ಮಾತನಾಡಿ, ಸಭಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದರು.</p><p>‘ಜಾತ್ಯತೀತ ಪರಿಕಲ್ಪನೆ ಭಾರತದ ಸಂವಿಧಾನದ ಒಂದು ಭಾಗ. ಬಹುಸಂಖ್ಯಾತರಿಂದ ಬೇಡಿಕೆ ಎಂಬ ಕಾರಣಕ್ಕೆ ತೆಗೆದುಹಾಕಲು ಸಾಧ್ಯವಿಲ್ಲ. ಎಲ್ಲವನ್ನೂ ನ್ಯಾಯಾಂಗದ ಹೆಗಲಿಗೆ ಹೊರಿಸಿ ಸುಮ್ಮನಿರುವ ಬದಲು ಜಾಗೃತ ಸಮಾಜ ಈ ಬಗ್ಗೆ ಎಚ್ಚರದಿಂದ ಇರಬೇಕು’ ಎಂದು ಮಾಥುರ್ ಹೇಳಿದರು.</p><p>‘ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಯಾವ ಪ್ರಕ್ರಿಯೆಗಳಿಗೂ ಆಸ್ಪದ ನೀಡಬಾರದು. ಸಾಮಾಜಿಕ ಮತ್ತು ರಾಜಕೀಯ ಗುಂಪುಗಳು, ಸಣ್ಣ ಸಣ್ಣ ಕಾರ್ಯಕ್ರಮಗಳಲ್ಲಿ ಒಂದಾಗುವ ಜನಸಮುದಾಯ ಈ ಬಗ್ಗೆ ಯೋಚಿಸಿ, ಕಾರ್ಯತತ್ಪರರಾಗಬೇಕು’ ಎಂದರು.</p><p>‘ಸಾಮಾಜಿಕವಾಗಿ ಭಿನ್ನಮತ ಈಗ ದೇಶದಲ್ಲಿ ಉಚ್ಛ್ರಾಯ ಹಂತ ತಲುಪಿದೆ. ದಕ್ಷಿಣ ಭಾರತದಲ್ಲಿ ಅದರ ತೀವ್ರತೆ ಉತ್ತರ ಭಾರತದಷ್ಟು ಇಲ್ಲ’ ಎಂದು ಮೂಲತಃ ರಾಜಸ್ಥಾನದ ಮಾಥುರ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>