‘ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಈ ಸಂದರ್ಭದಲ್ಲಿ ಕರ್ತವ್ಯಕ್ಕೆ ತೆರಳುವ ಪೊಲೀಸರ ಸುರಕ್ಷತೆಯೂ ಮುಖ್ಯ. ಕೆಲವು ಆಯುರ್ವೇದ ತಜ್ಞರು, ಕೋವಿಡ್ನಿಂದ ದೂರವಿರಲು ಸ್ಟೀಮ್ ಸಹಕಾರಿ ಎಂದು ಸಲಹೆ ನೀಡಿದ್ದರು. ಅದನ್ನು ಪರಿಗಣಿಸಿ, ಸ್ಟೀಮ್ ವ್ಯವಸ್ಥೆಗೊಳಿಸಿದ್ದೇವೆ. ಜತೆಗೆ ಗಾರ್ಗಲ್ ಮಾಡಲು ಉಪ್ಪು ನೀರು, ಕುಡಿಯಲು ಗಿಡಮೂಲಿಕೆ ಕಷಾಯ, ಬಿಸಿ ನೀರು ಇಡಲಾಗಿದೆ. ನಮ್ಮ ಸಿಬ್ಬಂದಿ ಮಾತ್ರವಲ್ಲ, ಠಾಣೆಗೆ ಬರುವ ದೂರುದಾರರು ಸಹ ಸ್ಟೀಮ್ ವ್ಯವಸ್ಥೆಯ ಪ್ರಯೋಜನ ಪಡೆಯಲು ಅವಕಾಶ ಕಲ್ಪಿಸಲಾಗಿದೆ’ ಎನ್ನುತ್ತಾರೆ ಇನ್ಸ್ಪೆಕ್ಟರ್ ಜ್ಯೋತಿರ್ಲಿಂಗ ಹೊಣಕಟ್ಟಿ.