<p><strong>ಮಂಗಳೂರು</strong>: ಸಾಹಿತಿ ಸುನೀತಾ ಎಂ. ಶೆಟ್ಟಿ ದತ್ತಿನಿಧಿ ಪ್ರಾಯೋಜಿತ ತೌಳವ ಸಿರಿ ಪ್ರಶಸ್ತಿಯನ್ನು ಲೇಖಕಿ ಜಯಂತಿ ಎಸ್. ಬಂಗೇರ ಅವರಿಗೆ ಶನಿವಾರ ಇಲ್ಲಿ ಪ್ರದಾನ ಮಾಡಲಾಯಿತು.</p>.<p>ಕರಾವಳಿ ಲೇಖಕಿಯರ– ವಾಚಕಿಯರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್, ಹಿಂದೆ ಮಹಿಳಾ ಬರವಣಿಗೆಗೆ ಅಷ್ಟೊಂದು ಪ್ರೋತ್ಸಾಹ ಇರಲಿಲ್ಲ. ಆ ಕಾಲದ ಅನೇಕ ಸವಾಲುಗಳನ್ನು ಮೆಟ್ಟಿನಿಂತು ಸಾಹಿತ್ಯ ಕ್ಷೇತ್ರಕ್ಕೆ ಅನೇಕ ಮಹಿಳೆಯರು ಕೊಡುಗೆ ನೀಡಿದ್ದಾರೆ. ಅಂತಹ ವಾತಾವರಣದಲ್ಲಿ ಸಾಹಿತ್ಯ, ನಾಟಕಗಳ ಬರವಣಿಗೆ ಜೊತೆಗೆ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡು ಯಶಸ್ಸು ಕಂಡವರು ಜಯಂತಿ ಬಂಗೇರ ಎಂದರು.</p>.<p>ಪತ್ರಿಕೆ ಕಟ್ಟುವುದು ಸುಲಭದ ಮಾತಲ್ಲ. ಅದರಲ್ಲೂ ತುಳು ಪತ್ರಿಕೆಗೆ ಸೀಮಿತ ಓದುಗರು ಇರುತ್ತಾರೆ. ಈ ನಡುವೆ ಪತ್ರಿಕೆ ಪ್ರಸರಣ, ಜಾಹೀರಾತು ಸಂಗ್ರಹ, ರಾಜ್ಯ ಮಟ್ಟದ ಪತ್ರಿಕೆಗಳ ಸ್ಪರ್ಧೆ ಇಂತಹ ಸವಾಲುಗಳನ್ನು ಮೀರಿ ಪತ್ರಿಕೆ ನಡೆಸುತ್ತಿರುವುದು ದೊಡ್ಡ ಸಾಧನೆ ಎಂದು ಹೇಳಿದರು.</p>.<p>ಪ್ರಶಸ್ತಿ ಸ್ವೀಕರಿಸಿದ ಜಯಂತಿ ಎಸ್. ಬಂಗೇರ ಮಾತನಾಡಿ, ‘ಬರವಣಿಗೆಯ ಆರಂಭದಲ್ಲಿ ಅನೇಕರು ನನ್ನದೇ ಬರವಣಿಗೆ ಹೌದಾ ಎಂದು ಸಂಶಯಿಸಿದ್ದರು. ಅಂತಹ ಟೀಕೆಗಳನ್ನು ಮೀರಿ, ಸ್ವ ಪ್ರಯತ್ನದಿಂದ ಈ ಹಂತಕ್ಕೆ ತಲುಪಿದ ಸಮಾಧಾನವಿದೆ. ನಂತರದಲ್ಲಿ ನಾಟಕ ಬರವಣಿಗೆ, ನಟನೆ ಜೊತೆಗೆ ‘ಉಡಲ್’ ಪತ್ರಿಕೆ ಮುನ್ನಡೆಸುವ ಕಾರ್ಯ ಎಲ್ಲವನ್ನೂ ಹಿತೈಷಿಗಳು ಪ್ರೋತ್ಸಾಹಿಸಿದರು. ಪ್ರಶಸ್ತಿಗಳು ಬರವಣಿಗೆಗೆ ಉತ್ತೇಜನ ನೀಡಿದವು’ ಎಂದರು.</p>.<p>ಸಾಹಿತಿ ಮೀನಾಕ್ಷಿ ರಾಮಚಂದ್ರ ಮಾತನಾಡಿ, ಸ್ತ್ರೀ ಮನಸ್ಸು ಮಾಡಿದರೆ, ಎಲ್ಲ ಅಡೆತಡೆಗಳನ್ನು ಮೀರಿ ಎತ್ತರಕ್ಕೆ ಏರಬಲ್ಲಳು. ದೃಢತೆಯೇ ಆಕೆಯ ಯಶಸ್ಸಿನ ಮೆಟ್ಟಿಲು’ ಎಂದರು. ಕರಾವಳಿ ಲೇಖಕಿಯರ– ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಕ್ಷಯ ಆರ್ ಶೆಟ್ಟಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ಸಾಹಿತಿ ಸುನೀತಾ ಎಂ. ಶೆಟ್ಟಿ ದತ್ತಿನಿಧಿ ಪ್ರಾಯೋಜಿತ ತೌಳವ ಸಿರಿ ಪ್ರಶಸ್ತಿಯನ್ನು ಲೇಖಕಿ ಜಯಂತಿ ಎಸ್. ಬಂಗೇರ ಅವರಿಗೆ ಶನಿವಾರ ಇಲ್ಲಿ ಪ್ರದಾನ ಮಾಡಲಾಯಿತು.</p>.<p>ಕರಾವಳಿ ಲೇಖಕಿಯರ– ವಾಚಕಿಯರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್, ಹಿಂದೆ ಮಹಿಳಾ ಬರವಣಿಗೆಗೆ ಅಷ್ಟೊಂದು ಪ್ರೋತ್ಸಾಹ ಇರಲಿಲ್ಲ. ಆ ಕಾಲದ ಅನೇಕ ಸವಾಲುಗಳನ್ನು ಮೆಟ್ಟಿನಿಂತು ಸಾಹಿತ್ಯ ಕ್ಷೇತ್ರಕ್ಕೆ ಅನೇಕ ಮಹಿಳೆಯರು ಕೊಡುಗೆ ನೀಡಿದ್ದಾರೆ. ಅಂತಹ ವಾತಾವರಣದಲ್ಲಿ ಸಾಹಿತ್ಯ, ನಾಟಕಗಳ ಬರವಣಿಗೆ ಜೊತೆಗೆ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡು ಯಶಸ್ಸು ಕಂಡವರು ಜಯಂತಿ ಬಂಗೇರ ಎಂದರು.</p>.<p>ಪತ್ರಿಕೆ ಕಟ್ಟುವುದು ಸುಲಭದ ಮಾತಲ್ಲ. ಅದರಲ್ಲೂ ತುಳು ಪತ್ರಿಕೆಗೆ ಸೀಮಿತ ಓದುಗರು ಇರುತ್ತಾರೆ. ಈ ನಡುವೆ ಪತ್ರಿಕೆ ಪ್ರಸರಣ, ಜಾಹೀರಾತು ಸಂಗ್ರಹ, ರಾಜ್ಯ ಮಟ್ಟದ ಪತ್ರಿಕೆಗಳ ಸ್ಪರ್ಧೆ ಇಂತಹ ಸವಾಲುಗಳನ್ನು ಮೀರಿ ಪತ್ರಿಕೆ ನಡೆಸುತ್ತಿರುವುದು ದೊಡ್ಡ ಸಾಧನೆ ಎಂದು ಹೇಳಿದರು.</p>.<p>ಪ್ರಶಸ್ತಿ ಸ್ವೀಕರಿಸಿದ ಜಯಂತಿ ಎಸ್. ಬಂಗೇರ ಮಾತನಾಡಿ, ‘ಬರವಣಿಗೆಯ ಆರಂಭದಲ್ಲಿ ಅನೇಕರು ನನ್ನದೇ ಬರವಣಿಗೆ ಹೌದಾ ಎಂದು ಸಂಶಯಿಸಿದ್ದರು. ಅಂತಹ ಟೀಕೆಗಳನ್ನು ಮೀರಿ, ಸ್ವ ಪ್ರಯತ್ನದಿಂದ ಈ ಹಂತಕ್ಕೆ ತಲುಪಿದ ಸಮಾಧಾನವಿದೆ. ನಂತರದಲ್ಲಿ ನಾಟಕ ಬರವಣಿಗೆ, ನಟನೆ ಜೊತೆಗೆ ‘ಉಡಲ್’ ಪತ್ರಿಕೆ ಮುನ್ನಡೆಸುವ ಕಾರ್ಯ ಎಲ್ಲವನ್ನೂ ಹಿತೈಷಿಗಳು ಪ್ರೋತ್ಸಾಹಿಸಿದರು. ಪ್ರಶಸ್ತಿಗಳು ಬರವಣಿಗೆಗೆ ಉತ್ತೇಜನ ನೀಡಿದವು’ ಎಂದರು.</p>.<p>ಸಾಹಿತಿ ಮೀನಾಕ್ಷಿ ರಾಮಚಂದ್ರ ಮಾತನಾಡಿ, ಸ್ತ್ರೀ ಮನಸ್ಸು ಮಾಡಿದರೆ, ಎಲ್ಲ ಅಡೆತಡೆಗಳನ್ನು ಮೀರಿ ಎತ್ತರಕ್ಕೆ ಏರಬಲ್ಲಳು. ದೃಢತೆಯೇ ಆಕೆಯ ಯಶಸ್ಸಿನ ಮೆಟ್ಟಿಲು’ ಎಂದರು. ಕರಾವಳಿ ಲೇಖಕಿಯರ– ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಕ್ಷಯ ಆರ್ ಶೆಟ್ಟಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>