ಮನೆಗೆ ತೆರಳಿದ್ದ ಪ್ರಮೀತ್, ರಾತ್ರಿ ನಿದ್ರಿಸುತ್ತಿದ್ದ. ಮನೆಯ ಅಂಗಳಕ್ಕೆ ಹೋದ ಸುಹಾಸ್, ಸಾಗರ್ ಮತ್ತು ಪ್ರಮೋದ್ ಹೊರಬರುವಂತೆ ಕರೆದಿದ್ದಾರೆ. ಎದ್ದುಬಂದ ಪ್ರಮೀತ್ ಮೇಲೆ ಕಲ್ಲು ಮತ್ತು ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಆತನ ಮನೆಯವರು ಕಿರುಚಿಕೊಳ್ಳುತ್ತಿದ್ದಂತೆ ಸ್ಥಳದಿಂದ ಓಡಿಹೋಗಿದ್ದರು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದರು. ಪ್ರಮೀತ್ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.