<p><strong>ವಿಟ್ಲ:</strong> ಬೀಡಿ ಕಾರ್ಮಿಕರಿಗೆ 2018ರಿಂದ 2024ರವರೆಗೆ ಬಾಕಿ ಇರುವ ಕನಿಷ್ಠ ವೇತನಮ, ಕನಿಷ್ಠ ಕೂಲಿ ಮತ್ತು ತುಟ್ಟಿಭತ್ತೆ ನೀಡುವಂತೆ ಆಗ್ರಹಿಸಿ ವಿಟ್ಲ ನೆತ್ರಕೆರೆ ಗಣೇಶ್ ಬೀಡಿ-ಎಸ್ಕೆಎಚ್ಐ ಸಂಸ್ಥೆಯ ಮುಂಭಾಗ ದ.ಕ ಜಿಲ್ಲಾ ಬೀಡಿ ಮತ್ತು ಜನರಲ್ ಲೇಬರ್ ಯೂನಿಯನ್ ನೇತೃತ್ವದಲ್ಲಿ ಬೀಡಿ ಕಾರ್ಮಿಕರು ಹಕ್ಕೊತ್ತಾಯ ಚಳವಳಿ ನಡೆಸಿದರು.</p>.<p>ಎಸ್.ಕೆ. ಬೀಡಿ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಸೀತಾರಾಮ ಬೇರಿಂಜ ಮಾತನಾಡಿ, ಬೀಡಿ ಮಾಲೀಕರು ಬಾಕಿ ಇರಿಸಿದ 6 ವರ್ಷಗಳ ಕನಿಷ್ಠ ವೇತನವನ್ನು ಜೂನ್ ತಿಂಗಳಿನಿಂದಲೇ ಪಾವತಿಸುತ್ತೇವೆಂದು ಒಪ್ಪಿ ಇದೀಗ 5 ತಿಂಗಳು ಕಳೆದರೂ ಸಂಬಂಧಿಸಿದ ಮೊತ್ತವನ್ನು ಪಾವತಿಸುತ್ತಿಲ್ಲ ಎಂದರು.</p>.<p>ಪ್ರತಿಭಟನಕಾರರನ್ನು ಉದ್ದೇಶಿಸಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್, ಎಸ್ಕೆ ಬೀಡಿ ವರ್ಕರ್ಸ್ ಫೆಡರೇಷನ್ ಉಪಾಧ್ಯಕ್ಷ ಬಿ.ಎಂ. ಹಸೈನಾರ್, ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಷಸ್ ಕಾರ್ಯದರ್ಶಿ ಸುರೇಶ್ ಕುಮಾರ್ ಮಾತನಾಡಿದರು.</p>.<p>ಪ್ರತಿಭಟನೆಗೂ ಮುನ್ನ ಕಾರ್ಯಕರ್ತರು ವಿಟ್ಲ ನೇತ್ರಕೆರೆ ಗಣೇಶ್ ಬೀಡಿ ಡಿಪೊದವರೆಗೆ ಮೆರವಣಿಗೆ ನಡೆಸಿದರು. ನೇತೃತ್ವವನ್ನು ಎಐಟಿಯುಸಿ ಮುಂದಾಳು ರಾಮ ಮುಗೇರ, ಒ.ಕೃಷ್ಣ, ಚಂದ್ರಶೇಖರ, ಆನಂದ, ನಯನ, ತೆರೆಸಾ, ರವೀಂದ್ರ, ಸೀತಾರಾಮ ಕನ್ಯಾನ ವಹಿಸಿದ್ದರು.</p>.<p>ಎಐಟಿಯುಸಿ ಮುಖಂಡ ಸೀತರಾಮ ಕಡಂಬು ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಟ್ಲ:</strong> ಬೀಡಿ ಕಾರ್ಮಿಕರಿಗೆ 2018ರಿಂದ 2024ರವರೆಗೆ ಬಾಕಿ ಇರುವ ಕನಿಷ್ಠ ವೇತನಮ, ಕನಿಷ್ಠ ಕೂಲಿ ಮತ್ತು ತುಟ್ಟಿಭತ್ತೆ ನೀಡುವಂತೆ ಆಗ್ರಹಿಸಿ ವಿಟ್ಲ ನೆತ್ರಕೆರೆ ಗಣೇಶ್ ಬೀಡಿ-ಎಸ್ಕೆಎಚ್ಐ ಸಂಸ್ಥೆಯ ಮುಂಭಾಗ ದ.ಕ ಜಿಲ್ಲಾ ಬೀಡಿ ಮತ್ತು ಜನರಲ್ ಲೇಬರ್ ಯೂನಿಯನ್ ನೇತೃತ್ವದಲ್ಲಿ ಬೀಡಿ ಕಾರ್ಮಿಕರು ಹಕ್ಕೊತ್ತಾಯ ಚಳವಳಿ ನಡೆಸಿದರು.</p>.<p>ಎಸ್.ಕೆ. ಬೀಡಿ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಸೀತಾರಾಮ ಬೇರಿಂಜ ಮಾತನಾಡಿ, ಬೀಡಿ ಮಾಲೀಕರು ಬಾಕಿ ಇರಿಸಿದ 6 ವರ್ಷಗಳ ಕನಿಷ್ಠ ವೇತನವನ್ನು ಜೂನ್ ತಿಂಗಳಿನಿಂದಲೇ ಪಾವತಿಸುತ್ತೇವೆಂದು ಒಪ್ಪಿ ಇದೀಗ 5 ತಿಂಗಳು ಕಳೆದರೂ ಸಂಬಂಧಿಸಿದ ಮೊತ್ತವನ್ನು ಪಾವತಿಸುತ್ತಿಲ್ಲ ಎಂದರು.</p>.<p>ಪ್ರತಿಭಟನಕಾರರನ್ನು ಉದ್ದೇಶಿಸಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್, ಎಸ್ಕೆ ಬೀಡಿ ವರ್ಕರ್ಸ್ ಫೆಡರೇಷನ್ ಉಪಾಧ್ಯಕ್ಷ ಬಿ.ಎಂ. ಹಸೈನಾರ್, ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಷಸ್ ಕಾರ್ಯದರ್ಶಿ ಸುರೇಶ್ ಕುಮಾರ್ ಮಾತನಾಡಿದರು.</p>.<p>ಪ್ರತಿಭಟನೆಗೂ ಮುನ್ನ ಕಾರ್ಯಕರ್ತರು ವಿಟ್ಲ ನೇತ್ರಕೆರೆ ಗಣೇಶ್ ಬೀಡಿ ಡಿಪೊದವರೆಗೆ ಮೆರವಣಿಗೆ ನಡೆಸಿದರು. ನೇತೃತ್ವವನ್ನು ಎಐಟಿಯುಸಿ ಮುಂದಾಳು ರಾಮ ಮುಗೇರ, ಒ.ಕೃಷ್ಣ, ಚಂದ್ರಶೇಖರ, ಆನಂದ, ನಯನ, ತೆರೆಸಾ, ರವೀಂದ್ರ, ಸೀತಾರಾಮ ಕನ್ಯಾನ ವಹಿಸಿದ್ದರು.</p>.<p>ಎಐಟಿಯುಸಿ ಮುಖಂಡ ಸೀತರಾಮ ಕಡಂಬು ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>