<p><strong>ಮೂಲ್ಕಿ: </strong>ಹಳೆಯಂಗಡಿ ಗ್ರಾಮ ಪಂಚಾಯಿತಿಯ ಹೆಚ್ಚು ಜನ ವಸತಿ ಪ್ರದೇಶವಾಗಿರುವ ಇಂದಿರಾನಗರದಲ್ಲಿ ಕೆಲವು ದಿನಗಳಿಂದ ನೀರಿನ ಸಮಸ್ಯೆ ತೀವ್ರವಾಗಿದ್ದು, ನೀರು ಪೂರೈಸಲು ಕ್ರಮಕೈಗೊಳ್ಳಬೇಕು’ ಎಂದು ಸಸ್ಥಳೀಯ ನಿವಾಸಿಗರು ಪಂಚಾಯಿತಿ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಆಗ್ರಹಿಸಿದರು.</p>.<p>‘ಕುಡಿಯುವ ಬಳಕೆ ಸೇರಿದಂತೆ ಸಹಿತ ಎಲ್ಲದಕ್ಕೂ ಪಂಚಾಯಿತಿ ಪೂರೈಸುವ ನೀರೇ ಇಲ್ಲಿನ ಜನರಿಗೆ ಆಸರೆಯಾಗಿದೆ. ಆದರೆ ಕೆಲವು ದಿನಗಳಿಂದ ಸೂಕ್ತ ಸಮಯದಲ್ಲಿ ನೀರನ್ನು ಬಿಡದೇ ಪಂಪ್ ಚಾಲನಾ ಸಿಬ್ಬಂದಿ ನಿರಾಸಕ್ತಿಯಿಂದ ವರ್ತಿಸುತ್ತಿದ್ದಾರೆ. ಈ ಬಗ್ಗೆ ಕೂಡಲೇ ಆಡಳಿತಾಧಿಕಾರಿ, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಜನರು ಆಗ್ರಹಿಸಿದರು.</p>.<p>ಕಾರ್ಯದರ್ಶಿ ಶ್ರೀಶೈಲ ಪ್ರತಿಕ್ರಿಯಿಸಿ, ‘ ಅನ್ಯ ಕಾರ್ಯ ನಿಮಿತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಗಳೂರಿಗೆ ತೆರಳಿದ್ದರಿಂದ ಅವರ ಗಮನಕ್ಕೆ ತಂದು ಕೂಡಲೇ ಪರಿಹಾರ ನೀಡಲು ಪ್ರಯತ್ನ ನಡೆಸುತ್ತೇನೆ. ಪಂಚಾಯಿತಿಯಲ್ಲಿ ಇದೀಗ ಆಡಳಿತಾಧಿಕಾರಿಗಳ ನೇಮಕವಾಗಿರುವುದರಿಂದ ಹಾಗೂ ನೀರು ಸರಬರಾಜು ಸಮಿತಿಯ ಜವಾಬ್ದಾರಿ ತಡೆ ಹಿಡಿದಿರುವುದರಿಂದ ಈ ಸಮಸ್ಯೆ ಉಂಟಾಗಿದೆ’ ಎಂದರು. ತುರ್ತು ಕ್ರಮದ ಭರವಸೆಯಂತೆ ಜನರು ಹಿಂದುರಿಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಲ್ಕಿ: </strong>ಹಳೆಯಂಗಡಿ ಗ್ರಾಮ ಪಂಚಾಯಿತಿಯ ಹೆಚ್ಚು ಜನ ವಸತಿ ಪ್ರದೇಶವಾಗಿರುವ ಇಂದಿರಾನಗರದಲ್ಲಿ ಕೆಲವು ದಿನಗಳಿಂದ ನೀರಿನ ಸಮಸ್ಯೆ ತೀವ್ರವಾಗಿದ್ದು, ನೀರು ಪೂರೈಸಲು ಕ್ರಮಕೈಗೊಳ್ಳಬೇಕು’ ಎಂದು ಸಸ್ಥಳೀಯ ನಿವಾಸಿಗರು ಪಂಚಾಯಿತಿ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಆಗ್ರಹಿಸಿದರು.</p>.<p>‘ಕುಡಿಯುವ ಬಳಕೆ ಸೇರಿದಂತೆ ಸಹಿತ ಎಲ್ಲದಕ್ಕೂ ಪಂಚಾಯಿತಿ ಪೂರೈಸುವ ನೀರೇ ಇಲ್ಲಿನ ಜನರಿಗೆ ಆಸರೆಯಾಗಿದೆ. ಆದರೆ ಕೆಲವು ದಿನಗಳಿಂದ ಸೂಕ್ತ ಸಮಯದಲ್ಲಿ ನೀರನ್ನು ಬಿಡದೇ ಪಂಪ್ ಚಾಲನಾ ಸಿಬ್ಬಂದಿ ನಿರಾಸಕ್ತಿಯಿಂದ ವರ್ತಿಸುತ್ತಿದ್ದಾರೆ. ಈ ಬಗ್ಗೆ ಕೂಡಲೇ ಆಡಳಿತಾಧಿಕಾರಿ, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಜನರು ಆಗ್ರಹಿಸಿದರು.</p>.<p>ಕಾರ್ಯದರ್ಶಿ ಶ್ರೀಶೈಲ ಪ್ರತಿಕ್ರಿಯಿಸಿ, ‘ ಅನ್ಯ ಕಾರ್ಯ ನಿಮಿತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಗಳೂರಿಗೆ ತೆರಳಿದ್ದರಿಂದ ಅವರ ಗಮನಕ್ಕೆ ತಂದು ಕೂಡಲೇ ಪರಿಹಾರ ನೀಡಲು ಪ್ರಯತ್ನ ನಡೆಸುತ್ತೇನೆ. ಪಂಚಾಯಿತಿಯಲ್ಲಿ ಇದೀಗ ಆಡಳಿತಾಧಿಕಾರಿಗಳ ನೇಮಕವಾಗಿರುವುದರಿಂದ ಹಾಗೂ ನೀರು ಸರಬರಾಜು ಸಮಿತಿಯ ಜವಾಬ್ದಾರಿ ತಡೆ ಹಿಡಿದಿರುವುದರಿಂದ ಈ ಸಮಸ್ಯೆ ಉಂಟಾಗಿದೆ’ ಎಂದರು. ತುರ್ತು ಕ್ರಮದ ಭರವಸೆಯಂತೆ ಜನರು ಹಿಂದುರಿಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>