ಕಾರ್ಯದರ್ಶಿ ಶ್ರೀಶೈಲ ಪ್ರತಿಕ್ರಿಯಿಸಿ, ‘ ಅನ್ಯ ಕಾರ್ಯ ನಿಮಿತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಗಳೂರಿಗೆ ತೆರಳಿದ್ದರಿಂದ ಅವರ ಗಮನಕ್ಕೆ ತಂದು ಕೂಡಲೇ ಪರಿಹಾರ ನೀಡಲು ಪ್ರಯತ್ನ ನಡೆಸುತ್ತೇನೆ. ಪಂಚಾಯಿತಿಯಲ್ಲಿ ಇದೀಗ ಆಡಳಿತಾಧಿಕಾರಿಗಳ ನೇಮಕವಾಗಿರುವುದರಿಂದ ಹಾಗೂ ನೀರು ಸರಬರಾಜು ಸಮಿತಿಯ ಜವಾಬ್ದಾರಿ ತಡೆ ಹಿಡಿದಿರುವುದರಿಂದ ಈ ಸಮಸ್ಯೆ ಉಂಟಾಗಿದೆ’ ಎಂದರು. ತುರ್ತು ಕ್ರಮದ ಭರವಸೆಯಂತೆ ಜನರು ಹಿಂದುರಿಗಿದರು.