<p>ಮಂಗಳೂರು: ರಾಜ್ಯದಲ್ಲಿ ಆದಾಯ ತೆರಿಗೆ ಸಂಗ್ರಹ ಇಳಿಮುಖವಾಗಿದ್ದು, ಗೋವಾದಲ್ಲೂ ಈ ಪರಿಸ್ಥಿತಿ ಇದೆ ಎಂದು ಆದಾಯ ತೆರಿಗೆ ಮುಖ್ಯ ಆಯುಕ್ತ (ಬೆಂಗಳೂರು-1) ಕೆ.ಸತ್ಯನಾರಾಯಣ ಹೇಳಿದರು. <br /> <br /> ಆದಾಯ ತೆರಿಗೆ ಇಲಾಖೆ ನಗರದ ಅತ್ತಾವರದಲ್ಲಿ ಆರಂಭಿಸಿರುವ ಆದಾಯ ತೆರಿಗೆ ಸೇವಾ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. <br /> <br /> ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ 2011-12 ನೇ ಸಾಲಿನ ಬಜೆಟ್ನಲ್ಲಿ ನೀಡಿದ ವಾಗ್ದಾನದಂತೆ ದೇಶದಾದ್ಯಂತ ಆದಾಯ ತೆರಿಗೆ ಸೇವಾ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ರಾಜ್ಯದ ನಾಲ್ಕು ಕಡೆ ಸೇವಾಕೇಂದ್ರ ತೆರೆಯಲಾಗುತ್ತಿದ್ದು, ಈಗಾಗಲೇ ಬೆಂಗಳೂರಿನಲ್ಲಿ ಕಾರ್ಯಾರಂಭವಾಗಿದೆ. ಹುಬ್ಬಳ್ಳಿಯಲ್ಲಿ ಶೀಘ್ರವೇ ಸೇವಾ ಕೇಂದ್ರ ತೆರಿಗೆದಾರರ ಸೇವೆಗೆ ಸಿದ್ಧವಾಗಲಿದೆ ಎಂದು ಹೇಳಿದರು. <br /> <br /> ಆದಾಯ ತೆರಿಗೆದಾರರಿಗೆ ಒಂದೇ ಸೂರಿನಡಿ ಎಲ್ಲ ಸೇವೆಗಳು ಲಭ್ಯವಾಗಲು ಈ ರೀತಿಯ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಇದರರ್ಥ ಹೆಚ್ಚು ತೆರಿಗೆ ಪಾವತಿಸಲು ಉತ್ತೇಜಿಸುವುದಲ್ಲ. ಬದಲಿಗೆ ಅವರು ನೀಡಬೇಕಾದ ತೆರಿಗೆಯನ್ನು ಪ್ರಾಮಾಣಿಕವಾಗಿ ಸರಿಯಾದ ಸಮಯಕ್ಕೆ ಸಲ್ಲಿಸುವುದು ಎಂದು ಅವರು ವಿವರಿಸಿದರು. <br /> <br /> ಅದಾಯ ತೆರಿಗೆ ಇಲಾಖೆ ಮಾಹಿತಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ತೆರಿಗೆದಾರರಿಗೆ ಅನುಕೂಲವಾಗುವಂತೆ ಕೇಂದ್ರವನ್ನು ರೂಪಿಸಲಾಗಿದೆ. ನಾಗರಿಕರ ತೆರಿಗೆ ಪ್ರಜ್ಞೆಯನ್ನು ಜಾಗೃತಗೊಳಿಸುವುದು ಹಾಗೂ ಅದನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳುವುದು ಇದರ ಪ್ರಮುಖ ಉದ್ದೇಶ ಎಂದು ಅವರು ವಿವರಿಸಿದರು. <br /> <br /> ಆದಾಯ ತೆರಿಗೆ ಮುಖ್ಯ ಆಯುಕ್ತ (ಬೆಂಗಳೂರು 2) ಜಯಂತ್ ಕುಮಾರ್ ಹೋತಾ ಮಾತನಾಡಿ, ಆದಾಯ ತೆರಿಗೆ ಪಾವತಿ ಸಂಬಂಧ ಇಂದು ಜನರ ಧೋರಣೆ ಬದಲಾಗಿದೆ. ತೆರಿಗೆದಾರರಿಗೆ ಇಲಾಖೆ ಎಲ್ಲ ರೀತಿಯ ನೆರವು ನೀಡಲಿದೆ. ಈ ಹಿಂದೆ ಆದಾಯ ತೆರಿಗೆ ಪಾವತಿ ಬಗ್ಗೆ ಜನರಿಗೆ ಭಯ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕರಾವಳಿ ಭಾಗದ ಜನ ಶಿಕ್ಷಣದಲ್ಲಿ ಪ್ರಗತಿ ಸಾಧಿಸಿರುವುದು ಮತ್ತು ಇಲ್ಲಿನ ಜನರಿಗೆ ತೆರಿಗೆ ಪಾವತಿ ಬಗ್ಗೆ ಅರಿವಿರುವುದು ಈ ರೀತಿಯ ಕೇಂದ್ರಗಳಿಗೆ ನೆರವಾಗಲಿದೆ ಎಂದು ಹೇಳಿದರು. <br /> <br /> ಇಂಡಿಯನ್ ಓವರ್ಸೀಸ್ ಬ್ಯಾಂಕ್ ಸಿಎಂಡಿ ಎಂ.ನರೇಂದ್ರ ಮಾತನಾಡಿ, ಬ್ಯಾಂಕ್ ದೇಶದಾದ್ಯಂತ ಶಾಖೆಗಳನ್ನು ತೆರೆಯುತ್ತಿದ್ದು, ಆದಾಯತೆರಿಗೆ ಸೇವಾ ಕೇಂದ್ರದಲ್ಲಿ ಬ್ಯಾಂಕ್ನ ಎಟಿಎಂ ಅನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು. <br /> <br /> ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಅನಂತಕೃಷ್ಣ ಮಾತನಾಡಿ, ಆದಾಯ ತೆರಿಗೆ ಇಲಾಖೆ ಎಂದರೆ ನೋಟಿಸ್ ಜಾರಿ ಮಾಡುವುದು, ದಾಳಿ ನಡೆಸುವುದಕ್ಕೆ ಮಾತ್ರ ಸೀಮಿತವಾದ ಇಲಾಖೆ ಎಂಬ ಮನೋಭಾವನೆ ಇತ್ತು. ಆದರೆ ಈ ಇಲಾಖೆಯೂ ಸಹ ಸಾಮಾಜಿಕ ಸೇವೆಗಳನ್ನು ಮಾಡುವಲ್ಲಿ ಮುಂದಾಗಲಿದೆ ಎಂಬುದನ್ನು ತೋರಿಸಿದೆ ಎಂದು ಹೇಳಿದರು.<br /> <br /> ಗೋವಾ ರಾಜ್ಯ ಮುಖ್ಯ ಆದಾಯ ತೆರಿಗೆ ಆಯುಕ್ತ ದಿಲೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಆದಾಯ ತೆರಿಗೆ ಮಂಗಳೂರು ವಿಭಾಗದ ಆಯುಕ್ತ ಡಾ.ಬಿ.ಎಸ್.ಎನ್.ಪ್ರಸಾದ್ ಇದ್ದರು. <br /> <br /> ಸಮಾರಂಭದಲ್ಲಿ ಕೆಸಿಸಿಐ ಅಧ್ಯಕ್ಷೆ ಲತಾ ಆರ್.ಕಿಣಿ, ಭಾರತೀಯ ಲೆಕ್ಕಪರಿಶೋಧಕರ ಸಂಘ ಮಂಗಳೂರು ಚಾಪ್ಟರ್ನ ಮುರಳಿ ಮೋಹನ್, ಉಡುಪಿ ಚಾಪ್ಟರ್ನ ವೈ.ಗಣೇಶ್, ಆದಾಯ ತೆರಿಗೆ ನೌಕರರ ಸಂಘ ಪ್ರಧಾನ ಕಾರ್ಯದರ್ಶಿ ವಿನೋದ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು: ರಾಜ್ಯದಲ್ಲಿ ಆದಾಯ ತೆರಿಗೆ ಸಂಗ್ರಹ ಇಳಿಮುಖವಾಗಿದ್ದು, ಗೋವಾದಲ್ಲೂ ಈ ಪರಿಸ್ಥಿತಿ ಇದೆ ಎಂದು ಆದಾಯ ತೆರಿಗೆ ಮುಖ್ಯ ಆಯುಕ್ತ (ಬೆಂಗಳೂರು-1) ಕೆ.ಸತ್ಯನಾರಾಯಣ ಹೇಳಿದರು. <br /> <br /> ಆದಾಯ ತೆರಿಗೆ ಇಲಾಖೆ ನಗರದ ಅತ್ತಾವರದಲ್ಲಿ ಆರಂಭಿಸಿರುವ ಆದಾಯ ತೆರಿಗೆ ಸೇವಾ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. <br /> <br /> ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ 2011-12 ನೇ ಸಾಲಿನ ಬಜೆಟ್ನಲ್ಲಿ ನೀಡಿದ ವಾಗ್ದಾನದಂತೆ ದೇಶದಾದ್ಯಂತ ಆದಾಯ ತೆರಿಗೆ ಸೇವಾ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ರಾಜ್ಯದ ನಾಲ್ಕು ಕಡೆ ಸೇವಾಕೇಂದ್ರ ತೆರೆಯಲಾಗುತ್ತಿದ್ದು, ಈಗಾಗಲೇ ಬೆಂಗಳೂರಿನಲ್ಲಿ ಕಾರ್ಯಾರಂಭವಾಗಿದೆ. ಹುಬ್ಬಳ್ಳಿಯಲ್ಲಿ ಶೀಘ್ರವೇ ಸೇವಾ ಕೇಂದ್ರ ತೆರಿಗೆದಾರರ ಸೇವೆಗೆ ಸಿದ್ಧವಾಗಲಿದೆ ಎಂದು ಹೇಳಿದರು. <br /> <br /> ಆದಾಯ ತೆರಿಗೆದಾರರಿಗೆ ಒಂದೇ ಸೂರಿನಡಿ ಎಲ್ಲ ಸೇವೆಗಳು ಲಭ್ಯವಾಗಲು ಈ ರೀತಿಯ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಇದರರ್ಥ ಹೆಚ್ಚು ತೆರಿಗೆ ಪಾವತಿಸಲು ಉತ್ತೇಜಿಸುವುದಲ್ಲ. ಬದಲಿಗೆ ಅವರು ನೀಡಬೇಕಾದ ತೆರಿಗೆಯನ್ನು ಪ್ರಾಮಾಣಿಕವಾಗಿ ಸರಿಯಾದ ಸಮಯಕ್ಕೆ ಸಲ್ಲಿಸುವುದು ಎಂದು ಅವರು ವಿವರಿಸಿದರು. <br /> <br /> ಅದಾಯ ತೆರಿಗೆ ಇಲಾಖೆ ಮಾಹಿತಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ತೆರಿಗೆದಾರರಿಗೆ ಅನುಕೂಲವಾಗುವಂತೆ ಕೇಂದ್ರವನ್ನು ರೂಪಿಸಲಾಗಿದೆ. ನಾಗರಿಕರ ತೆರಿಗೆ ಪ್ರಜ್ಞೆಯನ್ನು ಜಾಗೃತಗೊಳಿಸುವುದು ಹಾಗೂ ಅದನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳುವುದು ಇದರ ಪ್ರಮುಖ ಉದ್ದೇಶ ಎಂದು ಅವರು ವಿವರಿಸಿದರು. <br /> <br /> ಆದಾಯ ತೆರಿಗೆ ಮುಖ್ಯ ಆಯುಕ್ತ (ಬೆಂಗಳೂರು 2) ಜಯಂತ್ ಕುಮಾರ್ ಹೋತಾ ಮಾತನಾಡಿ, ಆದಾಯ ತೆರಿಗೆ ಪಾವತಿ ಸಂಬಂಧ ಇಂದು ಜನರ ಧೋರಣೆ ಬದಲಾಗಿದೆ. ತೆರಿಗೆದಾರರಿಗೆ ಇಲಾಖೆ ಎಲ್ಲ ರೀತಿಯ ನೆರವು ನೀಡಲಿದೆ. ಈ ಹಿಂದೆ ಆದಾಯ ತೆರಿಗೆ ಪಾವತಿ ಬಗ್ಗೆ ಜನರಿಗೆ ಭಯ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕರಾವಳಿ ಭಾಗದ ಜನ ಶಿಕ್ಷಣದಲ್ಲಿ ಪ್ರಗತಿ ಸಾಧಿಸಿರುವುದು ಮತ್ತು ಇಲ್ಲಿನ ಜನರಿಗೆ ತೆರಿಗೆ ಪಾವತಿ ಬಗ್ಗೆ ಅರಿವಿರುವುದು ಈ ರೀತಿಯ ಕೇಂದ್ರಗಳಿಗೆ ನೆರವಾಗಲಿದೆ ಎಂದು ಹೇಳಿದರು. <br /> <br /> ಇಂಡಿಯನ್ ಓವರ್ಸೀಸ್ ಬ್ಯಾಂಕ್ ಸಿಎಂಡಿ ಎಂ.ನರೇಂದ್ರ ಮಾತನಾಡಿ, ಬ್ಯಾಂಕ್ ದೇಶದಾದ್ಯಂತ ಶಾಖೆಗಳನ್ನು ತೆರೆಯುತ್ತಿದ್ದು, ಆದಾಯತೆರಿಗೆ ಸೇವಾ ಕೇಂದ್ರದಲ್ಲಿ ಬ್ಯಾಂಕ್ನ ಎಟಿಎಂ ಅನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು. <br /> <br /> ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಅನಂತಕೃಷ್ಣ ಮಾತನಾಡಿ, ಆದಾಯ ತೆರಿಗೆ ಇಲಾಖೆ ಎಂದರೆ ನೋಟಿಸ್ ಜಾರಿ ಮಾಡುವುದು, ದಾಳಿ ನಡೆಸುವುದಕ್ಕೆ ಮಾತ್ರ ಸೀಮಿತವಾದ ಇಲಾಖೆ ಎಂಬ ಮನೋಭಾವನೆ ಇತ್ತು. ಆದರೆ ಈ ಇಲಾಖೆಯೂ ಸಹ ಸಾಮಾಜಿಕ ಸೇವೆಗಳನ್ನು ಮಾಡುವಲ್ಲಿ ಮುಂದಾಗಲಿದೆ ಎಂಬುದನ್ನು ತೋರಿಸಿದೆ ಎಂದು ಹೇಳಿದರು.<br /> <br /> ಗೋವಾ ರಾಜ್ಯ ಮುಖ್ಯ ಆದಾಯ ತೆರಿಗೆ ಆಯುಕ್ತ ದಿಲೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಆದಾಯ ತೆರಿಗೆ ಮಂಗಳೂರು ವಿಭಾಗದ ಆಯುಕ್ತ ಡಾ.ಬಿ.ಎಸ್.ಎನ್.ಪ್ರಸಾದ್ ಇದ್ದರು. <br /> <br /> ಸಮಾರಂಭದಲ್ಲಿ ಕೆಸಿಸಿಐ ಅಧ್ಯಕ್ಷೆ ಲತಾ ಆರ್.ಕಿಣಿ, ಭಾರತೀಯ ಲೆಕ್ಕಪರಿಶೋಧಕರ ಸಂಘ ಮಂಗಳೂರು ಚಾಪ್ಟರ್ನ ಮುರಳಿ ಮೋಹನ್, ಉಡುಪಿ ಚಾಪ್ಟರ್ನ ವೈ.ಗಣೇಶ್, ಆದಾಯ ತೆರಿಗೆ ನೌಕರರ ಸಂಘ ಪ್ರಧಾನ ಕಾರ್ಯದರ್ಶಿ ವಿನೋದ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>