<p><strong>ಹೊನ್ನಾಳಿ</strong>: ‘ಪ್ರಸಕ್ತ ಸಾಲಿನಲ್ಲಿ ನಮ್ಮ ಬ್ಯಾಂಕ್ ₹ 75.55 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಕಳೆದ ಸಾಲಿಗಿಂತ ₹ 29.54 ಲಕ್ಷ ಹೆಚ್ಚು ಲಾಭಗಳಿಸಿದೆ’ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆ.ತಿಮ್ಮೇಶಪ್ಪ ಆರುಂಡಿ ಹೇಳಿದರು.</p>.<p>ಶುಕ್ರವಾರ ಪಿಕಾರ್ಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಸರ್ಕಾರದಿಂದ ₹ 75 ಲಕ್ಷದಷ್ಟು ಬಡ್ಡಿರೂಪದ ಸಹಾಯಧನ ಬರಬೇಕಾಗಿದ್ದು, ಈ ಸಹಾಯಧನದ ಮೊತ್ತವನ್ನು ಸೇರಿಸಿದರೆ ಒಟ್ಟು ₹ 1.55 ಕೋಟಿ ಲಾಭಾಂಶವನ್ನು ಗಳಿಸಿದಂತಾಗುತ್ತದೆ’ ಎಂದು ಹೇಳಿದರು.</p>.<p>‘1938ರಲ್ಲಿ ಸ್ಥಾಪನೆಯಾದ ನಮ್ಮ ಬ್ಯಾಂಕ್ 86ನೇ ವಾರ್ಷಿಕ ಮಹಾಸಭೆಯನ್ನು ನಡೆಸುತ್ತಿರುವುದು ಹೆಮ್ಮೆಯ ವಿಷಯ’ ಎಂದ ಅವರು, ‘ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕಿನಾದ್ಯಂತ ತನ್ನ ವ್ಯಾಪ್ತಿಯನ್ನು ಹೊಂದಿದ್ದು, ಶೇ 86.1ರಷ್ಟು ಸಾಲ ವಸೂಲಾತಿ ಗುರಿ ಸಾಧಿಸಿದ್ದೇವೆ’ ಎಂದು ಹೇಳಿದರು.</p>.<p>ಸಭೆಯಲ್ಲಿ 2023– 24ನೇ ಸಾಲಿನ ಆಡಳಿತ ವರದಿಯನ್ನು ನಿರ್ದೇಶಕರಾದ ಟಿ.ಜಿ.ರಮೇಶ್ಗೌಡ ಮಂಡಿಸಿ ಅಂಗೀಕಾರ ಪಡೆದುಕೊಂಡರು.</p>.<p>ಬ್ಯಾಂಕ್ ಕಾರ್ಯದರ್ಶಿ ಕೆ.ವಿಶಾಲಾಕ್ಷಮ್ಮ, ಉಪಾಧ್ಯಕ್ಷ ಆರ್.ನಾಗಪ್ಪ, ನಿರ್ದೇಶಕರಾದ ಎಂ.ಜಿ.ಬಸವರಾಜಪ್ಪ, ಎಲ್.ಕೆ.ಚಂದ್ರಪ್ಪ, ಎಚ್.ಪಿ. ವಿಜಯ್ಕುಮಾರ್, ಕೆ.ವಿ.ನಾಗರಾಜ್, ಎ.ನಾಗೇಂದ್ರಪ್ಪ, ಎ.ಎಚ್. ಚಂದ್ರಪ್ಪ, ಎಂ.ಆರ್. ಹನುಮಂತಪ್ಪ, ಕೆ.ವಿ.ಸರೋಜಮ್ಮ ಸಿದ್ದಪ್ಪ ಬಣ್ಣಜ್ಜಿ, ಮಮತಾ ರಮೇಶ್, ಎಲ್.ಕೆ. ಚಂದ್ರಪ್ಪ ಉಪಸ್ಥಿತರಿದ್ದರು. </p>.<p>ರೈತ ಮುಖಂಡ ಹಿರೇಮಠದ ಬಸವರಾಜಪ್ಪ ರೈತ ಗೀತೆ ಹಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾಳಿ</strong>: ‘ಪ್ರಸಕ್ತ ಸಾಲಿನಲ್ಲಿ ನಮ್ಮ ಬ್ಯಾಂಕ್ ₹ 75.55 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಕಳೆದ ಸಾಲಿಗಿಂತ ₹ 29.54 ಲಕ್ಷ ಹೆಚ್ಚು ಲಾಭಗಳಿಸಿದೆ’ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆ.ತಿಮ್ಮೇಶಪ್ಪ ಆರುಂಡಿ ಹೇಳಿದರು.</p>.<p>ಶುಕ್ರವಾರ ಪಿಕಾರ್ಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಸರ್ಕಾರದಿಂದ ₹ 75 ಲಕ್ಷದಷ್ಟು ಬಡ್ಡಿರೂಪದ ಸಹಾಯಧನ ಬರಬೇಕಾಗಿದ್ದು, ಈ ಸಹಾಯಧನದ ಮೊತ್ತವನ್ನು ಸೇರಿಸಿದರೆ ಒಟ್ಟು ₹ 1.55 ಕೋಟಿ ಲಾಭಾಂಶವನ್ನು ಗಳಿಸಿದಂತಾಗುತ್ತದೆ’ ಎಂದು ಹೇಳಿದರು.</p>.<p>‘1938ರಲ್ಲಿ ಸ್ಥಾಪನೆಯಾದ ನಮ್ಮ ಬ್ಯಾಂಕ್ 86ನೇ ವಾರ್ಷಿಕ ಮಹಾಸಭೆಯನ್ನು ನಡೆಸುತ್ತಿರುವುದು ಹೆಮ್ಮೆಯ ವಿಷಯ’ ಎಂದ ಅವರು, ‘ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕಿನಾದ್ಯಂತ ತನ್ನ ವ್ಯಾಪ್ತಿಯನ್ನು ಹೊಂದಿದ್ದು, ಶೇ 86.1ರಷ್ಟು ಸಾಲ ವಸೂಲಾತಿ ಗುರಿ ಸಾಧಿಸಿದ್ದೇವೆ’ ಎಂದು ಹೇಳಿದರು.</p>.<p>ಸಭೆಯಲ್ಲಿ 2023– 24ನೇ ಸಾಲಿನ ಆಡಳಿತ ವರದಿಯನ್ನು ನಿರ್ದೇಶಕರಾದ ಟಿ.ಜಿ.ರಮೇಶ್ಗೌಡ ಮಂಡಿಸಿ ಅಂಗೀಕಾರ ಪಡೆದುಕೊಂಡರು.</p>.<p>ಬ್ಯಾಂಕ್ ಕಾರ್ಯದರ್ಶಿ ಕೆ.ವಿಶಾಲಾಕ್ಷಮ್ಮ, ಉಪಾಧ್ಯಕ್ಷ ಆರ್.ನಾಗಪ್ಪ, ನಿರ್ದೇಶಕರಾದ ಎಂ.ಜಿ.ಬಸವರಾಜಪ್ಪ, ಎಲ್.ಕೆ.ಚಂದ್ರಪ್ಪ, ಎಚ್.ಪಿ. ವಿಜಯ್ಕುಮಾರ್, ಕೆ.ವಿ.ನಾಗರಾಜ್, ಎ.ನಾಗೇಂದ್ರಪ್ಪ, ಎ.ಎಚ್. ಚಂದ್ರಪ್ಪ, ಎಂ.ಆರ್. ಹನುಮಂತಪ್ಪ, ಕೆ.ವಿ.ಸರೋಜಮ್ಮ ಸಿದ್ದಪ್ಪ ಬಣ್ಣಜ್ಜಿ, ಮಮತಾ ರಮೇಶ್, ಎಲ್.ಕೆ. ಚಂದ್ರಪ್ಪ ಉಪಸ್ಥಿತರಿದ್ದರು. </p>.<p>ರೈತ ಮುಖಂಡ ಹಿರೇಮಠದ ಬಸವರಾಜಪ್ಪ ರೈತ ಗೀತೆ ಹಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>