‘ಇದಕ್ಕೆ ಪರಿಹಾರವೆಂದರೆ, ರೋಗ ನಿರೋಧಕ ತಳಿಗಳ ಆಯ್ಕೆ, ಪ್ರತಿಷ್ಠಿತ ನರ್ಸರಿಗಳಿಂದ ಸಸಿಗಳ ಖರೀದಿ, ಸಸಿಗಳ ನಾಟಿಗೆ ಮುನ್ನ ಮಣ್ಣಿಗೆ ಶಿಲೀಂದ್ರ ನಾಶಕಗಳನ್ನು ಸೇರಿಸಬೇಕು. ನಾಟಿಯ ನಂತರ ಈ ರೋಗಗಳು ಕಂಡು ಬಂದಲ್ಲಿ ಪ್ರತಿ ಲೀಟರ್ ನೀರಿಗೆ ಎರಡು ಗ್ರಾಂ ಶಿಲೀಂದ್ರ ನಾಶಕವನ್ನು ಸೇರಿಸಿ ಸಿಂಪಡಿಸಬೇಕು. ರೋಗ ಹತೋಟಿಗೆ ಬಾರದಿದ್ದಲ್ಲಿ ‘ಕ್ಯಾಪ್ರಟ್ರಾನ್ 50wp’ ಶಿಲೀಂದ್ರ ನಾಶಕವನ್ನು ಸಸಿಗಳ ಬುಡದಲ್ಲಿ ಬೇರುಗಳು ನೆನೆಯುವಂತೆ ಸಿಂಪಡಿಸಬೇಕು. ಅಡಿಕೆ ಸಸಿಗಳಿಗೆ ಹಾಯಿಸಿದ ನೀರು ಪಪ್ಪಾಯ ಸಸಿಗಳಿಗೆ ಅತಿ ಶೀತ ಉಂಟುಮಾಡುವುದರಿಂದ ಎರಡು ದಿನಕ್ಕೊಮ್ಮೆ ನೀರು ಹಾಯಿಸಬೇಕು’ ಎಂದು ಗಂಗಾಧರಪ್ಪಗೌಡ ತಿಳಿಸಿದರು.