<p><strong>ಮಲೇಬೆನ್ನೂರು</strong>: ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷಿ ರೂ 66 ಕೋಟಿ ವೆಚ್ಚದ ‘ಅಮೃತ್ ಯೋಜನೆ’ ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿ ಮಳೆ ನಡುವೆ ಭರದಿಂದ ಭಾನುವಾರ ಸಾಗಿದೆ.</p>.<p>ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸಂಸ್ಥೆ ಆಶ್ರಯದಲ್ಲಿ ಕರ್ನಾಟಕ ರಾಜ್ಯ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ಉಸ್ತುವಾರಿಯಲ್ಲಿ ಕಾಮಗಾರಿ ಸಾಗಿದೆ.</p>.<p>‘ಹೈದರಾಬಾದ್ ಮೂಲ ಎಸ್ಎಂಸಿ ಇಸ್ಫ್ರಾಸ್ಟ್ರಕ್ಚರ್ ಹಾಗೂ ಸಿವಿಎಕ್ ಕಂಪನಿ ಕಾಮಗಾರಿ ವಹಿಸಿಕೊಂಡಿದೆ. 54 ಕಿ.ಮೀ ನೀರು ವಿತರಣೆ ಕೊಳವೆ ಮಾರ್ಗ ಅಳವಡಿಸಬೇಕಿದ್ದು 18 ಕಿ.ಮೀ ಎರಡೂವರೆ ಇಂಚಿನ ಎಚ್ಡಿಪಿಇ ಪೈಪ್ಗಳನ್ನು ಅಳವಡಿಸಲಾಗಿದೆ’ ಎಂದು ಸಹಾಯಕ ಎಂಜಿನಿಯರ್ ಪ್ರಕಾಶ್ ಸಜ್ಜನ್ ಮಾಹಿತಿ ನೀಡಿದರು.</p>.<p>‘ಕೆಲಸ ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಕಾರಣ ತುಂಗಭದ್ರಾ ನದಿ ಜಾಕ್ವೆಲ್ ಕಾಮಗಾರಿ ಬುನಾದಿ ಸ್ಥಗಿತಗೊಂಡಿದೆ. ಮೇಲ್ಮಟ್ಟದ ಜಲ ಸಂಗ್ರಹಾಗಾರ ನಿವೇಶನ ನಿಗದಿಯಾಗಿಲ್ಲ. ಚಿಕ್ಕಪುಟ್ಟ ಸಮಸ್ಯೆ ಹೊರತುಪಡಿಸಿದರೆ ಸುಗಮವಾಗಿ ಸಾಗಿದೆ. ರೂಪಿಸಿರುವ ಯೋಜನೆಯಂತೆ 2025 ಮಾರ್ಚ್ಯೊಳಗೆ ಕಾರ್ಯಗತವಾಗಬೇಕು’ ಎಂದರು.</p>.<p>ಶ್ರಾವಣ ಮಾಸ, ಗಣೇಶೋತ್ಸವ, ದಸರಾ ಹಬ್ಬ ಇದ್ದು ಪಟ್ಟಣದೊಳಗಿನ ಕೊಳವೆಮಾರ್ಗ ಅಳವಡಿಸುವ ಕೆಲಸ ತುರ್ತಾಗಿ ಮುಗಿಸಲು ನಾಗರಿಕರು ಕೋರಿದರು. ಮಳೆಗಾಲ ಆರಂಭವಾಗಿದ್ದು ಗುಂಡಿ ತೆಗೆದು ಬಿಡಬೇಡಿ ಎಂದರು.</p>.<p>‘ಪಟ್ಟಣದ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಸರ್ಕಾರದ ಯೋಜನೆ ಯೋಜನೆ ಕೆಲಸ ಸಮರ್ಪಕ ರೀತಿ ಮಾಡಿ. ಕಾಮಗಾರಿ ಗುಣಮಟ್ಟ ಕಾಪಾಡಿ’ ಎಂದು ಪುರಸಭೆ ಅಧ್ಯಕ್ಷ ಬಿ. ಹನುಮಂತಪ್ಪ ಸೂಚಿಸಿದರು.</p>.<p>ಯಾವುದೇ ತರಹದ ಸಮಸ್ಯೆ ಎದುರಾದಲ್ಲಿ ಆಯಾ ವಾರ್ಡ್ ಸದಸ್ಯರು, ಪುರಸಭೆ ಎಂಜಿನಿಯರ್ ಸಲಹೆ ಪಡೆದು ಕಾಮಗಾರಿ ಮುಂದುವರಿಸಿ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು</strong>: ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷಿ ರೂ 66 ಕೋಟಿ ವೆಚ್ಚದ ‘ಅಮೃತ್ ಯೋಜನೆ’ ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿ ಮಳೆ ನಡುವೆ ಭರದಿಂದ ಭಾನುವಾರ ಸಾಗಿದೆ.</p>.<p>ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸಂಸ್ಥೆ ಆಶ್ರಯದಲ್ಲಿ ಕರ್ನಾಟಕ ರಾಜ್ಯ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ಉಸ್ತುವಾರಿಯಲ್ಲಿ ಕಾಮಗಾರಿ ಸಾಗಿದೆ.</p>.<p>‘ಹೈದರಾಬಾದ್ ಮೂಲ ಎಸ್ಎಂಸಿ ಇಸ್ಫ್ರಾಸ್ಟ್ರಕ್ಚರ್ ಹಾಗೂ ಸಿವಿಎಕ್ ಕಂಪನಿ ಕಾಮಗಾರಿ ವಹಿಸಿಕೊಂಡಿದೆ. 54 ಕಿ.ಮೀ ನೀರು ವಿತರಣೆ ಕೊಳವೆ ಮಾರ್ಗ ಅಳವಡಿಸಬೇಕಿದ್ದು 18 ಕಿ.ಮೀ ಎರಡೂವರೆ ಇಂಚಿನ ಎಚ್ಡಿಪಿಇ ಪೈಪ್ಗಳನ್ನು ಅಳವಡಿಸಲಾಗಿದೆ’ ಎಂದು ಸಹಾಯಕ ಎಂಜಿನಿಯರ್ ಪ್ರಕಾಶ್ ಸಜ್ಜನ್ ಮಾಹಿತಿ ನೀಡಿದರು.</p>.<p>‘ಕೆಲಸ ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಕಾರಣ ತುಂಗಭದ್ರಾ ನದಿ ಜಾಕ್ವೆಲ್ ಕಾಮಗಾರಿ ಬುನಾದಿ ಸ್ಥಗಿತಗೊಂಡಿದೆ. ಮೇಲ್ಮಟ್ಟದ ಜಲ ಸಂಗ್ರಹಾಗಾರ ನಿವೇಶನ ನಿಗದಿಯಾಗಿಲ್ಲ. ಚಿಕ್ಕಪುಟ್ಟ ಸಮಸ್ಯೆ ಹೊರತುಪಡಿಸಿದರೆ ಸುಗಮವಾಗಿ ಸಾಗಿದೆ. ರೂಪಿಸಿರುವ ಯೋಜನೆಯಂತೆ 2025 ಮಾರ್ಚ್ಯೊಳಗೆ ಕಾರ್ಯಗತವಾಗಬೇಕು’ ಎಂದರು.</p>.<p>ಶ್ರಾವಣ ಮಾಸ, ಗಣೇಶೋತ್ಸವ, ದಸರಾ ಹಬ್ಬ ಇದ್ದು ಪಟ್ಟಣದೊಳಗಿನ ಕೊಳವೆಮಾರ್ಗ ಅಳವಡಿಸುವ ಕೆಲಸ ತುರ್ತಾಗಿ ಮುಗಿಸಲು ನಾಗರಿಕರು ಕೋರಿದರು. ಮಳೆಗಾಲ ಆರಂಭವಾಗಿದ್ದು ಗುಂಡಿ ತೆಗೆದು ಬಿಡಬೇಡಿ ಎಂದರು.</p>.<p>‘ಪಟ್ಟಣದ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಸರ್ಕಾರದ ಯೋಜನೆ ಯೋಜನೆ ಕೆಲಸ ಸಮರ್ಪಕ ರೀತಿ ಮಾಡಿ. ಕಾಮಗಾರಿ ಗುಣಮಟ್ಟ ಕಾಪಾಡಿ’ ಎಂದು ಪುರಸಭೆ ಅಧ್ಯಕ್ಷ ಬಿ. ಹನುಮಂತಪ್ಪ ಸೂಚಿಸಿದರು.</p>.<p>ಯಾವುದೇ ತರಹದ ಸಮಸ್ಯೆ ಎದುರಾದಲ್ಲಿ ಆಯಾ ವಾರ್ಡ್ ಸದಸ್ಯರು, ಪುರಸಭೆ ಎಂಜಿನಿಯರ್ ಸಲಹೆ ಪಡೆದು ಕಾಮಗಾರಿ ಮುಂದುವರಿಸಿ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>