<p><strong>ದಾವಣಗೆರೆ:</strong> ಆಗಸ್ಟ್ 3ರಂದು ದಾವಣಗೆರೆಯಲ್ಲಿ ನಡೆದ ‘ಸಿದ್ದರಾಮಯ್ಯ–75’ ಅಮೃತ ಮಹೋತ್ಸವಕ್ಕೆ ಬಂದಿದ್ದ ಕಲಬುರಗಿ ಜಿಲ್ಲೆಯ ಬಸಣ್ಣ ಮಲ್ಲಪ್ಪ ಗೋಳೆ (65) ನಾಪತ್ತೆಯಾಗಿದ್ದಾರೆ.</p>.<p>ಕಲಬುರಗಿ ದಕ್ಷಿಣ ಮತಕ್ಷೇತ್ರದ ಸಾವಳಗಿ ಬಿ ಗ್ರಾಮದಿಂದ ಕಲಬುರಗಿಗೆ ಬಂದ ಬಸಣ್ಣ ಅವರು ಆಗಸ್ಟ್ 2ರಂದು ಬಸ್ ಹತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರಿಂದ ಅವರನ್ನು ಕರೆ ತಂದಿದ್ದವರು ಬಸ್ನಲ್ಲಿಯೇ ಕೂರಿಸಿ ಸಮಾವೇಶಕ್ಕೆ ಹೋಗಿದ್ದಾರೆ. ಸಮಾವೇಶ ಮುಗಿಸಿ ಬಂದು ನೋಡಿದಾಗ ಬಸಣ್ಣ ಅವರು ಇರಲಿಲ್ಲ. ಬೇರೊಂದು ಬಸ್ನಲ್ಲಿ ಹತ್ತಿ ಹೋಗಿರಬಹುದು ಎಂದು ತಿಳಿದು ಅಲ್ಲಿಂದ ಹೊರಟಿದ್ದಾರೆ.</p>.<p>ತಂದೆ ವಾಪಸ್ ಬಾರದೇ ಇದ್ದುದರಿಂದ ಆತಂಕಗೊಂಡ ಮಕ್ಕಳು ಭಾನುವಾರ ದಾವಣಗೆರೆಯ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಮಾವೇಶ ನಡೆದ ಶಾಮನೂರು ಪ್ಯಾಲೇಸ್ ಮೈದಾನ, ಅಕ್ಕಪಕ್ಕದ ಹೋಟೆಲ್ಗಳು, ವೃದ್ಧಾಶ್ರಮಗಳಲ್ಲಿ ಹುಡುಕಾಡಿದರೂ ಸಿಕ್ಕಿಲ್ಲ.</p>.<p>‘ಸಮಾವೇಶಕ್ಕೆ ಬಂದ ನಮ್ಮ ತಂದೆ ಊಟ ಮಾಡಲು ಹೋಗಿ ಬಸ್ ಯಾವುದು ಎಂದುತಿಳಿಯದೇ ಹೊರಟು ಹೋಗಿರಬಹುದು. ದಾವಣಗೆರೆಯ ಪೊಲೀಸರಿಗೆ ದೂರು ನೀಡಲು ಹೋದಾಗ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು. ಕಲಬುರಗಿ ಗ್ರಾಮಾಂತರ ಠಾಣೆಗೆ ಈ ಕುರಿತು ದೂರು ನೀಡಿದ್ದೇವೆ’ ಎಂದು ಬಸಣ್ಣ ಅವರ ಕಿರಿಯ ಪುತ್ರ ಶ್ರೀಕಾಂತ್ತಿಳಿಸಿದರು.</p>.<p>ಸುಳಿವು ಸಿಕ್ಕವರು 9901056856, 9901572823 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಆಗಸ್ಟ್ 3ರಂದು ದಾವಣಗೆರೆಯಲ್ಲಿ ನಡೆದ ‘ಸಿದ್ದರಾಮಯ್ಯ–75’ ಅಮೃತ ಮಹೋತ್ಸವಕ್ಕೆ ಬಂದಿದ್ದ ಕಲಬುರಗಿ ಜಿಲ್ಲೆಯ ಬಸಣ್ಣ ಮಲ್ಲಪ್ಪ ಗೋಳೆ (65) ನಾಪತ್ತೆಯಾಗಿದ್ದಾರೆ.</p>.<p>ಕಲಬುರಗಿ ದಕ್ಷಿಣ ಮತಕ್ಷೇತ್ರದ ಸಾವಳಗಿ ಬಿ ಗ್ರಾಮದಿಂದ ಕಲಬುರಗಿಗೆ ಬಂದ ಬಸಣ್ಣ ಅವರು ಆಗಸ್ಟ್ 2ರಂದು ಬಸ್ ಹತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರಿಂದ ಅವರನ್ನು ಕರೆ ತಂದಿದ್ದವರು ಬಸ್ನಲ್ಲಿಯೇ ಕೂರಿಸಿ ಸಮಾವೇಶಕ್ಕೆ ಹೋಗಿದ್ದಾರೆ. ಸಮಾವೇಶ ಮುಗಿಸಿ ಬಂದು ನೋಡಿದಾಗ ಬಸಣ್ಣ ಅವರು ಇರಲಿಲ್ಲ. ಬೇರೊಂದು ಬಸ್ನಲ್ಲಿ ಹತ್ತಿ ಹೋಗಿರಬಹುದು ಎಂದು ತಿಳಿದು ಅಲ್ಲಿಂದ ಹೊರಟಿದ್ದಾರೆ.</p>.<p>ತಂದೆ ವಾಪಸ್ ಬಾರದೇ ಇದ್ದುದರಿಂದ ಆತಂಕಗೊಂಡ ಮಕ್ಕಳು ಭಾನುವಾರ ದಾವಣಗೆರೆಯ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಮಾವೇಶ ನಡೆದ ಶಾಮನೂರು ಪ್ಯಾಲೇಸ್ ಮೈದಾನ, ಅಕ್ಕಪಕ್ಕದ ಹೋಟೆಲ್ಗಳು, ವೃದ್ಧಾಶ್ರಮಗಳಲ್ಲಿ ಹುಡುಕಾಡಿದರೂ ಸಿಕ್ಕಿಲ್ಲ.</p>.<p>‘ಸಮಾವೇಶಕ್ಕೆ ಬಂದ ನಮ್ಮ ತಂದೆ ಊಟ ಮಾಡಲು ಹೋಗಿ ಬಸ್ ಯಾವುದು ಎಂದುತಿಳಿಯದೇ ಹೊರಟು ಹೋಗಿರಬಹುದು. ದಾವಣಗೆರೆಯ ಪೊಲೀಸರಿಗೆ ದೂರು ನೀಡಲು ಹೋದಾಗ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು. ಕಲಬುರಗಿ ಗ್ರಾಮಾಂತರ ಠಾಣೆಗೆ ಈ ಕುರಿತು ದೂರು ನೀಡಿದ್ದೇವೆ’ ಎಂದು ಬಸಣ್ಣ ಅವರ ಕಿರಿಯ ಪುತ್ರ ಶ್ರೀಕಾಂತ್ತಿಳಿಸಿದರು.</p>.<p>ಸುಳಿವು ಸಿಕ್ಕವರು 9901056856, 9901572823 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>