<p><strong>ಸಂತೇಬೆನ್ನೂರು: </strong>ಸಮೀಪದ ನಾಗೇನಹಳ್ಳಿ ಬಳಿ ಎಪಿಎಂಸಿ ಉಪ ಮಾರುಕಟ್ಟೆ ಕಟ್ಟಡ ಹಾಗೂ ಗೋದಾಮುಗಳು ನಿರ್ಮಾಣಗೊಂಡಿದ್ದು, ಉದ್ಘಾಟನೆಗೆ ಸಿದ್ಧಗೊಂಡಿವೆ.</p>.<p>ನ.17 ರಂದು ಮಧ್ಯಾಹ್ನ 12ಕ್ಕೆ ರಾಜ್ಯ ಸಾಬೂನು ಹಾಗೂ ಮಾರ್ಜಕ ನಿಗಮ ಮಂಡಳಿ ಅಧ್ಯಕ್ಷ ಕೆ. ಮಾಡಾಳ್ ವಿರೂಪಾಕ್ಷಪ್ಪ ಗೋದಾಮು ಉದ್ಘಾಟಿಸಲಿದ್ದಾರೆ. ಸಂಸದ ಜಿ.ಎಂ. ಸಿದ್ದೇಶ್ವರ ಮುಚ್ಚು ಹರಾಜು ಕಟ್ಟೆ ಉದ್ಘಾಟಿಸಿಲಿದ್ದಾರೆ ಎಂದು ಚನ್ನಗಿರಿ ಎಪಿಎಂಸಿ ಅಧ್ಯಕ್ಷ ಜಿ.ಬಿ. ಜಗನ್ನಾಥ್ ಮಾಹಿತಿ ನೀಡಿದರು.</p>.<p>₹ 4 ಕೋಟಿ ವೆಚ್ಚದಲ್ಲಿ 7 ಎಕರೆ ಪ್ರದೇಶದಲ್ಲಿ ಮೂರು ಬೃಹತ್ ಗೋದಾಮುಗಳು ಹಾಗೂ ಒಂದು ವಿಶಾಲ ಮುಚ್ಚು ಹರಾಜು ಕಟ್ಟೆ ನಿರ್ಮಾಣಗೊಂಡಿವೆ. 2013-14ನೇ ಸಾಲಿನ ನಬಾರ್ಡ್ ಡಬ್ಲ್ಯುಐಎಫ್ (ಹೆಚ್ಚುವರಿ) ಯೋಜನೆಯಲ್ಲಿ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ನಿರ್ಮಿಸಲಾಗಿದೆ.</p>.<p>ಪ್ರತಿ ಗೋದಾಮು 1000 ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿವೆ. ಸಂತೇಬೆನ್ನೂರು ಸುತ್ತ 50 ಕಿ.ಮೀ. ವ್ಯಾಪ್ತಿಯ ರೈತರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ದಾಸ್ತಾನು ಗೋದಾಮುಗಳಿರದ ಕಾರಣಉಪ ಮಾರುಕಟ್ಟೆ ಬೇಡಿಕೆ ಇತ್ತು. ಈಗ ಉಪ ಮಾರುಕಟ್ಟೆ ಸಿದ್ಧವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂತೇಬೆನ್ನೂರು: </strong>ಸಮೀಪದ ನಾಗೇನಹಳ್ಳಿ ಬಳಿ ಎಪಿಎಂಸಿ ಉಪ ಮಾರುಕಟ್ಟೆ ಕಟ್ಟಡ ಹಾಗೂ ಗೋದಾಮುಗಳು ನಿರ್ಮಾಣಗೊಂಡಿದ್ದು, ಉದ್ಘಾಟನೆಗೆ ಸಿದ್ಧಗೊಂಡಿವೆ.</p>.<p>ನ.17 ರಂದು ಮಧ್ಯಾಹ್ನ 12ಕ್ಕೆ ರಾಜ್ಯ ಸಾಬೂನು ಹಾಗೂ ಮಾರ್ಜಕ ನಿಗಮ ಮಂಡಳಿ ಅಧ್ಯಕ್ಷ ಕೆ. ಮಾಡಾಳ್ ವಿರೂಪಾಕ್ಷಪ್ಪ ಗೋದಾಮು ಉದ್ಘಾಟಿಸಲಿದ್ದಾರೆ. ಸಂಸದ ಜಿ.ಎಂ. ಸಿದ್ದೇಶ್ವರ ಮುಚ್ಚು ಹರಾಜು ಕಟ್ಟೆ ಉದ್ಘಾಟಿಸಿಲಿದ್ದಾರೆ ಎಂದು ಚನ್ನಗಿರಿ ಎಪಿಎಂಸಿ ಅಧ್ಯಕ್ಷ ಜಿ.ಬಿ. ಜಗನ್ನಾಥ್ ಮಾಹಿತಿ ನೀಡಿದರು.</p>.<p>₹ 4 ಕೋಟಿ ವೆಚ್ಚದಲ್ಲಿ 7 ಎಕರೆ ಪ್ರದೇಶದಲ್ಲಿ ಮೂರು ಬೃಹತ್ ಗೋದಾಮುಗಳು ಹಾಗೂ ಒಂದು ವಿಶಾಲ ಮುಚ್ಚು ಹರಾಜು ಕಟ್ಟೆ ನಿರ್ಮಾಣಗೊಂಡಿವೆ. 2013-14ನೇ ಸಾಲಿನ ನಬಾರ್ಡ್ ಡಬ್ಲ್ಯುಐಎಫ್ (ಹೆಚ್ಚುವರಿ) ಯೋಜನೆಯಲ್ಲಿ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ನಿರ್ಮಿಸಲಾಗಿದೆ.</p>.<p>ಪ್ರತಿ ಗೋದಾಮು 1000 ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿವೆ. ಸಂತೇಬೆನ್ನೂರು ಸುತ್ತ 50 ಕಿ.ಮೀ. ವ್ಯಾಪ್ತಿಯ ರೈತರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ದಾಸ್ತಾನು ಗೋದಾಮುಗಳಿರದ ಕಾರಣಉಪ ಮಾರುಕಟ್ಟೆ ಬೇಡಿಕೆ ಇತ್ತು. ಈಗ ಉಪ ಮಾರುಕಟ್ಟೆ ಸಿದ್ಧವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>