ದಾವಣಗೆರೆ: ಕುರಿ, ಮೇಕೆ ಮಾಂಸ ವ್ಯಾಪಾರ ಮಾಡಿ ಬದುಕುವ ಸೂರ್ಯವಂಶ ಕ್ಷತ್ರೀಯ ಕಲಾಲ್ ಕಾಟಿಕ್ ಸಮಾಜ ಕೊರೊನಾ ಮತ್ತು ಲಾಕ್ಡೌನ್ ಕಾರಣದಿಂದ ತೊಂದರೆಗೆ ಸಿಲುಕಿದೆ. ಈ ಸಮುದಾಯಕ್ಕೆ ಆರ್ಥಿಕ ಪ್ಯಾಕೇಜ್ ನೀಡಬೇಕು ಎಂದು ಮುಖ್ಯಮಂತ್ರಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮೂಲಕ ದಾವಣಗೆರೆ ಸಿಟಿ–ಹರಿಹರ ಟೌನ್ ಕಾಟಿಕ್ ಸಂಘ, ದಾವಣಗೆರೆ ಕುರಿ-ಮೇಕೆ ಮಾಂಸ ಮಾರಾಟಗಾರರ ಸಂಘದ ಮುಖಂಡರು ಮನವಿ ಸಲ್ಲಿಸಿದ್ದಾರೆ.