ಸಮುದಾಯದ ಹೋರಾಟಗಾರ್ತಿ & ಸಾಮಾಜಿಕ ಕಾರ್ಯಕರ್ತೆ ಚೈತ್ರಾ ಎಸ್.ಮತ್ತು ಅವರ ಜತೆ ವಾಸವಿರುವ ಗೊಂಬೆ, ಜಾಹ್ನವಿ, ರಶ್ಮಿಕಾ, ಲಾಸ್ಯ, ಸತ್ಯಮ್ಮ, ವೀಣಾ, ಸುರಕ್ಷಾ, ಸನ್ನಿಧಿ, ಅರುಂಧತಿ, ಧನ್ಯ, ಕವಿತಾ, ಯಲ್ಲಮ್ಮ, ಛಾಯಾ ಅವರ ಮೇಲೆ ಕಬ್ಬಿಣದ ರಾಡ್, ಕಲ್ಲು ದೊಣ್ಣೆಗಳಿಂದ ಹಲ್ಲೆ ಮಾಡಲಾಗಿದೆ. ಅವರಲ್ಲಿ ಅರುಂಧತಿ ಅವರ ತಲೆಗೆ ಬಲವಾದ ಏಟು ಬಿದ್ದಿದೆ. ಲಾಸ್ಯ ಅವರಿಗೂ ಗಂಭೀರ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.