<p><strong>ಬಸವಾಪಟ್ಟಣ:</strong> ಇಲ್ಲಿನ ಪ್ರಸಿದ್ಧ ಹಜರತ್ ಬಾಬಾ ಬುಡೇನ್ ವಲಿಯವರ ದರ್ಗಾದಲ್ಲಿ ನಡೆದ ಎರಡು ದಿನಗಳ ಸಾಲಾನಾ ತಬ್ಲೀಗಿ ಇಸ್ತೇವಾ ಧಾರ್ಮಿಕ ಬೋಧನಾ ಕಾರ್ಯಕ್ರಮ ಶುಕ್ರವಾರ ರಾತ್ರಿ ಮುಕ್ತಾಯವಾಯಿತು.</p>.<p>ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬೋಧನೆಗಳು ಮತ್ತು ಇಸ್ಲಾಂ ಪವಿತ್ರ ಗ್ರಂಥವಾದ ಕುರ್ ಆನ್ನ ತತ್ವಗಳನ್ನು ಮೌಲ್ವಿಗಳು ಬೋಧಿಸಿದರು.</p>.<p>ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಲಕ್ಷಕ್ಕೂ ಹೆಚ್ಚು ಮುಸ್ಲಿಂ ಸಮುದಾಯದವರು ಉಪನ್ಯಾಸವನ್ನು ಆಲಿಸಿ ಧನ್ಯತಾ ಭಾವ ಮೆರೆದರು ಸಮುದಾಯದ ಮುಖಂಡರಾದ ಎಂ.ಆಲಂಪಾಷಾ ಮತ್ತು ಸೈಯದ್ ಹದಾಯತ್ ತಿಳಿಸಿದರು.</p>.<p>ಇಂದಿನ ಪೀಳಿಗೆಯವರಿಗೆ ಕುರ್ ಆನ್ ಗ್ರಂಥದ ತತ್ವಗಳು ಹಾಗೂ ಪ್ರವಾದಿಯವರ ಬೋಧನೆಗಳನ್ನು ವಿವರಿಸಿ ಮಾನವ ಜನ್ಮದ ಸಾರ್ಥಕತೆಯನ್ನು ಪಡೆಯುವಂತೆ ಪ್ರೇರೇಪಿಸುವುದಕ್ಕಾಗಿ ಈ ಕಾರ್ಯಕ್ರಮವನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿ ವರ್ಷ ಏರ್ಪಡಿಸಲಾಗುತ್ತದೆ ಎಂದು ಶಿವಮೊಗ್ಗ ನಿವಾಸಿ ಅಬ್ದುಲ್ ರೆಹಮಾನ್ ಹೇಳಿದರು.</p>.<p>ಹಜರತ್ ಬಾಬಾ ಬುಡೇನ್ ವಲಿಯರ ಗದ್ದುಗೆ ಇರುವ ಪವಿತ್ರ ಸ್ಥಳದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆದದ್ದು ಹಲವರಿಗೆ ಅನುಕೂಲವಾಗಿದೆ ಎಂದು ದಾವಣಗೆರೆಯ ನಜೀರ್ ಅಹಮ್ಮದ್ ಹೇಳಿದರು.</p>.<p>ಶಿವಮೊಗ್ಗ, ಸಾಗರ ಮತ್ತು ಶಿಕಾರಿಪುರದ ಮುಸ್ಲಿಂ ಸಮುದಾಯದವರು ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಿದ್ದರು. ಕೆಲವು ಭಕ್ತರು ಸ್ವಇಚ್ಛೆಯಿಂದ ಎಲ್ಲರಿಗೂ ಕಲ್ಲಂಗಡಿ ಹಣ್ಣು ಮತ್ತು ತಂಪು ಪಾನೀಯವನ್ನು ಉಚಿತವಾಗಿ ವಿತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಾಪಟ್ಟಣ:</strong> ಇಲ್ಲಿನ ಪ್ರಸಿದ್ಧ ಹಜರತ್ ಬಾಬಾ ಬುಡೇನ್ ವಲಿಯವರ ದರ್ಗಾದಲ್ಲಿ ನಡೆದ ಎರಡು ದಿನಗಳ ಸಾಲಾನಾ ತಬ್ಲೀಗಿ ಇಸ್ತೇವಾ ಧಾರ್ಮಿಕ ಬೋಧನಾ ಕಾರ್ಯಕ್ರಮ ಶುಕ್ರವಾರ ರಾತ್ರಿ ಮುಕ್ತಾಯವಾಯಿತು.</p>.<p>ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬೋಧನೆಗಳು ಮತ್ತು ಇಸ್ಲಾಂ ಪವಿತ್ರ ಗ್ರಂಥವಾದ ಕುರ್ ಆನ್ನ ತತ್ವಗಳನ್ನು ಮೌಲ್ವಿಗಳು ಬೋಧಿಸಿದರು.</p>.<p>ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಲಕ್ಷಕ್ಕೂ ಹೆಚ್ಚು ಮುಸ್ಲಿಂ ಸಮುದಾಯದವರು ಉಪನ್ಯಾಸವನ್ನು ಆಲಿಸಿ ಧನ್ಯತಾ ಭಾವ ಮೆರೆದರು ಸಮುದಾಯದ ಮುಖಂಡರಾದ ಎಂ.ಆಲಂಪಾಷಾ ಮತ್ತು ಸೈಯದ್ ಹದಾಯತ್ ತಿಳಿಸಿದರು.</p>.<p>ಇಂದಿನ ಪೀಳಿಗೆಯವರಿಗೆ ಕುರ್ ಆನ್ ಗ್ರಂಥದ ತತ್ವಗಳು ಹಾಗೂ ಪ್ರವಾದಿಯವರ ಬೋಧನೆಗಳನ್ನು ವಿವರಿಸಿ ಮಾನವ ಜನ್ಮದ ಸಾರ್ಥಕತೆಯನ್ನು ಪಡೆಯುವಂತೆ ಪ್ರೇರೇಪಿಸುವುದಕ್ಕಾಗಿ ಈ ಕಾರ್ಯಕ್ರಮವನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿ ವರ್ಷ ಏರ್ಪಡಿಸಲಾಗುತ್ತದೆ ಎಂದು ಶಿವಮೊಗ್ಗ ನಿವಾಸಿ ಅಬ್ದುಲ್ ರೆಹಮಾನ್ ಹೇಳಿದರು.</p>.<p>ಹಜರತ್ ಬಾಬಾ ಬುಡೇನ್ ವಲಿಯರ ಗದ್ದುಗೆ ಇರುವ ಪವಿತ್ರ ಸ್ಥಳದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆದದ್ದು ಹಲವರಿಗೆ ಅನುಕೂಲವಾಗಿದೆ ಎಂದು ದಾವಣಗೆರೆಯ ನಜೀರ್ ಅಹಮ್ಮದ್ ಹೇಳಿದರು.</p>.<p>ಶಿವಮೊಗ್ಗ, ಸಾಗರ ಮತ್ತು ಶಿಕಾರಿಪುರದ ಮುಸ್ಲಿಂ ಸಮುದಾಯದವರು ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಿದ್ದರು. ಕೆಲವು ಭಕ್ತರು ಸ್ವಇಚ್ಛೆಯಿಂದ ಎಲ್ಲರಿಗೂ ಕಲ್ಲಂಗಡಿ ಹಣ್ಣು ಮತ್ತು ತಂಪು ಪಾನೀಯವನ್ನು ಉಚಿತವಾಗಿ ವಿತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>