<p><strong>ಹರಿಹರ:</strong> ಹರಿಹರ- ದಾವಣಗೆರೆ ಅವಳಿ ನಗರ ಮಧ್ಯದಲ್ಲಿ ಬಾತಿ ಕೆರೆ ಇದೆ. ಬೀರೂರು-ಸಮ್ಮಸಗಿ (ಹಳೆ ಪೂನಾ-ಬೆಂಗಳೂರು ರಸ್ತೆ) ಹೆದ್ದಾರಿಗೆ ಅಂಟಿಕೊಂಡು ಅಂದಾಜು ಒಂದು ಕಿ.ಮೀ. ಉದ್ದದ ಏರಿಯನ್ನು ಈ ಕೆರೆ ಹೊಂದಿದೆ.</p>.<p>ರಸ್ತೆ ಬದಿಯಲ್ಲಿ ನದಿ, ಕೆರೆ, ಹೊಂಡ, ಹಳ್ಳಗಳಿದ್ದಲ್ಲಿ ಎರಡೂ ಕಡೆ ರಕ್ಷಣಾ ಗೋಡೆ ಅಥವಾ ಕಲ್ಲುಗಳನ್ನು ಅಳವಡಿಸಲಾಗುತ್ತದೆ. ಈ ಕೆರೆಗೆ ದಶಕಗಳ ಹಿಂದೆ ಅಳವಡಿಸಿದ್ದ ರಕ್ಷಣಾ ಕಲ್ಲುಗಳು ಕಾಲಾಂತರದಲ್ಲಿ ಕಿತ್ತು ಹೋಗಿವೆ.</p>.<p>ಈ ಹೆದ್ದಾರಿ ಪಿಡಬ್ಲ್ಯೂಡಿ ಇಲಾಖೆಗೆ ಸೇರಿದ್ದು, ಇಲಾಖೆ ಅಧಿಕಾರಿಗಳು ಸಮಸ್ಯೆಯನ್ನು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಈ ಕೆರೆ ನೀರಾವರಿ ಉದ್ದೇಶದ್ದಾಗಿದೆ. ಭದ್ರಾ ಕಾಲುವೆ ನೀರಿನ ಮೂಲವಾಗಿದ್ದು, ವರ್ಷದ 12 ತಿಂಗಳೂ ಈ ಕೆರೆಯಲ್ಲಿ ನೀರು ಇರುತ್ತದೆ. ಮಳೆಗಾಲದಲ್ಲಿ ಸುತ್ತಲಿನ ಜಮೀನುಗಳ ಬಸಿ ನೀರು ಸೇರಿ ನೀರಿನ ಪ್ರಮಾಣ ಹೆಚ್ಚಾಗಿರುತ್ತದೆ.</p>.<p><strong>ಆ ದುರಂತ ಮರೆಯಲಾದೀತೆ?:</strong></p>.<p>ದಾವಣಗೆಯಿಂದ ರಾಣೆಬೆನ್ನೂರು ತಾಲ್ಲೂಕು ಕರೂರು ಗ್ರಾಮಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ ಮಗುಚಿ ಕೆರೆ ಪಾತ್ರಕ್ಕೆ ಬಿದ್ದು 12 ಜನ ಅಸುನೀಗಿದ ಘಟನೆ 23 ವರ್ಷಗಳ ಹಿಂದೆ ನಡೆದಿತ್ತು. ಇದಲ್ಲದೇ ಸಣ್ಣ, ಪುಟ್ಟ ಅವಘಡಗಳು ಕೆರೆ ಏರಿಯಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ.</p>.<p>ಈ ರಸ್ತೆಯಲ್ಲಿ ಸಾರಿಗೆ ಸಂಸ್ಥೆಗೆ ಸೇರಿದ ಅಂದಾಜು 1,500 ಬಸ್ಸುಗಳು ಸಂಚರಿಸುತ್ತವೆ. ನೂರಾರು ಲಾರಿ, ಕಾರು, ಆಟೋ, ಬೈಕ್ ಇತರೆ ವಾಹನಗಳು ಹಗಲು– ರಾತ್ರಿ ಸಂಚರಿಸುತ್ತವೆ. ಅವಳಿ ನಗರವಾಗಿರುವುದರಿಂದ ವಿದ್ಯಾರ್ಥಿಗಳು, ಉದ್ಯೋಗಿ, ವ್ಯಾಪಾರಸ್ಥರು ಸಾವಿರಾರು ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಾರೆ.</p>.<p><strong>ಈ ರಸ್ತೆ ನೇರವಾಗಿಲ್ಲ:</strong></p>.<p>ಬಿಲ್ಲಿನ ರೂಪದಲ್ಲಿ ಈ ರಸ್ತೆ ಇದೆ. ಹೀಗಾಗಿ ವಾಹನ ಸವಾರರು ಸ್ವಲ್ಪ ಯಾಮಾರಿದರೂ, ಸೀದಾ ಕೆರೆಯ ಪಾತ್ರಕ್ಕೆ ವಾಹನ ಸಮೇತ ಬೀಳುತ್ತಾರೆ. 3 ವರ್ಷಗಳ ಹಿಂದೆ ಕೆರೆ ಏರಿ ಮೇಲಿನ ರಸ್ತೆ ವಿಸ್ತರಿಸಿ ದ್ವಿಪಥವಾಗಿಸಲಾಗಿದೆ. ಆಗ ಕಂದಕ ಇರುವ ಭಾಗಕ್ಕೆ ರಕ್ಷಣಾ ಗೋಡೆ ನಿರ್ಮಿಸಿ, ಕೆರೆ ಬದಿಗೆ ಹಾಗೇ ಬಿಡಲಾಗಿದೆ.</p>.<p>ಕೂಡಲೇ ಸಂಬಂಧಿತ ಅಧಿಕಾರಿಗಳು ಕೆರೆ ಏರಿಯ ಪೂರ್ಣ ಭಾಗಕ್ಕೆ ರಕ್ಷಣಾ ಗೋಡೆ ನಿರ್ಮಿಸಿ ಪ್ರಯಾಣಿಕರ ರಕ್ಷಣೆ ಮಾಡಬೇಕಿದೆ.</p>.<p>ವಾರದಲ್ಲಿ 5–6 ಬಾರಿಯಾದರೂ ದಾವಣಗೆರೆಗೆ ಬೈಕ್ನಲ್ಲಿ ಹೋಗಿ ಬರುತ್ತೇನೆ. ರಕ್ಷಣಾ ಗೋಡೆ ಇಲ್ಲದ ಕೆರೆ ಏರಿ ಮೇಲೆ ಸಾಗುವಾಗ ಭಯವಾಗುತ್ತದೆ. ರಾತ್ರಿ ವೇಳೆ ಇಲ್ಲಿ ಸಂಚರಿಸುವುದು ಅಪಾಯಕಾರಿ <strong>-ಜಿ.ಎಚ್.ಸಿದ್ದೇಶ್, ಬಾತಿ ನಿವಾಸಿ</strong> </p>.<p>ಕೆರೆ ಏರಿ ಮೇಲೆ ರಕ್ಷಣಾ ಗೋಡೆ ನಿರ್ಮಿಸಬೇಕಿದೆ ಇದಕ್ಕಾಗಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದರೆ ಕಾಮಗಾರಿ ನಡೆಸುತ್ತೇವೆ </p><p><strong>-ಕುಮಾರ ನಾಯ್ಕ ಎಇಇ ಪಿಡಬ್ಲ್ಯೂಡಿ ಇಲಾಖೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ:</strong> ಹರಿಹರ- ದಾವಣಗೆರೆ ಅವಳಿ ನಗರ ಮಧ್ಯದಲ್ಲಿ ಬಾತಿ ಕೆರೆ ಇದೆ. ಬೀರೂರು-ಸಮ್ಮಸಗಿ (ಹಳೆ ಪೂನಾ-ಬೆಂಗಳೂರು ರಸ್ತೆ) ಹೆದ್ದಾರಿಗೆ ಅಂಟಿಕೊಂಡು ಅಂದಾಜು ಒಂದು ಕಿ.ಮೀ. ಉದ್ದದ ಏರಿಯನ್ನು ಈ ಕೆರೆ ಹೊಂದಿದೆ.</p>.<p>ರಸ್ತೆ ಬದಿಯಲ್ಲಿ ನದಿ, ಕೆರೆ, ಹೊಂಡ, ಹಳ್ಳಗಳಿದ್ದಲ್ಲಿ ಎರಡೂ ಕಡೆ ರಕ್ಷಣಾ ಗೋಡೆ ಅಥವಾ ಕಲ್ಲುಗಳನ್ನು ಅಳವಡಿಸಲಾಗುತ್ತದೆ. ಈ ಕೆರೆಗೆ ದಶಕಗಳ ಹಿಂದೆ ಅಳವಡಿಸಿದ್ದ ರಕ್ಷಣಾ ಕಲ್ಲುಗಳು ಕಾಲಾಂತರದಲ್ಲಿ ಕಿತ್ತು ಹೋಗಿವೆ.</p>.<p>ಈ ಹೆದ್ದಾರಿ ಪಿಡಬ್ಲ್ಯೂಡಿ ಇಲಾಖೆಗೆ ಸೇರಿದ್ದು, ಇಲಾಖೆ ಅಧಿಕಾರಿಗಳು ಸಮಸ್ಯೆಯನ್ನು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಈ ಕೆರೆ ನೀರಾವರಿ ಉದ್ದೇಶದ್ದಾಗಿದೆ. ಭದ್ರಾ ಕಾಲುವೆ ನೀರಿನ ಮೂಲವಾಗಿದ್ದು, ವರ್ಷದ 12 ತಿಂಗಳೂ ಈ ಕೆರೆಯಲ್ಲಿ ನೀರು ಇರುತ್ತದೆ. ಮಳೆಗಾಲದಲ್ಲಿ ಸುತ್ತಲಿನ ಜಮೀನುಗಳ ಬಸಿ ನೀರು ಸೇರಿ ನೀರಿನ ಪ್ರಮಾಣ ಹೆಚ್ಚಾಗಿರುತ್ತದೆ.</p>.<p><strong>ಆ ದುರಂತ ಮರೆಯಲಾದೀತೆ?:</strong></p>.<p>ದಾವಣಗೆಯಿಂದ ರಾಣೆಬೆನ್ನೂರು ತಾಲ್ಲೂಕು ಕರೂರು ಗ್ರಾಮಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ ಮಗುಚಿ ಕೆರೆ ಪಾತ್ರಕ್ಕೆ ಬಿದ್ದು 12 ಜನ ಅಸುನೀಗಿದ ಘಟನೆ 23 ವರ್ಷಗಳ ಹಿಂದೆ ನಡೆದಿತ್ತು. ಇದಲ್ಲದೇ ಸಣ್ಣ, ಪುಟ್ಟ ಅವಘಡಗಳು ಕೆರೆ ಏರಿಯಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ.</p>.<p>ಈ ರಸ್ತೆಯಲ್ಲಿ ಸಾರಿಗೆ ಸಂಸ್ಥೆಗೆ ಸೇರಿದ ಅಂದಾಜು 1,500 ಬಸ್ಸುಗಳು ಸಂಚರಿಸುತ್ತವೆ. ನೂರಾರು ಲಾರಿ, ಕಾರು, ಆಟೋ, ಬೈಕ್ ಇತರೆ ವಾಹನಗಳು ಹಗಲು– ರಾತ್ರಿ ಸಂಚರಿಸುತ್ತವೆ. ಅವಳಿ ನಗರವಾಗಿರುವುದರಿಂದ ವಿದ್ಯಾರ್ಥಿಗಳು, ಉದ್ಯೋಗಿ, ವ್ಯಾಪಾರಸ್ಥರು ಸಾವಿರಾರು ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಾರೆ.</p>.<p><strong>ಈ ರಸ್ತೆ ನೇರವಾಗಿಲ್ಲ:</strong></p>.<p>ಬಿಲ್ಲಿನ ರೂಪದಲ್ಲಿ ಈ ರಸ್ತೆ ಇದೆ. ಹೀಗಾಗಿ ವಾಹನ ಸವಾರರು ಸ್ವಲ್ಪ ಯಾಮಾರಿದರೂ, ಸೀದಾ ಕೆರೆಯ ಪಾತ್ರಕ್ಕೆ ವಾಹನ ಸಮೇತ ಬೀಳುತ್ತಾರೆ. 3 ವರ್ಷಗಳ ಹಿಂದೆ ಕೆರೆ ಏರಿ ಮೇಲಿನ ರಸ್ತೆ ವಿಸ್ತರಿಸಿ ದ್ವಿಪಥವಾಗಿಸಲಾಗಿದೆ. ಆಗ ಕಂದಕ ಇರುವ ಭಾಗಕ್ಕೆ ರಕ್ಷಣಾ ಗೋಡೆ ನಿರ್ಮಿಸಿ, ಕೆರೆ ಬದಿಗೆ ಹಾಗೇ ಬಿಡಲಾಗಿದೆ.</p>.<p>ಕೂಡಲೇ ಸಂಬಂಧಿತ ಅಧಿಕಾರಿಗಳು ಕೆರೆ ಏರಿಯ ಪೂರ್ಣ ಭಾಗಕ್ಕೆ ರಕ್ಷಣಾ ಗೋಡೆ ನಿರ್ಮಿಸಿ ಪ್ರಯಾಣಿಕರ ರಕ್ಷಣೆ ಮಾಡಬೇಕಿದೆ.</p>.<p>ವಾರದಲ್ಲಿ 5–6 ಬಾರಿಯಾದರೂ ದಾವಣಗೆರೆಗೆ ಬೈಕ್ನಲ್ಲಿ ಹೋಗಿ ಬರುತ್ತೇನೆ. ರಕ್ಷಣಾ ಗೋಡೆ ಇಲ್ಲದ ಕೆರೆ ಏರಿ ಮೇಲೆ ಸಾಗುವಾಗ ಭಯವಾಗುತ್ತದೆ. ರಾತ್ರಿ ವೇಳೆ ಇಲ್ಲಿ ಸಂಚರಿಸುವುದು ಅಪಾಯಕಾರಿ <strong>-ಜಿ.ಎಚ್.ಸಿದ್ದೇಶ್, ಬಾತಿ ನಿವಾಸಿ</strong> </p>.<p>ಕೆರೆ ಏರಿ ಮೇಲೆ ರಕ್ಷಣಾ ಗೋಡೆ ನಿರ್ಮಿಸಬೇಕಿದೆ ಇದಕ್ಕಾಗಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದರೆ ಕಾಮಗಾರಿ ನಡೆಸುತ್ತೇವೆ </p><p><strong>-ಕುಮಾರ ನಾಯ್ಕ ಎಇಇ ಪಿಡಬ್ಲ್ಯೂಡಿ ಇಲಾಖೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>