ಹರಪನಹಳ್ಳಿ: ತಾಲ್ಲೂಕಿನ ನೀಲಗುಂದ ಗ್ರಾಮದ ರಾಷ್ಟ್ರೀಯ ಸ್ಮಾರಕ ಭೀಮೇಶ್ವರ ದೇವಸ್ಥಾನದ ಬಳಿ ಕರಡಿ ಪ್ರತ್ಯಕ್ಷವಾಗಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಗ್ರಾಮದಿಂದ ಮಜ್ಜಿಗೆರೆ ಗ್ರಾಮಕ್ಕೆ ತೆರಳುವ ರಸ್ತೆಯ ಪ್ರತ್ಯಕ್ಷವಾಗುವ ಕರಡಿಯು, ತಿರುವಿನಲ್ಲಿ ಓಡುತ್ತದೆ. ಬೈಕ್ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಕುರಿಗಾಯಿ ಯುವಕರು ಕರಡಿಯನ್ನು ಹಿಂಬಾಲಿಸಿ ಮೊಬೈಲ್ನಲ್ಲಿ ವಿಡಿಯೊ ಚಿತ್ರೀಕರಿಸಿದ್ದಾರೆ.
ಆ ಮಾರ್ಗದಲ್ಲಿ ಓಡಾಡುವ ರೈತರು, ಕೂಲಿ ಕಾರ್ಮಿಕರು ಜಾಗೃತೆಯಿಂದ ಇರುವಂತೆ ಮನವಿ ಮಾಡಿದ್ದಾರೆ. ಮೊಬೈಲ್ನಲ್ಲಿ ವಿಡಿಯೊ ಸೆರೆ ಹಿಡಿದಿರುವವರು ಯಾರೆಂಬುದು ತಿಳಿದಿಲ್ಲ.