ಕೋವ್ಯಾಕ್ಸಿನ್ ಲಸಿಕೆ ಮೂರನೇ ಪರೀಕ್ಷೆ ನಡೆಯದೇ ಜನರ ಮೇಲೆ ಪ್ರಯೋಗ ಮಾಡಲಾಗಿತ್ತು. ಆಗ ಪರೀಕ್ಷೆ ಪೂರ್ಣವಾದ ನಂತರ ಲಸಿಕೆ ಪ್ರಯೋಗ ನಡೆಯಲಿ. ಪ್ರಧಾನಿ ಮೋದಿ ಮತ್ತು ಅವರ ಸಂಪುಟ ಸದ್ಯಸರು ಮೊದಲು ಲಸಿಕೆ ಪಡೆಯಲಿ ಎಂದು ಕಾಂಗ್ರೆಸ್ ಹೇಳಿದ್ದು ನಿಜ. ಬಿಜೆಪಿಯವರು ಮೊದಲು ಲಸಿಕೆ ಪಡೆಯದೇ ಆಶಾ ಕಾರ್ಯಕರ್ತರು, ಕೊರೊನಾ ವಾರಿಯರ್ಸ್ ಮೇಲೆ ಲಸಿಕೆ ಪ್ರಯೋಗ ಮಾಡಿಸಿದ್ದರು. ಬಳಿಕ ತೆಗದುಕೊಂಡಿದ್ದರು. ಈಗ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಸಂಸದರು ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.