ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಬಿಜೆಪಿ ಮುಖಂಡ ವಾಗೀಶ್‌ ಸ್ವಾಮಿ ಕಾಂಗ್ರೆಸ್ ಸೇರ್ಪಡೆ

Published : 12 ಏಪ್ರಿಲ್ 2024, 5:34 IST
Last Updated : 12 ಏಪ್ರಿಲ್ 2024, 5:34 IST
ಫಾಲೋ ಮಾಡಿ
Comments
ಪುರಸಭಾ ಪಕ್ಷಾಂತರ ಪರ್ವ ಆರಂಭ
ಮಲೇಬೆನ್ನೂರು: ಪುರಸಭೆಯ 18ನೇ ವಾರ್ಡ್‌ ಪ್ರತಿನಿಧಿಸುತ್ತಿದ್ದ ಮಂಜುನಾಥ್‌ 6ನೇ ವಾರ್ಡ್‌ ಗೌಡ್ರ ಮಂಜಣ್ಣ 17ನೇ ವಾರ್ಡಿನ ಅಕ್ಕಮ್ಮ 8ನೇ ವಾರ್ಡ್ ಪಿ.ಆರ್‌. ಸುಧಾ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಲೋಕಸಭಾ ಚುನಾವಣೆಗೂ ಮುನ್ನ ಈ ನಾಲ್ವರು ಸದಸ್ಯರು ಸೇರ್ಪಡೆಯಾಗುವ ಮೂಲಕ ಬಿಜೆಪಿ ಹಾಗೂ ವಾರ್ಡ್‌ನ ಮತದಾರರಿಗೂ ಶಾಕ್‌ ನೀಡಿದೆ. ಕಾಂಗ್ರೆಸ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ. ಬಿ. ಅಬಿದ್‌ ಅಲಿ ಹರ್ಷ ವ್ಯಕ್ತಪಡಿಸಿದ್ದಾರೆ. ಸಚಿವರ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಎಸ್ಎಸ್.‌ ಮಲ್ಲಿಕಾರ್ಜುನ್ ಅವರು ಪಟ್ಟಣದ ವಿವಿಧ ಮುಖಂಡರ ಮನೆಗೆ ಭೇಟಿ ನೀಡಿ ಪ್ರಚಾರ ಕಾರ್ಯ ಹಾಗೂ ಈದ್ ಉಲ್ ಫಿತ್ರ್‌ ಶುಭಾಶಯ ಕೋರಿದರು.
‘ಶಿವನಹಳ್ಳಿ ರಮೇಶ್ ಜೊತೆ ಮಾತನಾಡುವೆ’
ದಾವಣಗೆರೆ: ‘ಶಿವನಹಳ್ಳಿ ರಮೇಶ್ ಅವರು ಬಿಜೆಪಿ ಸೇರ್ಪಡೆಯಾಗಿರುವ ಪ್ರತಿಕ್ರಿಯೆ ನೀಡಿ ‘ಅವರುಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿರಲಿಲ್ಲ ಅವರನ್ನು ಮಾತನಾಡಿಸುವೆ’ ಎಂದರು. ‘ಶುಕ್ರವಾರದಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗುತ್ತಿದ್ದು ಸಾಂಕೇತಿಕವಾಗಿ ಮೊದಲು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸುತ್ತೇವೆ. ಬಳಿಕ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲಾಗುವುದು. ಮೊದಲ ಹಂತದ ಮತದಾನ ಮುಗಿದ ಬಳಿಕ ರಾಜ್ಯ ರಾಷ್ಟ್ರ ನಾಯಕರು ದಾವಣಗೆರೆ ಕ್ಷೇತ್ರದಲ್ಲಿ ಮತ ಪ್ರಚಾರ ಕೈಗೊಳ್ಳಲಿದ್ದಾರೆ’ ಎಂದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT