<p><strong>ದಾವಣಗೆರೆ</strong>:ಕೊರೊನಾ ವಿಷಯವೇ ಮಹತ್ವ ಪಡೆದುಕೊಂಡಿರುವ ಇಂದಿನ ದಿನಗಳಲ್ಲಿ ರಕ್ತದಾನ ಮಾಡುವವರು ಕಡಿಮೆಯಾಗಿದ್ದಾರೆ. ಆದರೆದಾವಣಗೆರೆ ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜುಗಳು ನಡೆಯದಿದ್ದರೂ ರಕ್ತದಾನ ಮಾಡುವುದನ್ನು ಮರೆತಿಲ್ಲ.</p>.<p>ಯಾವ ವೇಳೆಗೆ ಕರೆ ಮಾಡಿದರೂ ಜನರ ಸಂಕಷ್ಟಕ್ಕೆ ಸ್ಪಂದಿಸುವ ವಿದ್ಯಾರ್ಥಿಗಳ ಕ್ರಿಯಾಶೀಲ ಗುಂಪು ಕಾಲೇಜಿನಲ್ಲಿದೆ. ‘ಓಂ ಸಾಯಿ ಸೋಷಿಯಲ್ ಸರ್ವೀಸ್’ ಹೆಸರಿನ ವಾಟ್ಸ್ಆ್ಯಪ್ ಗುಂಪು ರಚಿಸಿಕೊಂಡು ರೋಗಿಗಳ ನೆರವಿಗೆ ಮುಂದಾಗಿದೆ.</p>.<p>ಈ ಕಾಲೇಜಿನ ವಿದ್ಯಾರ್ಥಿಗಳು ಸೇರಿ ಅಧ್ಯಾಪಕರೆಲ್ಲರೂ ರಕ್ತದಾನ ಮಾಡುತ್ತಿದ್ದು, 2011ರಿಂದಲೂ ಈ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಈವರೆಗೆ 1500ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಲಾಗಿದೆ. ಕೋವಿಡ್ ಆರಂಭವಾದಾಗಿನಿಂದ 170 ಕ್ಕೂ ಹೆಚ್ಚು ಬಾರಿ ಹಲವು ವಿದ್ಯಾರ್ಥಿಗಳು ರಕ್ತ ನೀಡುವ ಮೂಲಕ ಅನೇಕ ಜನರ ಪ್ರಾಣ ಉಳಿಸಿದ್ದಾರೆ. 198 ಮಂದಿ ಸದಸ್ಯರು</p>.<p>ರೋಗಿಗಳ ಸಂಬಂಧಿಕರು ಕರೆ ಮಾಡಿದರೆ ಅವರ ರಕ್ತದ ಗುಂಪು ಹಾಗೂ ಮೊಬೈಲ್ ನಂಬರ್ಗಳನ್ನು ಸಮೇತ ‘ಓಂ ಸಾಯಿ ಸೋಷಿಯಲ್ ಸರ್ವೀಸ್’ ಗುಂಪಿಗೆ ಮಾಹಿತಿ ನೀಡುತ್ತಾರೆ. ಆ ರಕ್ತದ ಗುಂಪಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸ್ಪಂದಿಸಿ ರಕ್ತದಾನ ಮಾಡುತ್ತಾರೆ. ಇತರರಿಗೂ ಪ್ರೇರಣೆಯಾಗುವಂತೆ ಅವರು ರಕ್ತದಾನ ಮಾಡಿದ ಫೋಟೊವನ್ನು ಹಾಕಿ ಅವರನ್ನು ಶ್ಲಾಘಿಸುವ ಕೆಲಸವಾಗುತ್ತಿದೆ.</p>.<p>‘ಈ ಕಾಲೇಜಿನ ವಿದ್ಯಾರ್ಥಿಗಳು ರಕ್ತದಾನ ಮಾಡಿದಾಗ ಯಾವುದೇ ಹಣ ಪಡೆಯುವುದಿಲ್ಲ. ಅವರು ಹೇಳಿದ ಜಾಗಕ್ಕೆ ಹೋಗಿ ರಕ್ತ ಕೊಟ್ಟು ಬರುತ್ತಾರೆ. ಒಂದು ಜೀವದ ಉಳಿವಿಗೆ ಕಾರಣರಾದೆವು ಎಂಬ ಧನ್ಯತೆ ವಿದ್ಯಾರ್ಥಿಗಳದ್ದು’ ಎಂದು ಹೇಳುತ್ತಾರೆ’ ಕಾಲೇಜಿನ ಕಿರಿಯ ತರಬೇತಿ ಅಧಿಕಾರಿ ಮಂಜುನಾಥ್ ಎಚ್.</p>.<p class="Subhead"><strong>ರಕ್ತದಾನಕ್ಕೆ ಪ್ರೇರಣೆ:</strong>‘1996–97ರಲ್ಲಿ ನನ್ನ ತಾಯಿಗೆ ಅನಾರೋಗ್ಯ ಕಾಣಿಸಿಕೊಂಡಿತು. ಆ ವೇಳೆ ಶಸ್ತ್ರಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಆ ವೇಳೆ ಬೇರೆಯವರು ಬಂದು ರಕ್ತದಾನ ಮಾಡಿದರು. ಇದರಿಂದ ನಾನೂ ರಕ್ತದಾನ ಮಾಡಬೇಕು ಎಂದು ಪ್ರೇರಣೆಯಾಯಿತು’ ಎನ್ನುತ್ತಾರೆ ಮಂಜುನಾಥ್.</p>.<p>‘ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿನ ‘ಲೈಫ್ಲೈನ್’ ಸಂಸ್ಥೆಯ ಸದಸ್ಯತ್ವ ಪಡೆದಿದ್ದು, ಹಲವು ಬಾರಿ ರಕ್ತದಾನ ಮಾಡಿದ್ದಾರೆ. ವಿದ್ಯಾರ್ಥಿಗಳು ಕಾಲೇಜಿನಿಂದ ಪಾಸಾಗಿ ಬೇರೆ ಊರಿಗೆ ಹೋದರೂ ಇಲ್ಲಿಗೆ ಬಂದು ರಕ್ತದಾನ ಮಾಡಿದ್ದಾರೆ’ ಎಂದು ಮಂಜುನಾಥ್ ಹೇಳುತ್ತಾರೆ.</p>.<p>‘ಪ್ರತಿ ವರ್ಷ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಹೆಚ್ಚು ಬಾರಿ ರಕ್ತದಾನ ಮಾಡಿದವರನ್ನು ‘ಲೈಫ್ಲೈನ್’ ಸಂಸ್ಥೆಯಿಂದ ಸನ್ಮಾನಿಸಲಾಗುತ್ತದೆ. ಕಾಲೇಜಿನಲ್ಲಿ ಪ್ರಾರ್ಥನೆ ವೇಳೆ ರಕ್ತದಾನಿಗಳನ್ನು ಅಭಿನಂದಿಸಲಾಗುತ್ತದೆ. ರಕ್ತ ಬೇಕಾದವರು– ಮೊಬೈಲ್ ಸಂಖ್ಯೆ 9164855564 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>:ಕೊರೊನಾ ವಿಷಯವೇ ಮಹತ್ವ ಪಡೆದುಕೊಂಡಿರುವ ಇಂದಿನ ದಿನಗಳಲ್ಲಿ ರಕ್ತದಾನ ಮಾಡುವವರು ಕಡಿಮೆಯಾಗಿದ್ದಾರೆ. ಆದರೆದಾವಣಗೆರೆ ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜುಗಳು ನಡೆಯದಿದ್ದರೂ ರಕ್ತದಾನ ಮಾಡುವುದನ್ನು ಮರೆತಿಲ್ಲ.</p>.<p>ಯಾವ ವೇಳೆಗೆ ಕರೆ ಮಾಡಿದರೂ ಜನರ ಸಂಕಷ್ಟಕ್ಕೆ ಸ್ಪಂದಿಸುವ ವಿದ್ಯಾರ್ಥಿಗಳ ಕ್ರಿಯಾಶೀಲ ಗುಂಪು ಕಾಲೇಜಿನಲ್ಲಿದೆ. ‘ಓಂ ಸಾಯಿ ಸೋಷಿಯಲ್ ಸರ್ವೀಸ್’ ಹೆಸರಿನ ವಾಟ್ಸ್ಆ್ಯಪ್ ಗುಂಪು ರಚಿಸಿಕೊಂಡು ರೋಗಿಗಳ ನೆರವಿಗೆ ಮುಂದಾಗಿದೆ.</p>.<p>ಈ ಕಾಲೇಜಿನ ವಿದ್ಯಾರ್ಥಿಗಳು ಸೇರಿ ಅಧ್ಯಾಪಕರೆಲ್ಲರೂ ರಕ್ತದಾನ ಮಾಡುತ್ತಿದ್ದು, 2011ರಿಂದಲೂ ಈ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಈವರೆಗೆ 1500ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಲಾಗಿದೆ. ಕೋವಿಡ್ ಆರಂಭವಾದಾಗಿನಿಂದ 170 ಕ್ಕೂ ಹೆಚ್ಚು ಬಾರಿ ಹಲವು ವಿದ್ಯಾರ್ಥಿಗಳು ರಕ್ತ ನೀಡುವ ಮೂಲಕ ಅನೇಕ ಜನರ ಪ್ರಾಣ ಉಳಿಸಿದ್ದಾರೆ. 198 ಮಂದಿ ಸದಸ್ಯರು</p>.<p>ರೋಗಿಗಳ ಸಂಬಂಧಿಕರು ಕರೆ ಮಾಡಿದರೆ ಅವರ ರಕ್ತದ ಗುಂಪು ಹಾಗೂ ಮೊಬೈಲ್ ನಂಬರ್ಗಳನ್ನು ಸಮೇತ ‘ಓಂ ಸಾಯಿ ಸೋಷಿಯಲ್ ಸರ್ವೀಸ್’ ಗುಂಪಿಗೆ ಮಾಹಿತಿ ನೀಡುತ್ತಾರೆ. ಆ ರಕ್ತದ ಗುಂಪಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸ್ಪಂದಿಸಿ ರಕ್ತದಾನ ಮಾಡುತ್ತಾರೆ. ಇತರರಿಗೂ ಪ್ರೇರಣೆಯಾಗುವಂತೆ ಅವರು ರಕ್ತದಾನ ಮಾಡಿದ ಫೋಟೊವನ್ನು ಹಾಕಿ ಅವರನ್ನು ಶ್ಲಾಘಿಸುವ ಕೆಲಸವಾಗುತ್ತಿದೆ.</p>.<p>‘ಈ ಕಾಲೇಜಿನ ವಿದ್ಯಾರ್ಥಿಗಳು ರಕ್ತದಾನ ಮಾಡಿದಾಗ ಯಾವುದೇ ಹಣ ಪಡೆಯುವುದಿಲ್ಲ. ಅವರು ಹೇಳಿದ ಜಾಗಕ್ಕೆ ಹೋಗಿ ರಕ್ತ ಕೊಟ್ಟು ಬರುತ್ತಾರೆ. ಒಂದು ಜೀವದ ಉಳಿವಿಗೆ ಕಾರಣರಾದೆವು ಎಂಬ ಧನ್ಯತೆ ವಿದ್ಯಾರ್ಥಿಗಳದ್ದು’ ಎಂದು ಹೇಳುತ್ತಾರೆ’ ಕಾಲೇಜಿನ ಕಿರಿಯ ತರಬೇತಿ ಅಧಿಕಾರಿ ಮಂಜುನಾಥ್ ಎಚ್.</p>.<p class="Subhead"><strong>ರಕ್ತದಾನಕ್ಕೆ ಪ್ರೇರಣೆ:</strong>‘1996–97ರಲ್ಲಿ ನನ್ನ ತಾಯಿಗೆ ಅನಾರೋಗ್ಯ ಕಾಣಿಸಿಕೊಂಡಿತು. ಆ ವೇಳೆ ಶಸ್ತ್ರಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಆ ವೇಳೆ ಬೇರೆಯವರು ಬಂದು ರಕ್ತದಾನ ಮಾಡಿದರು. ಇದರಿಂದ ನಾನೂ ರಕ್ತದಾನ ಮಾಡಬೇಕು ಎಂದು ಪ್ರೇರಣೆಯಾಯಿತು’ ಎನ್ನುತ್ತಾರೆ ಮಂಜುನಾಥ್.</p>.<p>‘ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿನ ‘ಲೈಫ್ಲೈನ್’ ಸಂಸ್ಥೆಯ ಸದಸ್ಯತ್ವ ಪಡೆದಿದ್ದು, ಹಲವು ಬಾರಿ ರಕ್ತದಾನ ಮಾಡಿದ್ದಾರೆ. ವಿದ್ಯಾರ್ಥಿಗಳು ಕಾಲೇಜಿನಿಂದ ಪಾಸಾಗಿ ಬೇರೆ ಊರಿಗೆ ಹೋದರೂ ಇಲ್ಲಿಗೆ ಬಂದು ರಕ್ತದಾನ ಮಾಡಿದ್ದಾರೆ’ ಎಂದು ಮಂಜುನಾಥ್ ಹೇಳುತ್ತಾರೆ.</p>.<p>‘ಪ್ರತಿ ವರ್ಷ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಹೆಚ್ಚು ಬಾರಿ ರಕ್ತದಾನ ಮಾಡಿದವರನ್ನು ‘ಲೈಫ್ಲೈನ್’ ಸಂಸ್ಥೆಯಿಂದ ಸನ್ಮಾನಿಸಲಾಗುತ್ತದೆ. ಕಾಲೇಜಿನಲ್ಲಿ ಪ್ರಾರ್ಥನೆ ವೇಳೆ ರಕ್ತದಾನಿಗಳನ್ನು ಅಭಿನಂದಿಸಲಾಗುತ್ತದೆ. ರಕ್ತ ಬೇಕಾದವರು– ಮೊಬೈಲ್ ಸಂಖ್ಯೆ 9164855564 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>