<p><strong>ಸಂತೇಬೆನ್ನೂರು</strong>: ಕೋವಿಡ್ ಅಲೆ ಕಡಿಮೆಯಾಗುತ್ತಿರುವುದರಿಂದ ಸೂಳೆಕೆರೆಯಲ್ಲಿ ವಿನೂತನ ದೋಣಿ ವಿಹಾರದ ಸೌಲಭ್ಯ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ತುಂಬಿ ತುಳುಕುವ ಕೆರೆ ನೀರಿನಲ್ಲಿ ತಂಗಾಳಿ ಸ್ಪರ್ಶದೊಂದಿಗೆ ತೊಯ್ದಾಡುವ ದೋಣಿ ಚಾಲನೆ ಮನೋಲ್ಲಾಸ ನೀಡುತ್ತಿದೆ.</p>.<p>ಈಚೆಗೆ ಎರಡು ಆಧುನಿಕ ರ್ಯಾಫ್ಟರ್ ಹಾಗೂ ಕಯಾಕಿಂಗ್ ದೋಣಿಗಳನ್ನು ಪರಿಕ್ಷಾರ್ಥ ನೀರಿಗಿಳಿಸಲಾಗಿದೆ. ತಲಾ 12 ಜನ ಕುಳಿತುಕೊಳ್ಳುವ 2 ರ್ಯಾಫ್ಟರ್ ದೋಣಿಗಳಿವೆ. ಪ್ರವಾಸಿಗರಿಗೇ ಹುಟ್ಟು ಹಾಕುವ ಅವಕಾಶ ನೀಡಲಾಗಿದೆ. ಇಬ್ಬರು ಹಾಗೂ ಒಬ್ಬರೇ ತೇಲುವ ಕಯಾಕಿಂಗ್ನ 3 ದೋಣಿಗಳಿವೆ. ದೋಣಿ ವಿಹಾರ ಕೇಂದ್ರದಿಂದ 500 ಮೀಟರ್ ವ್ಯಾಪ್ತಿಯಲ್ಲಿ ಸಂಚರಿಸಬಹುದು.</p>.<p>‘ಪ್ರತಿಯೊಬ್ಬರಿಗೆ ತಲಾ ₹ 100 ಶುಲ್ಕ ನಿಗದಿಗೊಳಿಸಲಾಗಿದೆ. ಜೀವ ರಕ್ಷಕ ಜಾಕೆಟ್ಗಳನ್ನು ಕಡ್ಡಾಯವಾಗಿ ಧರಿಸಬೇಕು. ಒಮ್ಮೆ 30 ನಿಮಿಷ ದೋಣಿ ವಿಹಾರ ನಡೆಸಲು ಪ್ರವಾಸಿಗರಿಗೆ ಅವಕಾಶವಿದೆ. ಜಂಗಲ್ ಲಾಡ್ಜನ ‘ಮಾನಸ ಅಡ್ವೆಂಚರ್ಸ್’ ದೋಣಿ ವಿಹಾರದ ಸೌಲಭ್ಯ ನೀಡುತ್ತಿದೆ’ ಎನ್ನುತ್ತಾರೆ ಜಂಗಲ್ ಲಾಡ್ಜಸ್ ವ್ಯವಸ್ಥಾಪಕರಾದ<br />ರೂಪೇಶ್.</p>.<p>‘ಏಷ್ಯಾ ಖಂಡದ ಎರಡನೇ ದೊಡ್ಡ ಕೆರೆಯಾದ ಸೂಳೆಕೆರೆಯಲ್ಲಿ ದೋಣಿ ವಿಹಾರ ಸಂತಸ ನೀಡುತ್ತಿದೆ. ಕೇರಳ ರಾಜ್ಯದಲ್ಲಿರುವಂತೆ ಪ್ರವಾಸಿ ತಾಣಗಳು ಅಭಿವೃದ್ಧಿಗೊಳ್ಳಬೇಕು. ದೋಣಿ ವಿಹಾರ ಸೌಲಭ್ಯ ಈ ನಿಟ್ಟಿನಲ್ಲಿ ಬೃಹತ್ ಹೆಜ್ಜೆ ಆಗಿದೆ’ ಎನ್ನುತ್ತಾರೆ ಪ್ರವಾಸಿಗ ಯತೀಶ್.</p>.<p class="Briefhead"><strong>ಸೌಲಭ್ಯ ಹೆಚ್ಚಿಸುವ ಪ್ರಯತ್ನ</strong></p>.<p>ಗಣರಾಜ್ಯೋತ್ಸವದ ನಿಮಿತ್ತ ಸೂಳೆಕೆರೆಯಲ್ಲಿ ಮೊಮ್ಮಕ್ಕಳೊಂದಿಗೆ ದೋಣಿ ವಿಹಾರ ಮಾಡಿದ್ದು ಸಂತಸ ನೀಡಿದೆ. ಕೋವಿಡ್ ನಂತರ ಪ್ರವಾಸಿಗರನ್ನು ಆಕರ್ಷಿಸಲು ಸೌಲಭ್ಯ ಹೆಚ್ಚಿಸುವ ಪ್ರಯತ್ನ ನಡೆದಿದೆ. ಮಾಡಾಳ್ ವಿರೂಪಾಕ್ಷಪ್ಪ, ರಾಜ್ಯ ಸಾಬೂನು ಹಾಗೂ ಮಾರ್ಜಕ ನಿಯಮಿತದ ಅಧ್ಯಕ್ಷ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂತೇಬೆನ್ನೂರು</strong>: ಕೋವಿಡ್ ಅಲೆ ಕಡಿಮೆಯಾಗುತ್ತಿರುವುದರಿಂದ ಸೂಳೆಕೆರೆಯಲ್ಲಿ ವಿನೂತನ ದೋಣಿ ವಿಹಾರದ ಸೌಲಭ್ಯ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ತುಂಬಿ ತುಳುಕುವ ಕೆರೆ ನೀರಿನಲ್ಲಿ ತಂಗಾಳಿ ಸ್ಪರ್ಶದೊಂದಿಗೆ ತೊಯ್ದಾಡುವ ದೋಣಿ ಚಾಲನೆ ಮನೋಲ್ಲಾಸ ನೀಡುತ್ತಿದೆ.</p>.<p>ಈಚೆಗೆ ಎರಡು ಆಧುನಿಕ ರ್ಯಾಫ್ಟರ್ ಹಾಗೂ ಕಯಾಕಿಂಗ್ ದೋಣಿಗಳನ್ನು ಪರಿಕ್ಷಾರ್ಥ ನೀರಿಗಿಳಿಸಲಾಗಿದೆ. ತಲಾ 12 ಜನ ಕುಳಿತುಕೊಳ್ಳುವ 2 ರ್ಯಾಫ್ಟರ್ ದೋಣಿಗಳಿವೆ. ಪ್ರವಾಸಿಗರಿಗೇ ಹುಟ್ಟು ಹಾಕುವ ಅವಕಾಶ ನೀಡಲಾಗಿದೆ. ಇಬ್ಬರು ಹಾಗೂ ಒಬ್ಬರೇ ತೇಲುವ ಕಯಾಕಿಂಗ್ನ 3 ದೋಣಿಗಳಿವೆ. ದೋಣಿ ವಿಹಾರ ಕೇಂದ್ರದಿಂದ 500 ಮೀಟರ್ ವ್ಯಾಪ್ತಿಯಲ್ಲಿ ಸಂಚರಿಸಬಹುದು.</p>.<p>‘ಪ್ರತಿಯೊಬ್ಬರಿಗೆ ತಲಾ ₹ 100 ಶುಲ್ಕ ನಿಗದಿಗೊಳಿಸಲಾಗಿದೆ. ಜೀವ ರಕ್ಷಕ ಜಾಕೆಟ್ಗಳನ್ನು ಕಡ್ಡಾಯವಾಗಿ ಧರಿಸಬೇಕು. ಒಮ್ಮೆ 30 ನಿಮಿಷ ದೋಣಿ ವಿಹಾರ ನಡೆಸಲು ಪ್ರವಾಸಿಗರಿಗೆ ಅವಕಾಶವಿದೆ. ಜಂಗಲ್ ಲಾಡ್ಜನ ‘ಮಾನಸ ಅಡ್ವೆಂಚರ್ಸ್’ ದೋಣಿ ವಿಹಾರದ ಸೌಲಭ್ಯ ನೀಡುತ್ತಿದೆ’ ಎನ್ನುತ್ತಾರೆ ಜಂಗಲ್ ಲಾಡ್ಜಸ್ ವ್ಯವಸ್ಥಾಪಕರಾದ<br />ರೂಪೇಶ್.</p>.<p>‘ಏಷ್ಯಾ ಖಂಡದ ಎರಡನೇ ದೊಡ್ಡ ಕೆರೆಯಾದ ಸೂಳೆಕೆರೆಯಲ್ಲಿ ದೋಣಿ ವಿಹಾರ ಸಂತಸ ನೀಡುತ್ತಿದೆ. ಕೇರಳ ರಾಜ್ಯದಲ್ಲಿರುವಂತೆ ಪ್ರವಾಸಿ ತಾಣಗಳು ಅಭಿವೃದ್ಧಿಗೊಳ್ಳಬೇಕು. ದೋಣಿ ವಿಹಾರ ಸೌಲಭ್ಯ ಈ ನಿಟ್ಟಿನಲ್ಲಿ ಬೃಹತ್ ಹೆಜ್ಜೆ ಆಗಿದೆ’ ಎನ್ನುತ್ತಾರೆ ಪ್ರವಾಸಿಗ ಯತೀಶ್.</p>.<p class="Briefhead"><strong>ಸೌಲಭ್ಯ ಹೆಚ್ಚಿಸುವ ಪ್ರಯತ್ನ</strong></p>.<p>ಗಣರಾಜ್ಯೋತ್ಸವದ ನಿಮಿತ್ತ ಸೂಳೆಕೆರೆಯಲ್ಲಿ ಮೊಮ್ಮಕ್ಕಳೊಂದಿಗೆ ದೋಣಿ ವಿಹಾರ ಮಾಡಿದ್ದು ಸಂತಸ ನೀಡಿದೆ. ಕೋವಿಡ್ ನಂತರ ಪ್ರವಾಸಿಗರನ್ನು ಆಕರ್ಷಿಸಲು ಸೌಲಭ್ಯ ಹೆಚ್ಚಿಸುವ ಪ್ರಯತ್ನ ನಡೆದಿದೆ. ಮಾಡಾಳ್ ವಿರೂಪಾಕ್ಷಪ್ಪ, ರಾಜ್ಯ ಸಾಬೂನು ಹಾಗೂ ಮಾರ್ಜಕ ನಿಯಮಿತದ ಅಧ್ಯಕ್ಷ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>