<p><strong>ದಾವಣಗೆರೆ</strong>: ದಾವಣಗೆರೆಯಿಂದ –ಬೆಂಗಳೂರಿಗೆ ಕೆಎಸ್ಆರ್ಟಿಸಿ ಬಸ್ಗಳು ಬಾರದೇ ಇದ್ದುದರಿಂದ ಸೋಮವಾರ ರಾತ್ರಿ ಪ್ರಯಾಣಿಕರು ಕೆಎಸ್ಆರ್ಟಿಸಿ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು.</p>.<p>ಸೋಮವಾರ ರಾತ್ರಿ 12.30ರಿಂದ 2 ಗಂಟೆಯ ತನಕ ಬೆಂಗಳೂರಿಗೆ ಯಾವುದೇ ಬಸ್ಗಳು ಬಂದಿಲ್ಲ. ಇದರಿಂದಾಗಿ ಬೆಂಗಳೂರಿಗೆ ತೆರಳಬೇಕಿದ್ದ ಹಲವು ಮಹಿಳೆಯರು, ಮಕ್ಕಳು ಸೇರಿದಮತೆ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ಬಸ್ ಸೌಲಭ್ಯ ಬೇಕು ಎಂದು ಕೆಲಕಾಲ ವಾಗ್ವಾದ ನಡೆಸಿದರು.</p>.<p>ರಾಜ್ಯದ ಮಧ್ಯಭಾಗವಾಗಿರುವ ದಾವಣಗೆರೆ ಹಲವು ಭಾಗಗಳಿಂದ ಪ್ರಯಾಣಿಕರು ಬರುತ್ತಾರೆ. ರಾತ್ರಿ ವೇಳೆ ಬಸ್ಗಳು ಇಲ್ಲದೇ ಪರದಾಡುವಂತಾಯಿತು ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.</p>.<p>‘ದಾವಣಗೆರೆಯಿಂದ ಬೆಂಗಳೂರಿಗೆ ಹೋಗಲು ಕೊನೆಯ ಟ್ರಿಪ್ 11.30ಕ್ಕೆ ಇದೆ. ಆ ನಂತರ ಬರುವ ಪ್ರಯಾಣಿಕರು ಉತ್ತರ ಕರ್ನಾಟಕ ಭಾಗಗಳಿಂದ ಸಾಕಷ್ಟು ಸಂಖ್ಯೆಯ ಬಸ್ಗಳು ಬರುತ್ತವೆ. ಆದರೆ ಸೋಮವಾರ ಯಾವ ಕಾರಣಕ್ಕೆ ಸಮಸ್ಯೆಯಾಯಿತು ಎಂಬುದು ತಿಳಿದಿಲ್ಲ. ಬಳಿಕ ಒಂದು ಬಸ್ ಅನ್ನು ಕಳುಹಿಸಲಾಯಿತು’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಸಿ.ಈ. ಶ್ರೀನಿವಾಸಮೂರ್ತಿ ತಿಳಿಸಿದರು.</p>.<p>‘ಬಸ್ಗಳ ಕೊರತೆ ಇರುವುದರಿಂದ ಸ್ವಲ್ಪ ಸಮಸ್ಯೆಯಾಗಿದೆ. ಆದರೆ ನಾವು ಇರುವಷ್ಟು ಸಂಖ್ಯೆಯ ಬಸ್ಗಳನ್ನು ಓಡಿಸುತ್ತಿದ್ದೇವೆ. ಬಿಎಂಟಿಸಿಯಿಂದ ದಾವಣಗೆರೆಗೆ 9 ಬಸ್ಗಳು ಬಂದಿದ್ದು, ಅವುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಸ್ಗಳು ದಾವಣಗೆರೆ ಡಿಪೊಗೆ ಬರಲಿವೆ’ ಎಂದರು.</p>.<p><strong>ಸಮಸ್ಯೆ ಏನು:</strong></p>.<p>‘ಉತ್ತರ ಕರ್ನಾಟಕದ ಭಾಗಗಳಿಂದ ಬರುವ ಬಸ್ಗಳು ರಾತ್ರಿ ಊಟಕ್ಕೆ ನಿಲ್ಲಿಸಿ ಎಲ್ಲಾ ಬಸ್ಗಳು ಒಮ್ಮೆಲೆ ಒಂದೇ ಬರುವುದರಿಂದ ದಾವಣಗೆರೆಗೆ ರಾತ್ರಿ 2ಗಂಟೆಯ ನಂತರ ದಾವಣಗೆರೆಗೆ ಬರುತ್ತವೆ. ಮಧ್ಯದ ಅವಧಿಯಲ್ಲಿ ಬಸ್ಗಳು ಬಾರದೇ ಇರುವುದರಿಂದ ಸಮಸ್ಯೆಯಾಗುತ್ತದೆ’ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ದಾವಣಗೆರೆಯಿಂದ –ಬೆಂಗಳೂರಿಗೆ ಕೆಎಸ್ಆರ್ಟಿಸಿ ಬಸ್ಗಳು ಬಾರದೇ ಇದ್ದುದರಿಂದ ಸೋಮವಾರ ರಾತ್ರಿ ಪ್ರಯಾಣಿಕರು ಕೆಎಸ್ಆರ್ಟಿಸಿ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು.</p>.<p>ಸೋಮವಾರ ರಾತ್ರಿ 12.30ರಿಂದ 2 ಗಂಟೆಯ ತನಕ ಬೆಂಗಳೂರಿಗೆ ಯಾವುದೇ ಬಸ್ಗಳು ಬಂದಿಲ್ಲ. ಇದರಿಂದಾಗಿ ಬೆಂಗಳೂರಿಗೆ ತೆರಳಬೇಕಿದ್ದ ಹಲವು ಮಹಿಳೆಯರು, ಮಕ್ಕಳು ಸೇರಿದಮತೆ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ಬಸ್ ಸೌಲಭ್ಯ ಬೇಕು ಎಂದು ಕೆಲಕಾಲ ವಾಗ್ವಾದ ನಡೆಸಿದರು.</p>.<p>ರಾಜ್ಯದ ಮಧ್ಯಭಾಗವಾಗಿರುವ ದಾವಣಗೆರೆ ಹಲವು ಭಾಗಗಳಿಂದ ಪ್ರಯಾಣಿಕರು ಬರುತ್ತಾರೆ. ರಾತ್ರಿ ವೇಳೆ ಬಸ್ಗಳು ಇಲ್ಲದೇ ಪರದಾಡುವಂತಾಯಿತು ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.</p>.<p>‘ದಾವಣಗೆರೆಯಿಂದ ಬೆಂಗಳೂರಿಗೆ ಹೋಗಲು ಕೊನೆಯ ಟ್ರಿಪ್ 11.30ಕ್ಕೆ ಇದೆ. ಆ ನಂತರ ಬರುವ ಪ್ರಯಾಣಿಕರು ಉತ್ತರ ಕರ್ನಾಟಕ ಭಾಗಗಳಿಂದ ಸಾಕಷ್ಟು ಸಂಖ್ಯೆಯ ಬಸ್ಗಳು ಬರುತ್ತವೆ. ಆದರೆ ಸೋಮವಾರ ಯಾವ ಕಾರಣಕ್ಕೆ ಸಮಸ್ಯೆಯಾಯಿತು ಎಂಬುದು ತಿಳಿದಿಲ್ಲ. ಬಳಿಕ ಒಂದು ಬಸ್ ಅನ್ನು ಕಳುಹಿಸಲಾಯಿತು’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಸಿ.ಈ. ಶ್ರೀನಿವಾಸಮೂರ್ತಿ ತಿಳಿಸಿದರು.</p>.<p>‘ಬಸ್ಗಳ ಕೊರತೆ ಇರುವುದರಿಂದ ಸ್ವಲ್ಪ ಸಮಸ್ಯೆಯಾಗಿದೆ. ಆದರೆ ನಾವು ಇರುವಷ್ಟು ಸಂಖ್ಯೆಯ ಬಸ್ಗಳನ್ನು ಓಡಿಸುತ್ತಿದ್ದೇವೆ. ಬಿಎಂಟಿಸಿಯಿಂದ ದಾವಣಗೆರೆಗೆ 9 ಬಸ್ಗಳು ಬಂದಿದ್ದು, ಅವುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಸ್ಗಳು ದಾವಣಗೆರೆ ಡಿಪೊಗೆ ಬರಲಿವೆ’ ಎಂದರು.</p>.<p><strong>ಸಮಸ್ಯೆ ಏನು:</strong></p>.<p>‘ಉತ್ತರ ಕರ್ನಾಟಕದ ಭಾಗಗಳಿಂದ ಬರುವ ಬಸ್ಗಳು ರಾತ್ರಿ ಊಟಕ್ಕೆ ನಿಲ್ಲಿಸಿ ಎಲ್ಲಾ ಬಸ್ಗಳು ಒಮ್ಮೆಲೆ ಒಂದೇ ಬರುವುದರಿಂದ ದಾವಣಗೆರೆಗೆ ರಾತ್ರಿ 2ಗಂಟೆಯ ನಂತರ ದಾವಣಗೆರೆಗೆ ಬರುತ್ತವೆ. ಮಧ್ಯದ ಅವಧಿಯಲ್ಲಿ ಬಸ್ಗಳು ಬಾರದೇ ಇರುವುದರಿಂದ ಸಮಸ್ಯೆಯಾಗುತ್ತದೆ’ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>