<p><strong>ಹರಿಹರ:</strong> ನಗರದ ಹೊರವಲಯದ ರೈಲ್ವೆ ಮೇಲು ಸೇತುವೆ ಸಮೀಪದ ಡಿ.ಬಿ. ಕೆರೆ ಕಾಲುವೆಗೆ ಮಂಗಳವಾರ ಕಾರೊಂದು ಬಿದ್ದಿದ್ದು, ಸ್ಥಳೀಯರು ಐವರು ಪ್ರಯಾಣಿಕರನ್ನು ರಕ್ಷಿಸಿದ್ದಾರೆ.</p>.<p>ಇಲ್ಲಿನ ಇಂದಿರಾನಗರದ ವಾಸಿ ಕಿಶೋರ್ ಎಂಬುವವರು ತಮ್ಮ ಮೂವರು ಮಕ್ಕಳು ಹಾಗೂ ಚಾಲಕನೊಂದಿಗೆ ದಾವಣಗೆರೆಗೆ ಹೋಗಿ ವಾಪಸ್ ಬರುವಾಗ ಘಟನೆ ನಡೆದಿದೆ.</p>.<p>ರಾತ್ರಿ 10 ಗಂಟೆ ಸಮಯಕ್ಕೆ ಕಾಲುವೆಗೆ ಕಾರು ಬಿದ್ದಿದ್ದು, ಶಬ್ಧ ಕೇಳಿದ ಸಮೀಪದ ನಿವಾಸಿ ಮಂಡಕ್ಕಿ ಭಟ್ಟಿ, ಸೈಯದ್ ಆರಿಫ್ ಸ್ಥಳಕ್ಕೆ ಬಂದು ತಮ್ಮ ಸ್ನೇಹಿತಉನ್ನೂ ಕರೆ ಮಾಡಿ ಕರೆಸಿ, ತಕ್ಷಣ ನೀರಿಗೆ ಇಳಿದು ನಾಲ್ವರನ್ನೂ ಕಾಲುವೆಯಿಂದ ಹೊರ ತಂದಿದ್ದಾರೆ.</p>.<p>ಕಾರು ಬಿದ್ದ ರಭಸಕ್ಕೆ ನಾಲ್ವರಿಗೂ ಸಣ್ಣ, ಪುಟ್ಟ ಗಾಯಗಳಾಗಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.</p>.<p>3ನೇ ದುರಂತ: 2 ತಿಂಗಳ ಹಿಂದೆಯೂ ಕಾರೊಂದು ಇದೇ ಸ್ಥಳದಲ್ಲಿ ಕಾಲುವೆಗೆ ಬಿದ್ದಿದ್ದು, ಯಾವುದೆ ಸಾವು, ನೋವುಗಳಾಗಿರಲಿಲ್ಲ. ನಂತರ ಆಟೋವೊಂದು ಬಿದ್ದಿದ್ದು, ಆಗಲೂ ಸ್ಥಳೀಯರು ರಕ್ಷಿಸಿದ್ದರು.</p>.<p>ನಗರದ ಬೆಂಕಿನಗರ, ಕಾಳಿದಾಸ ನಗರ, ಪ್ರಶಾಂತ್ ನಗರ, ನೀಲಕಂಠನಗರ, ಇಂದಿರಾನಗರ, ವಿದ್ಯಾನಗರ ಸೇರಿ ಹಲವು ಬಡಾವಣೆಗಳ ನಿವಾಸಿಗಳಿಗೆ ದಾವಣಗೆರೆಗೆ ಹೋಗಿ–ಬರಲು ಇದು ಬೈಪಾಸ್ ರಸ್ತೆಯಾಗಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರ ಅಧಿಕವಾಗಿದ್ದು, ತಡೆಗೋಡೆ ನಿರ್ಮಿಸಬೇಕೆಂಬುದು ಸಾರ್ವಜನಿಕರು ಒತ್ತಾಯಿಸಿದ್ದಾರೆ.<br></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ:</strong> ನಗರದ ಹೊರವಲಯದ ರೈಲ್ವೆ ಮೇಲು ಸೇತುವೆ ಸಮೀಪದ ಡಿ.ಬಿ. ಕೆರೆ ಕಾಲುವೆಗೆ ಮಂಗಳವಾರ ಕಾರೊಂದು ಬಿದ್ದಿದ್ದು, ಸ್ಥಳೀಯರು ಐವರು ಪ್ರಯಾಣಿಕರನ್ನು ರಕ್ಷಿಸಿದ್ದಾರೆ.</p>.<p>ಇಲ್ಲಿನ ಇಂದಿರಾನಗರದ ವಾಸಿ ಕಿಶೋರ್ ಎಂಬುವವರು ತಮ್ಮ ಮೂವರು ಮಕ್ಕಳು ಹಾಗೂ ಚಾಲಕನೊಂದಿಗೆ ದಾವಣಗೆರೆಗೆ ಹೋಗಿ ವಾಪಸ್ ಬರುವಾಗ ಘಟನೆ ನಡೆದಿದೆ.</p>.<p>ರಾತ್ರಿ 10 ಗಂಟೆ ಸಮಯಕ್ಕೆ ಕಾಲುವೆಗೆ ಕಾರು ಬಿದ್ದಿದ್ದು, ಶಬ್ಧ ಕೇಳಿದ ಸಮೀಪದ ನಿವಾಸಿ ಮಂಡಕ್ಕಿ ಭಟ್ಟಿ, ಸೈಯದ್ ಆರಿಫ್ ಸ್ಥಳಕ್ಕೆ ಬಂದು ತಮ್ಮ ಸ್ನೇಹಿತಉನ್ನೂ ಕರೆ ಮಾಡಿ ಕರೆಸಿ, ತಕ್ಷಣ ನೀರಿಗೆ ಇಳಿದು ನಾಲ್ವರನ್ನೂ ಕಾಲುವೆಯಿಂದ ಹೊರ ತಂದಿದ್ದಾರೆ.</p>.<p>ಕಾರು ಬಿದ್ದ ರಭಸಕ್ಕೆ ನಾಲ್ವರಿಗೂ ಸಣ್ಣ, ಪುಟ್ಟ ಗಾಯಗಳಾಗಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.</p>.<p>3ನೇ ದುರಂತ: 2 ತಿಂಗಳ ಹಿಂದೆಯೂ ಕಾರೊಂದು ಇದೇ ಸ್ಥಳದಲ್ಲಿ ಕಾಲುವೆಗೆ ಬಿದ್ದಿದ್ದು, ಯಾವುದೆ ಸಾವು, ನೋವುಗಳಾಗಿರಲಿಲ್ಲ. ನಂತರ ಆಟೋವೊಂದು ಬಿದ್ದಿದ್ದು, ಆಗಲೂ ಸ್ಥಳೀಯರು ರಕ್ಷಿಸಿದ್ದರು.</p>.<p>ನಗರದ ಬೆಂಕಿನಗರ, ಕಾಳಿದಾಸ ನಗರ, ಪ್ರಶಾಂತ್ ನಗರ, ನೀಲಕಂಠನಗರ, ಇಂದಿರಾನಗರ, ವಿದ್ಯಾನಗರ ಸೇರಿ ಹಲವು ಬಡಾವಣೆಗಳ ನಿವಾಸಿಗಳಿಗೆ ದಾವಣಗೆರೆಗೆ ಹೋಗಿ–ಬರಲು ಇದು ಬೈಪಾಸ್ ರಸ್ತೆಯಾಗಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರ ಅಧಿಕವಾಗಿದ್ದು, ತಡೆಗೋಡೆ ನಿರ್ಮಿಸಬೇಕೆಂಬುದು ಸಾರ್ವಜನಿಕರು ಒತ್ತಾಯಿಸಿದ್ದಾರೆ.<br></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>