<p><strong>ಚನ್ನಗಿರಿ</strong>: ‘ಆಧುನಿಕತೆಯ ಭರಾಟೆಯಲ್ಲಿ ಜನರು ಭಕ್ತಿ, ಧ್ಯಾನಗಳಿಂದ ದೂರವಾಗುತ್ತಿದ್ದಾರೆ. ಪಾದಯಾತ್ರೆಯಿಂದ ಮನಸ್ಸಿನ ಜತೆಗೆ ಶರೀರವೂ ಸುಸ್ಥಿತಿಗೆ ಬರುತ್ತದೆ’ ಎಂದು ಕೇದಾರಲಿಂಗ ಹಿರೇಮಠದ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.</p>.<p>ಹಿರೇಮಠದಲ್ಲಿ ಶನಿವಾರ ಸಂಜೆ ನಡೆದ 27ನೇ ವರ್ಷದ ಕೊಟ್ಟೂರು ಬಸವೇಶ್ವರ ಪಾದಯಾತ್ರಿಗಳ ಬೀಳ್ಕೊಡುಗೆ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು.</p>.<p>‘ಆಧ್ಮಾತ್ಮಿಕ ಚಿಂತನೆಯ ಕಡೆಗೆ ಸಾಗಲು, ಸತ್ಕಾರ್ಯಗಳನ್ನು ಮಾಡಲು ಪಾದಯಾತ್ರೆ ಅಗತ್ಯ. ಈ ಅವಧಿಯಲ್ಲಿ ನಮ್ಮ ಪಂಚೇಂದ್ರಿಯಗಳ ಮೇಲೆ ನಿಗ್ರಹ ಸಾಧ್ಯವಾಗುತ್ತದೆ. ಪಾದಯಾತ್ರೆಯ ವೇಳೆ ಎದುರಾಗುವ ಗ್ರಾಮಗಳಲ್ಲಿ ದಾಸೋಹ ಮಾಡುವ ಮೂಲಕ ಪ್ರೀತಿ, ವಿಶ್ವಾಸ, ಸಂಬಂಧಗಳ ಬೆಸುಗೆ ಮೂಡಿಸುತ್ತದೆ’ ಎಂದರು.</p>.<p>‘ಸಾಮಾಜಿಕ ಹಾಗೂ ಧರ್ಮ ಜಾಗೃತಿ ಮಾಡಿದ್ದ, ಎಲ್ಲ ಧರ್ಮದವವರ ಪ್ರೀತಿ ಹೊಂದಿದ್ದ ಪಂಚಗಣಾಧೀಶರಲ್ಲಿ ಕೊಟ್ಟೂರೇಶ್ವರರು ಒಬ್ಬರು. ಸಾಮಾನ್ಯ ವ್ಯಕ್ತಿಯಾಗಿ ಪವಾಡಗಳ ಮೂಲಕ ದೈವತ್ವಕ್ಕೆ ಏರಿದರು’ ಎಂದು ಶಿಕ್ಷಕ ಎಂ.ಬಿ. ನಾಗರಾಜ್ ಕಾಕನೂರು ಹೇಳಿದರು.</p>.<p>ಪಾದಯಾತ್ರೆ ಸಮಿತಿ ಅಧ್ಯಕ್ಷ ಬಸವರಾಜ್ ಕೋರಿ, ಜ್ಯೋತಿ ಕೋರಿ, ಕಿರಣ್ ಕೋರಿ, ದೀಪಕ್, ಮಹಾಂತೇಶ್ ಶಾಸ್ತ್ರಿ, ಜಿ.ಎಸ್. ನೀಲಕಂಠ ಶಾಸ್ತ್ರಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಗಿರಿ</strong>: ‘ಆಧುನಿಕತೆಯ ಭರಾಟೆಯಲ್ಲಿ ಜನರು ಭಕ್ತಿ, ಧ್ಯಾನಗಳಿಂದ ದೂರವಾಗುತ್ತಿದ್ದಾರೆ. ಪಾದಯಾತ್ರೆಯಿಂದ ಮನಸ್ಸಿನ ಜತೆಗೆ ಶರೀರವೂ ಸುಸ್ಥಿತಿಗೆ ಬರುತ್ತದೆ’ ಎಂದು ಕೇದಾರಲಿಂಗ ಹಿರೇಮಠದ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.</p>.<p>ಹಿರೇಮಠದಲ್ಲಿ ಶನಿವಾರ ಸಂಜೆ ನಡೆದ 27ನೇ ವರ್ಷದ ಕೊಟ್ಟೂರು ಬಸವೇಶ್ವರ ಪಾದಯಾತ್ರಿಗಳ ಬೀಳ್ಕೊಡುಗೆ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು.</p>.<p>‘ಆಧ್ಮಾತ್ಮಿಕ ಚಿಂತನೆಯ ಕಡೆಗೆ ಸಾಗಲು, ಸತ್ಕಾರ್ಯಗಳನ್ನು ಮಾಡಲು ಪಾದಯಾತ್ರೆ ಅಗತ್ಯ. ಈ ಅವಧಿಯಲ್ಲಿ ನಮ್ಮ ಪಂಚೇಂದ್ರಿಯಗಳ ಮೇಲೆ ನಿಗ್ರಹ ಸಾಧ್ಯವಾಗುತ್ತದೆ. ಪಾದಯಾತ್ರೆಯ ವೇಳೆ ಎದುರಾಗುವ ಗ್ರಾಮಗಳಲ್ಲಿ ದಾಸೋಹ ಮಾಡುವ ಮೂಲಕ ಪ್ರೀತಿ, ವಿಶ್ವಾಸ, ಸಂಬಂಧಗಳ ಬೆಸುಗೆ ಮೂಡಿಸುತ್ತದೆ’ ಎಂದರು.</p>.<p>‘ಸಾಮಾಜಿಕ ಹಾಗೂ ಧರ್ಮ ಜಾಗೃತಿ ಮಾಡಿದ್ದ, ಎಲ್ಲ ಧರ್ಮದವವರ ಪ್ರೀತಿ ಹೊಂದಿದ್ದ ಪಂಚಗಣಾಧೀಶರಲ್ಲಿ ಕೊಟ್ಟೂರೇಶ್ವರರು ಒಬ್ಬರು. ಸಾಮಾನ್ಯ ವ್ಯಕ್ತಿಯಾಗಿ ಪವಾಡಗಳ ಮೂಲಕ ದೈವತ್ವಕ್ಕೆ ಏರಿದರು’ ಎಂದು ಶಿಕ್ಷಕ ಎಂ.ಬಿ. ನಾಗರಾಜ್ ಕಾಕನೂರು ಹೇಳಿದರು.</p>.<p>ಪಾದಯಾತ್ರೆ ಸಮಿತಿ ಅಧ್ಯಕ್ಷ ಬಸವರಾಜ್ ಕೋರಿ, ಜ್ಯೋತಿ ಕೋರಿ, ಕಿರಣ್ ಕೋರಿ, ದೀಪಕ್, ಮಹಾಂತೇಶ್ ಶಾಸ್ತ್ರಿ, ಜಿ.ಎಸ್. ನೀಲಕಂಠ ಶಾಸ್ತ್ರಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>