<p><strong>ದಾವಣಗೆರೆ:</strong> ನಗರದ ವಾರ್ಡ್ ಒಂದರಲ್ಲಿ ಬಾಲಕಿ ಮದುವೆಯನ್ನು ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ಸಂಸ್ಥೆ, ಅಜಾದ್ ನಗರ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಮೇಲ್ವಿಚಾರಕರು ಭಾನುವಾರ ತಡೆದಿದ್ದಾರೆ.</p>.<p>15 ವರ್ಷ 6 ತಿಂಗಳ ಬಾಲಕಿಯ ವಿವಾಹವನ್ನು ನಗರದ ಎಸ್.ಎಸ್.ಎಂ. ನಗರದ ಯುವಕನೊಂದಿಗೆ ಮಾಡಲು ಹೊರಟಿದ್ದರು. ಅಪರಿಚಿತ ವ್ಯಕ್ತಿಯೊಬ್ಬರು ಮಕ್ಕಳ ಸಹಾಯವಾಣಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯೋನ್ಮುಖರಾದ ಸಿಬ್ಬಂದಿ ಮದುವೆ ತಡೆದಿದ್ದಾರೆ.</p>.<p>ಕೊಲ್ಯಾಬ್ ಸಂಯೋಜಕ ಟಿ.ಎಂ. ಕೊಟ್ರೇಶ್, ತಂಡದ ಸದಸ್ಯ ರವಿ.ಬಿ. ಆಜಾದ್ ನಗರ ಠಾಣಿಯ ಎಸ್ಐ ಕೆ.ಎನ್. ಶೈಲಜಾ, ಎಎಸ್ಐ ಓಂಕಾರನಾಯ್ಕ್ , ಕಾನ್ಸ್ಟೆಬಲ್ ಮಾಲತೇಶ, ಅಂಗನವಾಡಿ ಮೇಲ್ವಿಚಾರಕಿ ಸುಧಾ ಎಂ. ಅವರು ಮದುವೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಮನೆಯವರ ಮನವೊಲಿಸಿದರೂ ಅವರು ಒಪ್ಪಲಿಲ್ಲ.</p>.<p>ಬಾಲ್ಯವಿವಾಹ ಕಾನೂನು ಪ್ರಕಾರ ತಪ್ಪು. ಮದುವೆ ಮಾಡಿದ್ದೇ ಆದಲ್ಲಿ ₹1 ಲಕ್ಷ ದಂಡ ಹಾಗೂ 2 ವರ್ಷ ಜೈಲು ಶಿಕ್ಷೆಯಾಗುತ್ತದೆ ಎಂದು ಸ್ಥಳೀಯ ಮುಖಂಡರ ಸಮ್ಮಖದಲ್ಲಿ ಮನವರಿಕೆ ಮಾಡಿಕೊಟ್ಟ ನಂತರ ಮದುವೆ ನಿಲ್ಲಿಸಲು ಒಪ್ಪಿಕೊಂಡರು. 18 ವರ್ಷ ಆಗುವವರೆಗೆ ಮದುವೆ ಮಾಡುವುದಿಲ್ಲ ಎಂಬ ಮುಚ್ಚಳಿಕೆ ಪತ್ರವನ್ನು ಪೋಷಕರಿಂದ ಬರೆಸಿಕೊಂಡರು.</p>.<p>‘ಬಾಲಕಿಯ ತಾಯಿಗೆ ನಾಲ್ಕು ಹೆಣ್ಣು ಮಕ್ಕಳಿದ್ದು, ಬಡತನದ ಕಾರಣದಿಂದ ಮದುವೆ ಮಾಡಲು ಹೊರಟಿದ್ದರು. ನಾವು ಬಾಲಕಿಯ ತಾಯಿಗೆ ಬುದ್ಧಿವಾದ ಹೇಳಿ ಮದುವೆಯನ್ನು ತಡೆದೆವು’ ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ನಗರದ ವಾರ್ಡ್ ಒಂದರಲ್ಲಿ ಬಾಲಕಿ ಮದುವೆಯನ್ನು ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ಸಂಸ್ಥೆ, ಅಜಾದ್ ನಗರ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಮೇಲ್ವಿಚಾರಕರು ಭಾನುವಾರ ತಡೆದಿದ್ದಾರೆ.</p>.<p>15 ವರ್ಷ 6 ತಿಂಗಳ ಬಾಲಕಿಯ ವಿವಾಹವನ್ನು ನಗರದ ಎಸ್.ಎಸ್.ಎಂ. ನಗರದ ಯುವಕನೊಂದಿಗೆ ಮಾಡಲು ಹೊರಟಿದ್ದರು. ಅಪರಿಚಿತ ವ್ಯಕ್ತಿಯೊಬ್ಬರು ಮಕ್ಕಳ ಸಹಾಯವಾಣಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯೋನ್ಮುಖರಾದ ಸಿಬ್ಬಂದಿ ಮದುವೆ ತಡೆದಿದ್ದಾರೆ.</p>.<p>ಕೊಲ್ಯಾಬ್ ಸಂಯೋಜಕ ಟಿ.ಎಂ. ಕೊಟ್ರೇಶ್, ತಂಡದ ಸದಸ್ಯ ರವಿ.ಬಿ. ಆಜಾದ್ ನಗರ ಠಾಣಿಯ ಎಸ್ಐ ಕೆ.ಎನ್. ಶೈಲಜಾ, ಎಎಸ್ಐ ಓಂಕಾರನಾಯ್ಕ್ , ಕಾನ್ಸ್ಟೆಬಲ್ ಮಾಲತೇಶ, ಅಂಗನವಾಡಿ ಮೇಲ್ವಿಚಾರಕಿ ಸುಧಾ ಎಂ. ಅವರು ಮದುವೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಮನೆಯವರ ಮನವೊಲಿಸಿದರೂ ಅವರು ಒಪ್ಪಲಿಲ್ಲ.</p>.<p>ಬಾಲ್ಯವಿವಾಹ ಕಾನೂನು ಪ್ರಕಾರ ತಪ್ಪು. ಮದುವೆ ಮಾಡಿದ್ದೇ ಆದಲ್ಲಿ ₹1 ಲಕ್ಷ ದಂಡ ಹಾಗೂ 2 ವರ್ಷ ಜೈಲು ಶಿಕ್ಷೆಯಾಗುತ್ತದೆ ಎಂದು ಸ್ಥಳೀಯ ಮುಖಂಡರ ಸಮ್ಮಖದಲ್ಲಿ ಮನವರಿಕೆ ಮಾಡಿಕೊಟ್ಟ ನಂತರ ಮದುವೆ ನಿಲ್ಲಿಸಲು ಒಪ್ಪಿಕೊಂಡರು. 18 ವರ್ಷ ಆಗುವವರೆಗೆ ಮದುವೆ ಮಾಡುವುದಿಲ್ಲ ಎಂಬ ಮುಚ್ಚಳಿಕೆ ಪತ್ರವನ್ನು ಪೋಷಕರಿಂದ ಬರೆಸಿಕೊಂಡರು.</p>.<p>‘ಬಾಲಕಿಯ ತಾಯಿಗೆ ನಾಲ್ಕು ಹೆಣ್ಣು ಮಕ್ಕಳಿದ್ದು, ಬಡತನದ ಕಾರಣದಿಂದ ಮದುವೆ ಮಾಡಲು ಹೊರಟಿದ್ದರು. ನಾವು ಬಾಲಕಿಯ ತಾಯಿಗೆ ಬುದ್ಧಿವಾದ ಹೇಳಿ ಮದುವೆಯನ್ನು ತಡೆದೆವು’ ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>