<p><strong>ಕಡರನಾಯ್ಕನಹಳ್ಳಿ</strong>: ಹೇಮ ವೇಮನ ವಿದ್ಯಾಪೀಠದ ಅಧ್ಯಕ್ಷರಾದ ವೇಮಾನಂದ ಶ್ರೀ ಆಶಯದಂತೆ ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ₹ 5 ಕೋಟಿ ವೆಚ್ಚದ ಆಡಿಟೋರಿಯಂ ನಿರ್ಮಿಸಿ ಕೊಡುವುದಾಗಿ ಶಾಸಕ ಜನಾರ್ದನ ರೆಡ್ಡಿ ಭರವಸೆ ನೀಡಿದರು.</p>.<p>ಸಮೀಪದ ಹೊಸಳ್ಳಿಯ ಮಹಾ ಯೋಗಿ ವೇಮನ ಸದ್ಬೋಧನಾ ವಿದ್ಯಾಪೀಠದ ದಶಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.</p>.<p>‘ರೆಡ್ಡಿ ಸಮಾಜದ ಜೊತೆಗೆ ಎಲ್ಲ ಸಮುದಾಯದವರ ಸಹಕಾರದಿಂದ 2,500 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನಮ್ಮಿಂದಲೂ ಅಳಿಲು ಸೇವೆ ಸಲ್ಲಲಿ ಎಂಬುದು ನಮ್ಮ ಆಶಯವಾಗಿದೆ’ ಎಂದರು.</p>.<p>‘ವಿದ್ಯಾಪೀಠದ ಎಲ್ಲ ಕೆಲಸಗಳಿಗೆ ರೆಡ್ಡಿ ಸಮಾಜದವರು ಕೈ ಜೋಡಿಸಿ ಜ್ಞಾನ ದಾಸೋಹ, ಅಕ್ಷರ ದಾಸೋಹಕ್ಕೆ ಸಹಕಾರ ನೀಡಿದ್ದಾರೆ. ಜಾತಿ, ಮತಗಳನ್ನು ಮೀರಿ ಎಲ್ಲ ಜನಾಂಗಗಳ ಸಹಕಾರ ಈ ಮಠಕ್ಕೆ ದೊರಕಿದೆ. ಎಲ್ಲ ಸಮಾಜದ ಮಕ್ಕಳಿಗೂ ಶಿಕ್ಷಣ ಸಿಗಬೇಕು ಎಂಬುದು ನಮ್ಮ ಆಶಯ’ ಎಂದು ಸಾನಿಧ್ಯ ವಹಿಸಿದ್ದ ವೇಮಾನಂದ ಶ್ರೀ ಆಶೀರ್ವಚನ ನೀಡಿದರು.</p>.<p>‘ಸಿದ್ಧಗಂಗಾ ಮಠದ ಮಾದರಿಯನ್ನು ಅನುಸರಿಸಿ ಹೆಜ್ಜೆ ಹಾಕುತ್ತಿರುವ ವೇಮಾನಂದ ಶ್ರೀ, ವಿದ್ಯಾರ್ಥಿಗಳಿಗೆ ಶಿಕ್ಷಣ ದಾಸೋಹ, ಅನ್ನದಾಸೋಹ, ವಸತಿಯನ್ನು ಉಚಿತವಾಗಿ ನೀಡುತ್ತಿದ್ದಾರೆ ಎಂದು ಬಸವಕುಮಾರ ಸ್ವಾಮೀಜಿ ತಿಳಿಸಿದರು.</p>.<p>ರೆಡ್ಡಿ ಸಮಾಜ ಎಲ್ಲ ಸಮುದಾಯಗಳನ್ನು ಅಪ್ಪಿಕೊಂಡಿದೆ. ಸಹೃದಯತೆಯಿಂದ ನಾವು ಏನಾದರೂ ಸಾಧಿಸಲು ಸಾಧ್ಯ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ಹೇಳಿದರು.</p>.<p>ಪ್ರೀತಿ ಆರೈಕೆ ಟ್ರಸ್ಟ್ ವತಿಯಿಂದ ಡಾ.ಟಿ.ಜಿ.ರವಿಕುಮಾರ್ ನೇತೃತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.</p>.<p>ವಿಧಾನ ಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ಶಾಸಕ ಕೋನರೆಡ್ಡಿ ಮಾತನಾಡಿದರು.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಗೋವಿಂದ ರೆಡ್ಡಿ, ದಾನಿಗಳಾದ ಶಿವಾನಂದ ಮೇಲಗೇರಿ, ಕಾರಟಗಿಯ ವೆಂಕಟರೆಡ್ಡಿ, ರೆಡ್ಡಿ ಜನಸಂಘದ ನಾಗರಾಜ್, ಉದ್ಯಮಿ ರಾಜಾ ರೆಡ್ಡಿ, ದ್ಯಾವಪ್ಪ ರೆಡ್ಡಿ, ಕಾನೂನು ಸಲಹೆಗಾರ ರುದ್ರೇಶ್, ಆಡಳಿತಾಧಿಕಾರಿ ಸುಭಾಶ್ ಇದ್ದರು.</p>.<p>ಸಾಂಸ್ಕೃತಿಕ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಭಾರಿ ಸಂಖ್ಯೆಯ ಜನರು ಸೇರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡರನಾಯ್ಕನಹಳ್ಳಿ</strong>: ಹೇಮ ವೇಮನ ವಿದ್ಯಾಪೀಠದ ಅಧ್ಯಕ್ಷರಾದ ವೇಮಾನಂದ ಶ್ರೀ ಆಶಯದಂತೆ ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ₹ 5 ಕೋಟಿ ವೆಚ್ಚದ ಆಡಿಟೋರಿಯಂ ನಿರ್ಮಿಸಿ ಕೊಡುವುದಾಗಿ ಶಾಸಕ ಜನಾರ್ದನ ರೆಡ್ಡಿ ಭರವಸೆ ನೀಡಿದರು.</p>.<p>ಸಮೀಪದ ಹೊಸಳ್ಳಿಯ ಮಹಾ ಯೋಗಿ ವೇಮನ ಸದ್ಬೋಧನಾ ವಿದ್ಯಾಪೀಠದ ದಶಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.</p>.<p>‘ರೆಡ್ಡಿ ಸಮಾಜದ ಜೊತೆಗೆ ಎಲ್ಲ ಸಮುದಾಯದವರ ಸಹಕಾರದಿಂದ 2,500 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನಮ್ಮಿಂದಲೂ ಅಳಿಲು ಸೇವೆ ಸಲ್ಲಲಿ ಎಂಬುದು ನಮ್ಮ ಆಶಯವಾಗಿದೆ’ ಎಂದರು.</p>.<p>‘ವಿದ್ಯಾಪೀಠದ ಎಲ್ಲ ಕೆಲಸಗಳಿಗೆ ರೆಡ್ಡಿ ಸಮಾಜದವರು ಕೈ ಜೋಡಿಸಿ ಜ್ಞಾನ ದಾಸೋಹ, ಅಕ್ಷರ ದಾಸೋಹಕ್ಕೆ ಸಹಕಾರ ನೀಡಿದ್ದಾರೆ. ಜಾತಿ, ಮತಗಳನ್ನು ಮೀರಿ ಎಲ್ಲ ಜನಾಂಗಗಳ ಸಹಕಾರ ಈ ಮಠಕ್ಕೆ ದೊರಕಿದೆ. ಎಲ್ಲ ಸಮಾಜದ ಮಕ್ಕಳಿಗೂ ಶಿಕ್ಷಣ ಸಿಗಬೇಕು ಎಂಬುದು ನಮ್ಮ ಆಶಯ’ ಎಂದು ಸಾನಿಧ್ಯ ವಹಿಸಿದ್ದ ವೇಮಾನಂದ ಶ್ರೀ ಆಶೀರ್ವಚನ ನೀಡಿದರು.</p>.<p>‘ಸಿದ್ಧಗಂಗಾ ಮಠದ ಮಾದರಿಯನ್ನು ಅನುಸರಿಸಿ ಹೆಜ್ಜೆ ಹಾಕುತ್ತಿರುವ ವೇಮಾನಂದ ಶ್ರೀ, ವಿದ್ಯಾರ್ಥಿಗಳಿಗೆ ಶಿಕ್ಷಣ ದಾಸೋಹ, ಅನ್ನದಾಸೋಹ, ವಸತಿಯನ್ನು ಉಚಿತವಾಗಿ ನೀಡುತ್ತಿದ್ದಾರೆ ಎಂದು ಬಸವಕುಮಾರ ಸ್ವಾಮೀಜಿ ತಿಳಿಸಿದರು.</p>.<p>ರೆಡ್ಡಿ ಸಮಾಜ ಎಲ್ಲ ಸಮುದಾಯಗಳನ್ನು ಅಪ್ಪಿಕೊಂಡಿದೆ. ಸಹೃದಯತೆಯಿಂದ ನಾವು ಏನಾದರೂ ಸಾಧಿಸಲು ಸಾಧ್ಯ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ಹೇಳಿದರು.</p>.<p>ಪ್ರೀತಿ ಆರೈಕೆ ಟ್ರಸ್ಟ್ ವತಿಯಿಂದ ಡಾ.ಟಿ.ಜಿ.ರವಿಕುಮಾರ್ ನೇತೃತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.</p>.<p>ವಿಧಾನ ಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ಶಾಸಕ ಕೋನರೆಡ್ಡಿ ಮಾತನಾಡಿದರು.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಗೋವಿಂದ ರೆಡ್ಡಿ, ದಾನಿಗಳಾದ ಶಿವಾನಂದ ಮೇಲಗೇರಿ, ಕಾರಟಗಿಯ ವೆಂಕಟರೆಡ್ಡಿ, ರೆಡ್ಡಿ ಜನಸಂಘದ ನಾಗರಾಜ್, ಉದ್ಯಮಿ ರಾಜಾ ರೆಡ್ಡಿ, ದ್ಯಾವಪ್ಪ ರೆಡ್ಡಿ, ಕಾನೂನು ಸಲಹೆಗಾರ ರುದ್ರೇಶ್, ಆಡಳಿತಾಧಿಕಾರಿ ಸುಭಾಶ್ ಇದ್ದರು.</p>.<p>ಸಾಂಸ್ಕೃತಿಕ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಭಾರಿ ಸಂಖ್ಯೆಯ ಜನರು ಸೇರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>