<p><strong>ದಾವಣಗೆರೆ</strong>: ಕೊರೊನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಹೋಗಿರುವ ಯಾವುದೇ ಮಾದರಿಗಳ ಫಲಿತಾಂಶ ಸೋಮವಾರ ಬಂದಿಲ್ಲ.</p>.<p>ಜಿಲ್ಲೆಯಿಂದ ಸೋಮವಾರ 210 ಸ್ವ್ಯಾಬ್ಗಳನ್ನು (ಗಂಟಲದ್ರವ) ವಿವಿಧ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದೂ ಸೇರಿ 1217 ಮಾದರಿಗಳ ಫಲಿತಾಂಶ ಬಂದಿಲ್ಲ. ಹಾಗಾಗಿ ಸೋಮವಾರ ರಾಜ್ಯದಲ್ಲಿ 187 ಕೋವಿಡ್ ಪ್ರಕರಣಗಳು ದಾಖಲಾಗಿದ್ದರೂ ಜಿಲ್ಲೆಯ ಒಂದೇ ಒಂದು ಪಾಸಿಟಿವ್ ಪ್ರಕರಣಗಳಿಲ್ಲ. ಹಾಗೆಯೇ ನೆಗೆಟಿವ್ ಪ್ರಕರಣಗಳೂ ಇಲ್ಲ.</p>.<p>ಜಿಲ್ಲೆಯಲ್ಲಿ ಒಟ್ಟು 156 ಪ್ರಕರಣಗಳಿದ್ದು, ರಾಜ್ಯದಲ್ಲಿ 10ನೇ ಸ್ಥಾನದಲ್ಲಿದೆ. 121 ಮಂದಿ ಬಿಡುಗಡೆಗೊಂಡಿದ್ದು, ಜಿಲ್ಲೆ ಮೂರನೇ ಸ್ಥಾನ ಹೊಂದಿದೆ. 31 ಸಕ್ರಿಯ ಪ್ರಕರಣಗಳಿದ್ದು, 16ನೇ ಸ್ಥಾನದಲ್ಲಿದೆ. ನಾಲ್ವರು ಮೃತಪಟ್ಟಿದ್ದು, ಸಾವಿನ ಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.</p>.<p>ಬಾಷಾನಗರದಲ್ಲಿ 28 ದಿನಗಳ ಅವಧಿಯಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆ ಕಂಟೈನ್ಮೆಂಟ್ ವಲಯದಲ್ಲಿ ಮೂವರಿಗೆ ಕೊರೊನಾ ಪತ್ತೆಯಾಗಿದ್ದು, ಮೂವರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಹಾಗಾಗಿ ಬಾಷಾನಗರದ ಸೀಲ್ಡೌನ್ ತೆರವುಗೊಳಿಸಲಾಗಿದೆ.</p>.<p>ಉಳಿದಂತೆ ಜಾಲಿನಗರ, ಇಮಾಂ ನಗರ, ಬೇತೂರು ರಸ್ತೆ, ಕೆಟಿಜೆ ನಗರ, ಎಸ್ಪಿಎಸ್ ನಗರ, ಶಿವನಗರ, ರೈತರ ಬೀದಿ, ಪೊಲೀಸ್ ಕ್ವಾಟ್ರರ್ಸ್, ಆನೆಕೊಂಡ, ಎಸ್ಜೆಎಂ ನಗರ, ವಿನಾಯಕ ನಗರ, ಕೆರೆಬಿಳಚಿ, ಶಿವಕುಮಾರಸ್ವಾಮಿ ಬಡಾವಣೆ, ಶೇಖರಪ್ಪ ನಗರ, ತರಳಬಾಳು ಬಡಾವಣೆ, ಬಸವರಾಜಪೇಟೆ ಈ 16 ಪ್ರದೇಶಗಳಲ್ಲಿ ಸೀಲ್ಡೌನ್ ಮುಂದುವರಿದಿದೆ. ಕೆಟಿಜೆ ನಗರ, ಬೇತೂರು ರಸ್ತೆಗಳು ಕೂಡ ಇನ್ನೆರಡು ದಿನಗಳಲ್ಲಿ ಸೀಲ್ಡೌನ್ನಿಂದ ಹೊರಬರಲಿವೆ.</p>.<p><strong>ನ್ಯಾಯಾಲಯದಲ್ಲಿ ಚಟುವಟಿಕೆ ಆರಂಭ:</strong> ಲಾಕ್ಡೌನ್ ಆಗಿದ್ದರಿಂದ ಎರಡು ತಿಂಗಳಿಗೂ ಅಧಿಕ ಸಮಯ ಕಲಾಪಗಳಿಲ್ಲದೇ ನೀರವ ಮೌನವಾಗಿದ್ದ ನ್ಯಾಯಾಲಯಗಳಲ್ಲಿ ಸೋಮವಾರ ಮತ್ತೆ ಚಟುವಟಿಕೆ ಆರಂಭಗೊಂಡಿದೆ. ಕೋಟುಗಳಿಲ್ಲದೇ ವಕೀಲರು ನ್ಯಾಯಾಲಯಕ್ಕೆ ಹಾಜರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ಕೊರೊನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಹೋಗಿರುವ ಯಾವುದೇ ಮಾದರಿಗಳ ಫಲಿತಾಂಶ ಸೋಮವಾರ ಬಂದಿಲ್ಲ.</p>.<p>ಜಿಲ್ಲೆಯಿಂದ ಸೋಮವಾರ 210 ಸ್ವ್ಯಾಬ್ಗಳನ್ನು (ಗಂಟಲದ್ರವ) ವಿವಿಧ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದೂ ಸೇರಿ 1217 ಮಾದರಿಗಳ ಫಲಿತಾಂಶ ಬಂದಿಲ್ಲ. ಹಾಗಾಗಿ ಸೋಮವಾರ ರಾಜ್ಯದಲ್ಲಿ 187 ಕೋವಿಡ್ ಪ್ರಕರಣಗಳು ದಾಖಲಾಗಿದ್ದರೂ ಜಿಲ್ಲೆಯ ಒಂದೇ ಒಂದು ಪಾಸಿಟಿವ್ ಪ್ರಕರಣಗಳಿಲ್ಲ. ಹಾಗೆಯೇ ನೆಗೆಟಿವ್ ಪ್ರಕರಣಗಳೂ ಇಲ್ಲ.</p>.<p>ಜಿಲ್ಲೆಯಲ್ಲಿ ಒಟ್ಟು 156 ಪ್ರಕರಣಗಳಿದ್ದು, ರಾಜ್ಯದಲ್ಲಿ 10ನೇ ಸ್ಥಾನದಲ್ಲಿದೆ. 121 ಮಂದಿ ಬಿಡುಗಡೆಗೊಂಡಿದ್ದು, ಜಿಲ್ಲೆ ಮೂರನೇ ಸ್ಥಾನ ಹೊಂದಿದೆ. 31 ಸಕ್ರಿಯ ಪ್ರಕರಣಗಳಿದ್ದು, 16ನೇ ಸ್ಥಾನದಲ್ಲಿದೆ. ನಾಲ್ವರು ಮೃತಪಟ್ಟಿದ್ದು, ಸಾವಿನ ಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.</p>.<p>ಬಾಷಾನಗರದಲ್ಲಿ 28 ದಿನಗಳ ಅವಧಿಯಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆ ಕಂಟೈನ್ಮೆಂಟ್ ವಲಯದಲ್ಲಿ ಮೂವರಿಗೆ ಕೊರೊನಾ ಪತ್ತೆಯಾಗಿದ್ದು, ಮೂವರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಹಾಗಾಗಿ ಬಾಷಾನಗರದ ಸೀಲ್ಡೌನ್ ತೆರವುಗೊಳಿಸಲಾಗಿದೆ.</p>.<p>ಉಳಿದಂತೆ ಜಾಲಿನಗರ, ಇಮಾಂ ನಗರ, ಬೇತೂರು ರಸ್ತೆ, ಕೆಟಿಜೆ ನಗರ, ಎಸ್ಪಿಎಸ್ ನಗರ, ಶಿವನಗರ, ರೈತರ ಬೀದಿ, ಪೊಲೀಸ್ ಕ್ವಾಟ್ರರ್ಸ್, ಆನೆಕೊಂಡ, ಎಸ್ಜೆಎಂ ನಗರ, ವಿನಾಯಕ ನಗರ, ಕೆರೆಬಿಳಚಿ, ಶಿವಕುಮಾರಸ್ವಾಮಿ ಬಡಾವಣೆ, ಶೇಖರಪ್ಪ ನಗರ, ತರಳಬಾಳು ಬಡಾವಣೆ, ಬಸವರಾಜಪೇಟೆ ಈ 16 ಪ್ರದೇಶಗಳಲ್ಲಿ ಸೀಲ್ಡೌನ್ ಮುಂದುವರಿದಿದೆ. ಕೆಟಿಜೆ ನಗರ, ಬೇತೂರು ರಸ್ತೆಗಳು ಕೂಡ ಇನ್ನೆರಡು ದಿನಗಳಲ್ಲಿ ಸೀಲ್ಡೌನ್ನಿಂದ ಹೊರಬರಲಿವೆ.</p>.<p><strong>ನ್ಯಾಯಾಲಯದಲ್ಲಿ ಚಟುವಟಿಕೆ ಆರಂಭ:</strong> ಲಾಕ್ಡೌನ್ ಆಗಿದ್ದರಿಂದ ಎರಡು ತಿಂಗಳಿಗೂ ಅಧಿಕ ಸಮಯ ಕಲಾಪಗಳಿಲ್ಲದೇ ನೀರವ ಮೌನವಾಗಿದ್ದ ನ್ಯಾಯಾಲಯಗಳಲ್ಲಿ ಸೋಮವಾರ ಮತ್ತೆ ಚಟುವಟಿಕೆ ಆರಂಭಗೊಂಡಿದೆ. ಕೋಟುಗಳಿಲ್ಲದೇ ವಕೀಲರು ನ್ಯಾಯಾಲಯಕ್ಕೆ ಹಾಜರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>