ಪಡಿತರ ವಿತರಣೆ ಹಾಗೂ ಇಕೆವೈಸಿ ಸಂದರ್ಭದಲ್ಲಿ ಬಟ್ಟೆ ಹಾಗೂ ನೀರಿನಿಂದ ಕೈ ಶುಚಿಗೊಳಿಸಿಸುತ್ತಿದ್ದರು. ಈಗ ನ್ಯಾಯಬೆಲೆ ಅಂಗಡಿಗಳಲ್ಲೇ ಸ್ಯಾನಿಟೈಸರ್ ಇಡಲಿದ್ದು, ಅದನ್ನು ಕೈಗೆ ಹಚ್ಚಿಕೊಂಡು ಬರಬೇಕು. ಹೆಚ್ಚು ಜನ ಸಾಲಾಗಿ ನಿಲ್ಲಬಾರದು. ಅಂಗಡಿಗೆ ಬಂದ ತಕ್ಷಣ ಪಡಿತರ ಕೊಂಡುಹೋಗುವಂತೆ ಎಲ್ಲರಿಗೂ ಸೂಚನೆ ನೀಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ತಿಳಿಸಿದರು.