ತಾಲ್ಲೂಕಿನ ಕೈದಾಳೆಯ ವೃದ್ಧೆ ಲಲಿತಮ್ಮ (70) ಮೈಮೇಲೆ ಕುಕ್ಕುವಾಡೇಶ್ವರಿ ಬಂದಿದ್ದಾಳೆ ಎಂದು ಜಡೆ ಎಳೆದುಕೊಂಡು ಅಬ್ಬರಿಸಿ ಆರೋಗ್ಯ ಸಿಬ್ಬಂದಿಯನ್ನು ಭಾನುವಾರ ವಾಪಸ್ ಕಳುಹಿಸಿದ್ದರು. ತಹಶೀಲ್ದಾರ್ ಬಿ.ಎನ್. ಗಿರೀಶ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಐ.ಸಿ. ವಿದ್ಯಾವತಿ, ಆರೋಗ್ಯಾಧಿಕಾರಿ ಡಾ.ಧನಂಜಯ ತಂಡವು ಆ ಮನೆಗೆ ಸೋಮವಾರ ಹೋಯಿತು. ಅಜ್ಜಿಯ ಮೈಮೇಲೆ ದೇವಿ ಬಂದಿದ್ದಾಳೆ ಅಂದರೂ ತಾಳ್ಮೆಯಿಂದ ಎಲ್ಲ ಕಥೆ ಕೇಳಿ, ಮನವೊಲಿಸಿ ಲಸಿಕೆ ಹಾಕಿದ್ದಾರೆ.