<p><strong>ದಾವಣಗೆರೆ:</strong> ಜಿಲ್ಲೆಯಲ್ಲಿ 74 ಮಂದಿಗೆ ಕೊರೊನಾ ಇರುವುದು ಭಾನುವಾರ ದೃಢಪಟ್ಟಿದೆ. 116 ಮಂದಿ ಗುಣಮುಖರಾಗಿದ್ದಾರೆ.</p>.<p>9 ಮಂದಿ ವೃದ್ಧರು, ಆರು ವೃದ್ಧೆಯರು, ಒಂದು ವರ್ಷದ ಮಗು ಸೇರಿ ಇಬ್ಬರು ಬಾಲಕರು, ಮೂವರು ಬಾಲಕಿಯರಿಗೆ ಕೊರೊನಾ ಬಂದಿದೆ.</p>.<p>14 ಮಂದಿ ವೃದ್ಧರು, 90 ವರ್ಷದವರು ಸೇರಿ 10 ವೃದ್ಧೆಯರು, 9 ಬಾಲಕರು, ಒಂದು ವರ್ಷದ ಮಗು ಸೇರಿ ಐವರು ಬಾಲಕಿಯರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.</p>.<p>ದಾವಣಗೆರೆ ತಾಲ್ಲೂಕಿನಲ್ಲಿ 7 ಮಂದಿಗೆ ಕೊರೊನಾ ಬಂದಿದೆ ಎಂದು ಬುಲೆಟಿನ್ನಲ್ಲಿ ತೋರಿಸಲಾಗಿದೆ. ಬಾತಿ, ನಿಟುವಳ್ಳಿ ಮತ್ತು ವಿದ್ಯಾನಗರದ ಮೂವರಷ್ಟೇ ದಾವಣಗೆರೆಯವರು. ಉಳಿದಂತೆ ಹೂವಿನ ಹಡಗಲಿಯ ಒಬ್ಬರು, ಹರಿಹರ ತಾಲ್ಲೂಕಿನ ಭಾನುವಳ್ಳಿಯ ಇಬ್ಬರು, ಮಲೆಬೆನ್ನೂರಿನ ಒಬ್ಬರನ್ನು ದಾವಣಗೆರೆ ತಾಲ್ಲೂಕಿನವರು ಎಂದು ತೋರಿಸಲಾಗಿದೆ.</p>.<p>ಆರೋಗ್ಯ ಅಭಿಯಾನ ಕಾರ್ಯಕ್ರಮದ ಸಿಬ್ಬಂದಿ ಮುಷ್ಕರ ಹೂಡಿರುವುದರಿಂದ ಹಾಗೂ ತಾಂತ್ರಿಕ ದೋಷದಿಂದ ವಾಸ್ತವ ಸಂಖ್ಯೆ ದೊರೆತಿಲ್ಲ. ನಾಳೆಯಿಂದ ಸರಿಯಾಗಿ ಅಪ್ಲೋಡ್ ಆಗಲಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಸ್ಪಷ್ಟನೆ ನೀಡಿದ್ದಾರೆ.</p>.<p>ವಾಸ್ತವದಲ್ಲಿ ಭಾನುವಾರ ತೋರಿಸಲಾದ ಸೋಂಕಿತರ ಸಂಖ್ಯೆಗಿಂತ ದುಪ್ಪಟ್ಟು ಇದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.</p>.<p>ಹೊನ್ನಾಳಿ–ನ್ಯಾಮತಿ ತಾಲ್ಲೂಕಿನಲ್ಲಿ 42, ಹರಿಹರ ತಾಲ್ಲೂಕಿನಲ್ಲಿ 17, ಜಗಳೂರು ತಾಲ್ಲೂಕಿನಲ್ಲಿ 3 ಮತ್ತು ಚನ್ನಗಿರಿ ತಾಲ್ಲೂಕಿನಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾವೇರಿಯ ಮೂವರು, ಚಿತ್ರದುರ್ಗದ ಒಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ.</p>.<p>ಜಿಲ್ಲೆಯಲ್ಲಿ ಈವರೆಗೆ 15,525 ಮಂದಿಗೆ ಸೋಂಕು ತಗುಲಿದೆ. 12,484 ಮಂದಿ ಗುಣಮುಖರಾಗಿದ್ದಾರೆ. 240 ಮಂದಿ ಮೃತಪಟ್ಟಿದ್ದಾರೆ. 2,801 ಸಕ್ರಿಯ ಪ್ರಕರಣಗಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಜಿಲ್ಲೆಯಲ್ಲಿ 74 ಮಂದಿಗೆ ಕೊರೊನಾ ಇರುವುದು ಭಾನುವಾರ ದೃಢಪಟ್ಟಿದೆ. 116 ಮಂದಿ ಗುಣಮುಖರಾಗಿದ್ದಾರೆ.</p>.<p>9 ಮಂದಿ ವೃದ್ಧರು, ಆರು ವೃದ್ಧೆಯರು, ಒಂದು ವರ್ಷದ ಮಗು ಸೇರಿ ಇಬ್ಬರು ಬಾಲಕರು, ಮೂವರು ಬಾಲಕಿಯರಿಗೆ ಕೊರೊನಾ ಬಂದಿದೆ.</p>.<p>14 ಮಂದಿ ವೃದ್ಧರು, 90 ವರ್ಷದವರು ಸೇರಿ 10 ವೃದ್ಧೆಯರು, 9 ಬಾಲಕರು, ಒಂದು ವರ್ಷದ ಮಗು ಸೇರಿ ಐವರು ಬಾಲಕಿಯರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.</p>.<p>ದಾವಣಗೆರೆ ತಾಲ್ಲೂಕಿನಲ್ಲಿ 7 ಮಂದಿಗೆ ಕೊರೊನಾ ಬಂದಿದೆ ಎಂದು ಬುಲೆಟಿನ್ನಲ್ಲಿ ತೋರಿಸಲಾಗಿದೆ. ಬಾತಿ, ನಿಟುವಳ್ಳಿ ಮತ್ತು ವಿದ್ಯಾನಗರದ ಮೂವರಷ್ಟೇ ದಾವಣಗೆರೆಯವರು. ಉಳಿದಂತೆ ಹೂವಿನ ಹಡಗಲಿಯ ಒಬ್ಬರು, ಹರಿಹರ ತಾಲ್ಲೂಕಿನ ಭಾನುವಳ್ಳಿಯ ಇಬ್ಬರು, ಮಲೆಬೆನ್ನೂರಿನ ಒಬ್ಬರನ್ನು ದಾವಣಗೆರೆ ತಾಲ್ಲೂಕಿನವರು ಎಂದು ತೋರಿಸಲಾಗಿದೆ.</p>.<p>ಆರೋಗ್ಯ ಅಭಿಯಾನ ಕಾರ್ಯಕ್ರಮದ ಸಿಬ್ಬಂದಿ ಮುಷ್ಕರ ಹೂಡಿರುವುದರಿಂದ ಹಾಗೂ ತಾಂತ್ರಿಕ ದೋಷದಿಂದ ವಾಸ್ತವ ಸಂಖ್ಯೆ ದೊರೆತಿಲ್ಲ. ನಾಳೆಯಿಂದ ಸರಿಯಾಗಿ ಅಪ್ಲೋಡ್ ಆಗಲಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಸ್ಪಷ್ಟನೆ ನೀಡಿದ್ದಾರೆ.</p>.<p>ವಾಸ್ತವದಲ್ಲಿ ಭಾನುವಾರ ತೋರಿಸಲಾದ ಸೋಂಕಿತರ ಸಂಖ್ಯೆಗಿಂತ ದುಪ್ಪಟ್ಟು ಇದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.</p>.<p>ಹೊನ್ನಾಳಿ–ನ್ಯಾಮತಿ ತಾಲ್ಲೂಕಿನಲ್ಲಿ 42, ಹರಿಹರ ತಾಲ್ಲೂಕಿನಲ್ಲಿ 17, ಜಗಳೂರು ತಾಲ್ಲೂಕಿನಲ್ಲಿ 3 ಮತ್ತು ಚನ್ನಗಿರಿ ತಾಲ್ಲೂಕಿನಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾವೇರಿಯ ಮೂವರು, ಚಿತ್ರದುರ್ಗದ ಒಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ.</p>.<p>ಜಿಲ್ಲೆಯಲ್ಲಿ ಈವರೆಗೆ 15,525 ಮಂದಿಗೆ ಸೋಂಕು ತಗುಲಿದೆ. 12,484 ಮಂದಿ ಗುಣಮುಖರಾಗಿದ್ದಾರೆ. 240 ಮಂದಿ ಮೃತಪಟ್ಟಿದ್ದಾರೆ. 2,801 ಸಕ್ರಿಯ ಪ್ರಕರಣಗಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>