<p><strong>ಹರಿಹರ:</strong> ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾಗಿರುವುದರಿಂದ ಮೃತ ವ್ಯಕ್ತಿಯ ಅಂತಿಮ ಸಂಸ್ಕಾರ ನಡೆಸಲು ಮೃತರ ಕುಟುಂಬದವರು ಪರದಾಡಿದ ಘಟನೆ ಸೋಮವಾರ ನಗರದ ಹೊರವಲಯದ ಗುತ್ತೂರು ಗ್ರಾಮದಲ್ಲಿ ನಡೆಯಿತು.<br> ಗ್ರಾಮದ ಪರಿಶಿಷ್ಟ ಜಾತಿಯ ನಾಗಮ್ಮ ರಾಮಪ್ಪ ಬಳ್ಳಾರಿ ಇವರು ಭಾನುವಾರ ರಾತ್ರಿ ನಿಧನರಾದರು. ಮೃತರ ಅಂತಿಮ ಸಂಸ್ಕಾರಕ್ಕೆAದು ಸೋಮವಾರ ಬಂಧುಗಳು ನದಿ ದಡಕ್ಕೆ ಆಗಮಿಸಿದಾಗ ಅವರಿಗೆ ದಿಗ್ಭಾçಂತಿಯಾಯಿತು.<br> ಗ್ರಾಮದಿAದ ನದಿ ದಡದವರೆಗೆ ಚಟ್ಟಾ ಎತ್ತಿಕೊಂಡು ಬರುವುದು ಕೂಡ ದುಸ್ಸಾಹಸವೆ ಆಗಿದೆ, ಏಕೆಂದರೆ ಈ ರಸ್ತೆಯಲ್ಲಿ ಮಣ್ಣು, ಮರಳಿನ ಲೋಡ್ ಸಾಘನೆ ಮಾಡುವ ವಾಹನಗಳಿಂದಾಘಿ ರಸ್ತೆ ಹದಗೆಟ್ಟಿದೆ. ಮೃತ ದೇಹವನ್ನು ವಾಹನದಲ್ಲಿ ಸಾಗಿಸಲಾಗುವುದಿಲ್ಲ. ಆನರು ಹೊತ್ತುಕೊಂಡೆ ಸಾಗಿಸಬೇಕಿದೆ.<br> ನಂತರ ನದಿ ದಡಕ್ಕೆ ಬಂದರೆ ನದಿ ದಡದಲ್ಲಿ ಎಲ್ಲೆಲ್ಲು ನೀರಿದೆ, ಕೊನೆಗೆ ನದಿ ನೀರಲ್ಲೆ ಮುಂದೆ ಸಾಗಿ ಅಲ್ಲೆ ಇರುವ ಎತ್ತರದ ದಿಬ್ಬದ ಮೇಲೆ ನಾಗಮ್ಮರ ಅಂತಿಮ ಸಂಸ್ಕಾರ ನಡೆಸಲಾಯಿತು.<br> ಗ್ರಾಮದ ಬೇರೆ ಸಮುದಾಯದವರಿಗೆ ಎತ್ತರ ಪ್ರದೇಶದಲ್ಲಿ ಸ್ಮಶಾನವಿದೆ, ಆದರೆ ಗ್ರಾಮದ ಪರಿಶಿಷ್ಟ ಜಾತಿಯವರಿಗೆ ನದಿ ದಡವೇ ಸ್ಮಶಾನವಾಗಿದೆ. ಮಳೆಗಾಲದಲ್ಲಿ ನದಿಯಲ್ಲಿ ಪ್ರವಾಹ ಬಂದಾಗ ಇಡೀ ನದಿ ದಡ ಜಲಾವೃತವಾಗುವುದರಿಂದ ಪ್ರತಿ ವರ್ಷ ಈ ಸಮಸ್ಯೆ ಈ ಸಮುದಾಯದವರಿಗೆ ಎದುರಾಗುತ್ತದೆ.<br> ಕಳೆದ ಮಳೆಗಾಲದಲ್ಲೂ ಈ ಸಮುದಾಯದವರು ಈ ಸಮಸ್ಯೆ ಎದುರಿಸಿದಾಗ ತಾಲ್ಲೂಕು ಆಡಳಿತದವರು ಎತ್ತರದ ಪ್ರದೇಶದಲ್ಲಿ ಪ್ರತ್ಯೇಕ ಸ್ಮಶಾನ ವ್ಯವಸ್ಥೆ ಮಾಡುವುದಾಗಿ ಈ ಸಮುದಾಯದವರಿಗೆ ನೀಡಿದ ಭರವಸೆ ಈಡೇರಿಲ್ಲ ಎಂಬ ಬೇಸರ ಈ ತಳ ಸಮುದಾಯದವರಿಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ:</strong> ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾಗಿರುವುದರಿಂದ ಮೃತ ವ್ಯಕ್ತಿಯ ಅಂತಿಮ ಸಂಸ್ಕಾರ ನಡೆಸಲು ಮೃತರ ಕುಟುಂಬದವರು ಪರದಾಡಿದ ಘಟನೆ ಸೋಮವಾರ ನಗರದ ಹೊರವಲಯದ ಗುತ್ತೂರು ಗ್ರಾಮದಲ್ಲಿ ನಡೆಯಿತು.<br> ಗ್ರಾಮದ ಪರಿಶಿಷ್ಟ ಜಾತಿಯ ನಾಗಮ್ಮ ರಾಮಪ್ಪ ಬಳ್ಳಾರಿ ಇವರು ಭಾನುವಾರ ರಾತ್ರಿ ನಿಧನರಾದರು. ಮೃತರ ಅಂತಿಮ ಸಂಸ್ಕಾರಕ್ಕೆAದು ಸೋಮವಾರ ಬಂಧುಗಳು ನದಿ ದಡಕ್ಕೆ ಆಗಮಿಸಿದಾಗ ಅವರಿಗೆ ದಿಗ್ಭಾçಂತಿಯಾಯಿತು.<br> ಗ್ರಾಮದಿAದ ನದಿ ದಡದವರೆಗೆ ಚಟ್ಟಾ ಎತ್ತಿಕೊಂಡು ಬರುವುದು ಕೂಡ ದುಸ್ಸಾಹಸವೆ ಆಗಿದೆ, ಏಕೆಂದರೆ ಈ ರಸ್ತೆಯಲ್ಲಿ ಮಣ್ಣು, ಮರಳಿನ ಲೋಡ್ ಸಾಘನೆ ಮಾಡುವ ವಾಹನಗಳಿಂದಾಘಿ ರಸ್ತೆ ಹದಗೆಟ್ಟಿದೆ. ಮೃತ ದೇಹವನ್ನು ವಾಹನದಲ್ಲಿ ಸಾಗಿಸಲಾಗುವುದಿಲ್ಲ. ಆನರು ಹೊತ್ತುಕೊಂಡೆ ಸಾಗಿಸಬೇಕಿದೆ.<br> ನಂತರ ನದಿ ದಡಕ್ಕೆ ಬಂದರೆ ನದಿ ದಡದಲ್ಲಿ ಎಲ್ಲೆಲ್ಲು ನೀರಿದೆ, ಕೊನೆಗೆ ನದಿ ನೀರಲ್ಲೆ ಮುಂದೆ ಸಾಗಿ ಅಲ್ಲೆ ಇರುವ ಎತ್ತರದ ದಿಬ್ಬದ ಮೇಲೆ ನಾಗಮ್ಮರ ಅಂತಿಮ ಸಂಸ್ಕಾರ ನಡೆಸಲಾಯಿತು.<br> ಗ್ರಾಮದ ಬೇರೆ ಸಮುದಾಯದವರಿಗೆ ಎತ್ತರ ಪ್ರದೇಶದಲ್ಲಿ ಸ್ಮಶಾನವಿದೆ, ಆದರೆ ಗ್ರಾಮದ ಪರಿಶಿಷ್ಟ ಜಾತಿಯವರಿಗೆ ನದಿ ದಡವೇ ಸ್ಮಶಾನವಾಗಿದೆ. ಮಳೆಗಾಲದಲ್ಲಿ ನದಿಯಲ್ಲಿ ಪ್ರವಾಹ ಬಂದಾಗ ಇಡೀ ನದಿ ದಡ ಜಲಾವೃತವಾಗುವುದರಿಂದ ಪ್ರತಿ ವರ್ಷ ಈ ಸಮಸ್ಯೆ ಈ ಸಮುದಾಯದವರಿಗೆ ಎದುರಾಗುತ್ತದೆ.<br> ಕಳೆದ ಮಳೆಗಾಲದಲ್ಲೂ ಈ ಸಮುದಾಯದವರು ಈ ಸಮಸ್ಯೆ ಎದುರಿಸಿದಾಗ ತಾಲ್ಲೂಕು ಆಡಳಿತದವರು ಎತ್ತರದ ಪ್ರದೇಶದಲ್ಲಿ ಪ್ರತ್ಯೇಕ ಸ್ಮಶಾನ ವ್ಯವಸ್ಥೆ ಮಾಡುವುದಾಗಿ ಈ ಸಮುದಾಯದವರಿಗೆ ನೀಡಿದ ಭರವಸೆ ಈಡೇರಿಲ್ಲ ಎಂಬ ಬೇಸರ ಈ ತಳ ಸಮುದಾಯದವರಿಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>