‘ಸಾವಿರಾರು ಮಂದಿ ಆಸ್ಪತ್ರೆಗೆ ಬಂದು ದಾಖಲಾಗುತ್ತಾರೆ. ನಾವು ಅವರ ಸೇವೆ ಮಾಡುತ್ತಿದ್ದೇವೆ. ನಾವು ಕೆಲಸ ಮಾಡದಿದ್ದರೆ ಇಲ್ಲಿ ಯಾರು ಬಂದು ಯಾರು ಬಂದು ಮಾಡುತ್ತಾರೆ. ಸೇವೆ ಮಾಡಿದ್ದಕ್ಕೆ ತಾನೇ ರೋಗ ಬಂದಿರುವುದು. ನರ್ಸ್ಗಳಿಗೆ, ಪೊಲೀಸರಿಗೆ, ವೈದ್ಯರಿಗೂ ಬಂದಿದೆ. 20 ವರ್ಷದಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ. ಬಿಡಿ ಎಂದರೆ ಬಿಟ್ಟು ಹೋಗಬೇಕು. ಕೂಡಲೇ ಕಾಯಂಗೊಳಿಸಬೇಕು’ ಎಂದು ಹನುಮಂತಪ್ಪ ಆಗ್ರಹಿಸಿದರು.