ಕುಡಿಯುವ ನೀರಿನ ತೊಂದರೆ ಇರುವುದರಿಂದ ಹರಿಹರ ತಾಲ್ಲೂಕಿನ ರೈತರು ಪಂಪ್ಸೆಟ್ಗಳ ಮೂಲಕ ನದಿಯಿಂದ ಜಮೀನಿಗೆ ನೀರು ಹರಿಸುವುದನ್ನು ನಿಷೇಧಿಸಿದೆ. ರೈತರು ಜಮೀನಿಗೆ ನೀರು ಹರಿಸಲೆಂದು ನದಿಗೆ ಅಳವಡಿಸಿರುವ ಅಕ್ರಮ ಪಂಪ್ಸೆಟ್ಗಳ ತೆರವು ಕಾರ್ಯವೂ ನಡೆಯುತ್ತಿದೆ. ಇದಕ್ಕಾಗಿ ತಾಲ್ಲೂಕಿನ ನದಿ ತೀರದಲ್ಲಿ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದೆ ಎಂದು ತಹಶೀಲ್ದಾರ್ ಗುರುಬಸವರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.