<p><strong>ದಾವಣಗೆರೆ: </strong>16 ತಿಂಗಳ ಬಾಕಿ ಶಿಷ್ಯವೇತನ ನೀಡುವ ಸಂಬಂಧ ಸರ್ಕಾರ ಲಿಖಿತ ಭರವಸೆ ನೀಡಬೇಕು. ಇಲ್ಲದಿದ್ದರೆ ಜುಲೈ 20ರಿಂದ ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದು ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಡಾ. ಹರೀಶ್ ಹೇಳಿದರು.</p>.<p>‘ಶಿಷ್ಯವೇತನ ನೀಡುವ ಸಂಬಂಧ ಆಶ್ವಾಸನೆ ಮಾತ್ರ ಸಿಕ್ಕಿದೆ. ಆದರೆ ಯಾರು ಶಿಷ್ಯವೇತನ ನೀಡುತ್ತಾರೆ ಎಂಬ ಬಗ್ಗೆ ನಮಗೆ ತಿಳಿಸಿಲ್ಲ. ಹಾಗಾಗಿ ಶಿಷ್ಯವೇತನ ನೀಡುವ ಸಂಬಂಧ ಸರ್ಕಾರ ಲಿಖಿತ ಭರವಸೆ ನೀಡಬೇಕು. ಧರಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಹಿಂಪಡೆದಿಲ್ಲ. ಒಂದು ವೇಳೆ ಲಿಖಿತ ಭರವಸೆ ಸಿಗದಿದ್ದರೆ ಸೋಮವಾರದಿಂದ ಮತ್ತೆ ಪ್ರತಿಭಟನೆ ಮುಂದುವರಿಸುತ್ತೇವೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಒಂದು ವರ್ಷ ಶಿಷ್ಯವೇತನ ನೀಡಿ. ಈಗ ಕೊಡುವುದಿಲ್ಲ ಎನ್ನುವುದು ಸರಿಯಲ್ಲ. ಶಿಷ್ಯವೇತನ ಸರ್ಕಾರದ ಮೂಲಕವೇ ನಮಗೆ ಬರಬೇಕು. ಒಂದು ವೇಳೆ ಕಾಲೇಜು ಆಡಳಿತ ಮಂಡಳಿ ನೀಡುವುದಾದರೆ ಸರ್ಕಾರಕ್ಕೆ ನೀಡಿ ಬಳಿಕ ಸರ್ಕಾರದಿಂದಲೇ ನಮಗೆ ಬರಬೇಕು’ ಎಂದರು.</p>.<p>‘ಬಾಕಿ ಇರುವ ಶಿಷ್ಯವೇತನ ನೀಡುವ ಸಂಬಂಧ ಮಾತ್ರ ಸ್ಪಂದನೆ ದೊರಕಿದೆ. 2020ರಜುಲೈ ತಿಂಗಳಿನಿಂದ ಕೋರ್ಸ್ ಮುಗಿಯುವವರೆಗಿನ ಶಿಷ್ಯವೇತನವನ್ನು ಯಾರು ನೀಡುತ್ತಾರೆ ಎಂಬ ಬೇಡಿಕೆ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ. ಈ ಬಗ್ಗೆಯೂ ಲಿಖಿತ ಭರವಸೆ ನೀಡಬೇಕು’ ಎಂದು ಒತ್ತಾಯಿಸಿದರು.</p>.<p>ಡಾ. ಹಿತಾ, ‘ಮುಂದಿನ ಸಾಲಿನಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೂ ಈ ವಿಷಯದಲ್ಲಿ ಅನ್ಯಾಯ ಆಗಬಾರದು. 2021ನೇ ಸಾಲಿನ ವಿದ್ಯಾರ್ಥಿಗಳಿಗೂ ಈಗಿನ ನೀತಿಯೇ ಅನ್ವಯಿಸಬೇಕು. ಅವರಿಗೂ ಶಿಷ್ಯವೇತನ ನೀಡುವ ಸಂಬಂಧ ತಿಳಿಸಬೇಕು. ಸರ್ಕಾರಿ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ನಿಗದಿ ಮಾಡಿರುವ ಶಿಷ್ಯವೇತನವನ್ನೇ ನಮಗೂ ನೀಡಬೇಕು’ ಎಂದು ಆಗ್ರಹಿಸಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಡಾ. ಸುಧಾಕರ, ಡಾ. ನಿಧಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>16 ತಿಂಗಳ ಬಾಕಿ ಶಿಷ್ಯವೇತನ ನೀಡುವ ಸಂಬಂಧ ಸರ್ಕಾರ ಲಿಖಿತ ಭರವಸೆ ನೀಡಬೇಕು. ಇಲ್ಲದಿದ್ದರೆ ಜುಲೈ 20ರಿಂದ ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದು ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಡಾ. ಹರೀಶ್ ಹೇಳಿದರು.</p>.<p>‘ಶಿಷ್ಯವೇತನ ನೀಡುವ ಸಂಬಂಧ ಆಶ್ವಾಸನೆ ಮಾತ್ರ ಸಿಕ್ಕಿದೆ. ಆದರೆ ಯಾರು ಶಿಷ್ಯವೇತನ ನೀಡುತ್ತಾರೆ ಎಂಬ ಬಗ್ಗೆ ನಮಗೆ ತಿಳಿಸಿಲ್ಲ. ಹಾಗಾಗಿ ಶಿಷ್ಯವೇತನ ನೀಡುವ ಸಂಬಂಧ ಸರ್ಕಾರ ಲಿಖಿತ ಭರವಸೆ ನೀಡಬೇಕು. ಧರಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಹಿಂಪಡೆದಿಲ್ಲ. ಒಂದು ವೇಳೆ ಲಿಖಿತ ಭರವಸೆ ಸಿಗದಿದ್ದರೆ ಸೋಮವಾರದಿಂದ ಮತ್ತೆ ಪ್ರತಿಭಟನೆ ಮುಂದುವರಿಸುತ್ತೇವೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಒಂದು ವರ್ಷ ಶಿಷ್ಯವೇತನ ನೀಡಿ. ಈಗ ಕೊಡುವುದಿಲ್ಲ ಎನ್ನುವುದು ಸರಿಯಲ್ಲ. ಶಿಷ್ಯವೇತನ ಸರ್ಕಾರದ ಮೂಲಕವೇ ನಮಗೆ ಬರಬೇಕು. ಒಂದು ವೇಳೆ ಕಾಲೇಜು ಆಡಳಿತ ಮಂಡಳಿ ನೀಡುವುದಾದರೆ ಸರ್ಕಾರಕ್ಕೆ ನೀಡಿ ಬಳಿಕ ಸರ್ಕಾರದಿಂದಲೇ ನಮಗೆ ಬರಬೇಕು’ ಎಂದರು.</p>.<p>‘ಬಾಕಿ ಇರುವ ಶಿಷ್ಯವೇತನ ನೀಡುವ ಸಂಬಂಧ ಮಾತ್ರ ಸ್ಪಂದನೆ ದೊರಕಿದೆ. 2020ರಜುಲೈ ತಿಂಗಳಿನಿಂದ ಕೋರ್ಸ್ ಮುಗಿಯುವವರೆಗಿನ ಶಿಷ್ಯವೇತನವನ್ನು ಯಾರು ನೀಡುತ್ತಾರೆ ಎಂಬ ಬೇಡಿಕೆ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ. ಈ ಬಗ್ಗೆಯೂ ಲಿಖಿತ ಭರವಸೆ ನೀಡಬೇಕು’ ಎಂದು ಒತ್ತಾಯಿಸಿದರು.</p>.<p>ಡಾ. ಹಿತಾ, ‘ಮುಂದಿನ ಸಾಲಿನಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೂ ಈ ವಿಷಯದಲ್ಲಿ ಅನ್ಯಾಯ ಆಗಬಾರದು. 2021ನೇ ಸಾಲಿನ ವಿದ್ಯಾರ್ಥಿಗಳಿಗೂ ಈಗಿನ ನೀತಿಯೇ ಅನ್ವಯಿಸಬೇಕು. ಅವರಿಗೂ ಶಿಷ್ಯವೇತನ ನೀಡುವ ಸಂಬಂಧ ತಿಳಿಸಬೇಕು. ಸರ್ಕಾರಿ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ನಿಗದಿ ಮಾಡಿರುವ ಶಿಷ್ಯವೇತನವನ್ನೇ ನಮಗೂ ನೀಡಬೇಕು’ ಎಂದು ಆಗ್ರಹಿಸಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಡಾ. ಸುಧಾಕರ, ಡಾ. ನಿಧಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>