<p><strong>ದಾವಣಗೆರೆ:</strong> ಜಿಲ್ಲೆಯ ವಿವಿಧ ತಾಂಡಾಗಳಲ್ಲಿ ಕೊರೊನಾ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ನಿದರ್ಶನಗಳು ಕಂಡುಬರುತ್ತಿವೆ.</p>.<p>‘ಲಸಿಕೆ ಪಡೆದರೆ ನಪುಂಸಕರಾಗಿ ಅವರಿಗೆ ಮಕ್ಕಳಾಗುವುದಿಲ್ಲ, ಎರಡು ವರ್ಷಗಳಿಗೆ ಸಾಯುತ್ತಾರೆ.ನಾವು ಲಸಿಕೆ ತೆಗೆದುಕೊಳ್ಳದೇ ಇದ್ದರೂ ಚೆನ್ನಾಗಿರುತ್ತೇವೆ ಎಂಬ ಮೌಢ್ಯ ತಾಂಡಾದ ಜನರಲ್ಲಿ ಬೇರೂರಿರುವುದರಿಂದ ಕೊರೊನಾ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ’ ಎನ್ನುತ್ತಾರೆ ಕೆಪಿಸಿಸಿ ಎಸ್ಸಿ ವಿಭಾಗದ ರಾಜ್ಯ ಉಪಾಧ್ಯಕ್ಷ ಎಚ್. ನಾಗರಾಜ.</p>.<p>‘ಜಿಲ್ಲೆಯ ವಿವಿಧ ತಾಂಡಾಗಳಲ್ಲಿ 4 ಲಕ್ಷ ಜನಸಂಖ್ಯೆ ಇದ್ದು, ವೈದ್ಯರು, ಸರ್ಕಾರಿ ನೌಕರರು, ಶಿಕ್ಷಕರು, ಎಂಜಿನಿಯರ್ಗಳು ಹಾಗೂ ರಾಜಕೀಯ ವ್ಯಕ್ತಿಗಳು ಸೇರಿ ವಿದ್ಯಾವಂತರಷ್ಟೇ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ. ಆದರೆ ತಾಂಡಾದ ಒಳಗಡೆ ಇರುವ ಜನರಿಗೆ ತಿಳಿವಳಿಕೆ ಮೂಡಿಲ್ಲ’ ಎಂಬುದು ಅವರ ವಿವರಣೆ.</p>.<p>‘ಚನ್ನಗಿರಿ ತಾಲ್ಲೂಕಿನಲ್ಲಿ 52, ಮಾಯಕೊಂಡ–43, ಹರಪನಹಳ್ಳಿಯಲ್ಲಿ 80 ದಾವಣಗೆರೆ ಉತ್ತರ ಹಾಗೂ ದಕ್ಷಿಣ ಕ್ಷೇತ್ರದಲ್ಲಿ 1ಲಕ್ಷ, ಹೊನ್ನಾಳಿ ತಾಲ್ಲೂಕಿನಲ್ಲಿ 58, ಹರಿಹರ ತಾಲ್ಲೂಕಿನಲ್ಲಿ 42 ತಾಂಡಾಗಳು ಇವೆ. ಈ ತಾಂಡಾಗಳಿಂದ ಕೂಲಿಗಾಗಿ ಬೆಂಗಳೂರು, ಗೋವಾ, ಚಿಕ್ಕಮಗಳೂರು ಭಾಗಗಳಲ್ಲಿ ಕಾಫಿ ಎಸ್ಟೇಟ್ಗಳಿಗೆ ದುಡಿಮೆ ಮಾಡಿ ಲಾಕ್ಡೌನ್ ವೇಳೆ ಹಿಂತಿರುಗಿದ್ದಾರೆ. ಇದರಿಂದಾಗಿ ಕೊರೊನಾ ಹೆಚ್ಚಾಗಿ ಕಾಣಿಸಿಕೊಂಡಿದೆ’ ಎಂಬುದು ಅವರ ವಾದ.</p>.<p>‘ಚನ್ನಗಿರಿ ತಾಲ್ಲೂಕಿನ 8, ಕಬ್ಬಳದಲ್ಲಿ 9, ಕರೆಕಟ್ಟೆಯಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಹಲವು ತಾಂಡಾಗಳಲ್ಲಿ ಕೋವಿಡ್ನಿಂದ ಮೃತಪಟ್ಟಿದ್ದಾರೆ. ತಜ್ಞರು ಮೂರನೇ ಅಲೆಯ ಎಚ್ಚರಿಕೆ ನೀಡಿದರೂ ತಾಂಡಾಗಳಲ್ಲಿ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂದು ನಾಗರಾಜ ಹೇಳುತ್ತಾರೆ.</p>.<p class="Subhead"><strong>ಕೊರೊನಾ ಜಾಗೃತಿ: </strong>ತಾಂಡಾಗಳಲ್ಲಿ ಲಸಿಕೆ ಬಗ್ಗೆ ಇರುವ ಮೌಢ್ಯವನ್ನು ದೂರ ಮಾಡುವ ನಿಟ್ಟಿನಲ್ಲಿ ಮಾಯಕೊಂಡ ಕ್ಷೇತ್ರದ ಬಸವಾಪಟ್ಟಣ ಹೋಬಳಿಯ ಹೊಸನಗರ ತಾಂಡಾಗಳಲ್ಲಿ ಜಾಗೃತಿ ಮೂಡಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಜಿಲ್ಲೆಯ ವಿವಿಧ ತಾಂಡಾಗಳಲ್ಲಿ ಕೊರೊನಾ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ನಿದರ್ಶನಗಳು ಕಂಡುಬರುತ್ತಿವೆ.</p>.<p>‘ಲಸಿಕೆ ಪಡೆದರೆ ನಪುಂಸಕರಾಗಿ ಅವರಿಗೆ ಮಕ್ಕಳಾಗುವುದಿಲ್ಲ, ಎರಡು ವರ್ಷಗಳಿಗೆ ಸಾಯುತ್ತಾರೆ.ನಾವು ಲಸಿಕೆ ತೆಗೆದುಕೊಳ್ಳದೇ ಇದ್ದರೂ ಚೆನ್ನಾಗಿರುತ್ತೇವೆ ಎಂಬ ಮೌಢ್ಯ ತಾಂಡಾದ ಜನರಲ್ಲಿ ಬೇರೂರಿರುವುದರಿಂದ ಕೊರೊನಾ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ’ ಎನ್ನುತ್ತಾರೆ ಕೆಪಿಸಿಸಿ ಎಸ್ಸಿ ವಿಭಾಗದ ರಾಜ್ಯ ಉಪಾಧ್ಯಕ್ಷ ಎಚ್. ನಾಗರಾಜ.</p>.<p>‘ಜಿಲ್ಲೆಯ ವಿವಿಧ ತಾಂಡಾಗಳಲ್ಲಿ 4 ಲಕ್ಷ ಜನಸಂಖ್ಯೆ ಇದ್ದು, ವೈದ್ಯರು, ಸರ್ಕಾರಿ ನೌಕರರು, ಶಿಕ್ಷಕರು, ಎಂಜಿನಿಯರ್ಗಳು ಹಾಗೂ ರಾಜಕೀಯ ವ್ಯಕ್ತಿಗಳು ಸೇರಿ ವಿದ್ಯಾವಂತರಷ್ಟೇ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ. ಆದರೆ ತಾಂಡಾದ ಒಳಗಡೆ ಇರುವ ಜನರಿಗೆ ತಿಳಿವಳಿಕೆ ಮೂಡಿಲ್ಲ’ ಎಂಬುದು ಅವರ ವಿವರಣೆ.</p>.<p>‘ಚನ್ನಗಿರಿ ತಾಲ್ಲೂಕಿನಲ್ಲಿ 52, ಮಾಯಕೊಂಡ–43, ಹರಪನಹಳ್ಳಿಯಲ್ಲಿ 80 ದಾವಣಗೆರೆ ಉತ್ತರ ಹಾಗೂ ದಕ್ಷಿಣ ಕ್ಷೇತ್ರದಲ್ಲಿ 1ಲಕ್ಷ, ಹೊನ್ನಾಳಿ ತಾಲ್ಲೂಕಿನಲ್ಲಿ 58, ಹರಿಹರ ತಾಲ್ಲೂಕಿನಲ್ಲಿ 42 ತಾಂಡಾಗಳು ಇವೆ. ಈ ತಾಂಡಾಗಳಿಂದ ಕೂಲಿಗಾಗಿ ಬೆಂಗಳೂರು, ಗೋವಾ, ಚಿಕ್ಕಮಗಳೂರು ಭಾಗಗಳಲ್ಲಿ ಕಾಫಿ ಎಸ್ಟೇಟ್ಗಳಿಗೆ ದುಡಿಮೆ ಮಾಡಿ ಲಾಕ್ಡೌನ್ ವೇಳೆ ಹಿಂತಿರುಗಿದ್ದಾರೆ. ಇದರಿಂದಾಗಿ ಕೊರೊನಾ ಹೆಚ್ಚಾಗಿ ಕಾಣಿಸಿಕೊಂಡಿದೆ’ ಎಂಬುದು ಅವರ ವಾದ.</p>.<p>‘ಚನ್ನಗಿರಿ ತಾಲ್ಲೂಕಿನ 8, ಕಬ್ಬಳದಲ್ಲಿ 9, ಕರೆಕಟ್ಟೆಯಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಹಲವು ತಾಂಡಾಗಳಲ್ಲಿ ಕೋವಿಡ್ನಿಂದ ಮೃತಪಟ್ಟಿದ್ದಾರೆ. ತಜ್ಞರು ಮೂರನೇ ಅಲೆಯ ಎಚ್ಚರಿಕೆ ನೀಡಿದರೂ ತಾಂಡಾಗಳಲ್ಲಿ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂದು ನಾಗರಾಜ ಹೇಳುತ್ತಾರೆ.</p>.<p class="Subhead"><strong>ಕೊರೊನಾ ಜಾಗೃತಿ: </strong>ತಾಂಡಾಗಳಲ್ಲಿ ಲಸಿಕೆ ಬಗ್ಗೆ ಇರುವ ಮೌಢ್ಯವನ್ನು ದೂರ ಮಾಡುವ ನಿಟ್ಟಿನಲ್ಲಿ ಮಾಯಕೊಂಡ ಕ್ಷೇತ್ರದ ಬಸವಾಪಟ್ಟಣ ಹೋಬಳಿಯ ಹೊಸನಗರ ತಾಂಡಾಗಳಲ್ಲಿ ಜಾಗೃತಿ ಮೂಡಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>