<p><strong>ಹರಿಹರ:</strong> ಯುವ ಜನರನ್ನು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಈಗಿನ ದೊಡ್ಡ ಸವಾಲು ಎಂದು ದೊಡ್ಡಬಾತಿಯ ತಪೋವನ ಸಮೂಹ ಸಂಸ್ಥೆಗಳ ಅಧ್ಯಕ್ಷ ಶಶಿಕುಮಾರ್ ವಿ.ಮೆಹರ್ವಾಡೆ ಹೇಳಿದರು.</p>.<p>ಸಮೀಪದ ದೊಡ್ಡಬಾತಿಯ ತಪೋವನ ಸಂಸ್ಥೆಯಲ್ಲಿ ತಪೋವನ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ (ಎಸ್ಎಲ್ಸಿಎ) ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ನಶೆಮುಕ್ತ ಭಾರತ ಅಭಿಯಾನ-2025ರ ಪ್ರತಿಜ್ಞಾವಿಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>‘ಶಾಲೆ, ಕಾಲೇಜು, ಮನೆಪಾಠ, ಜಿಮ್, ಆಟದ ಮೈದಾನ ಅಥವಾ ದುಡಿಯಲು ಹೋಗುವ ಮಕ್ಕಳ ಸ್ನೇಹ ಬಳಗ ಹೇಗಿದೆ, ಅವರ ಹವ್ಯಾಸ, ಅಭ್ಯಾಸ ಹೇಗಿದೆ ಎಂದು ಪಾಲಕರು ಕಣ್ಣಿಡಬೇಕು. ದುಶ್ಚಟಗಳ ಅಭ್ಯಾಸ ಕಂಡು ಬಂದರೆ ಬುದ್ಧಿಹೇಳಿ ಸರಿಪಡಿಸಬೇಕು ಎಂದರು.</p>.<p>ಮಾದಕ ವಸ್ತುಗಳ ಮಾರಾಟ ಜಾಲ ಸುತ್ತಲಿನ ಪರಿಸರದಲ್ಲಿ ಸಕ್ರಿಯವಾಗಿದೆ. ಪೊಲೀಸರು ಕಠಿಣ ಕ್ರಮ ಜರುಗಿಸುತ್ತಿದ್ದು, ಪಾಲಕರು, ಹಿರಿಯರು, ವಿದ್ಯಾಸಂಸ್ಥೆಯವರು ನಿಗಾ ವಹಿಸುವ ಅಗತ್ಯವಿದೆ ಎಂದು ವಿವರಿಸಿದರು.</p>.<p>‘ವಿದ್ಯಾರ್ಥಿಗಳು ಓದುವ, ಯುವಕರು ದುಡಿಯುವ ಹಾಗೂ ವಿವಾಹಿತರು ಕುಟುಂಬವನ್ನು ಸಲಹುವುದರ ನಶೆ ಹೊಂದಿರಬೇಕು. ಕ್ಷಣಿಕ ಸುಖಕ್ಕೆ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು’ ಎಂದು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಇಲಾಖೆಯ ಅಧಿಕಾರಿ ಕೆ.ಕೆ.ಪ್ರಕಾಶ್ ಹೇಳಿದರು.</p>.<p>ಶಶಿಕುಮಾರ್ ವಿ. ಮೆಹರ್ವಾಡೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಬಿಎಎಂಎಸ್ ಕಾಲೇಜು ಪ್ರಾಚಾರ್ಯೆ ಡಾ.ಅಶ್ವಿನಿ ಕೆ.ಆರ್. ಸ್ವಾಗತಿಸಿದರು, ಮೆಡಿಕಲ್ ಡೈರೆಕ್ಟರ್ ಡಾ.ಪರಮೇಶ್ವರ ವಂದಿಸಿದರು. ವಿದ್ಯಾರ್ಥಿನಿ ಭೂಮಿಕ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ:</strong> ಯುವ ಜನರನ್ನು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಈಗಿನ ದೊಡ್ಡ ಸವಾಲು ಎಂದು ದೊಡ್ಡಬಾತಿಯ ತಪೋವನ ಸಮೂಹ ಸಂಸ್ಥೆಗಳ ಅಧ್ಯಕ್ಷ ಶಶಿಕುಮಾರ್ ವಿ.ಮೆಹರ್ವಾಡೆ ಹೇಳಿದರು.</p>.<p>ಸಮೀಪದ ದೊಡ್ಡಬಾತಿಯ ತಪೋವನ ಸಂಸ್ಥೆಯಲ್ಲಿ ತಪೋವನ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ (ಎಸ್ಎಲ್ಸಿಎ) ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ನಶೆಮುಕ್ತ ಭಾರತ ಅಭಿಯಾನ-2025ರ ಪ್ರತಿಜ್ಞಾವಿಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>‘ಶಾಲೆ, ಕಾಲೇಜು, ಮನೆಪಾಠ, ಜಿಮ್, ಆಟದ ಮೈದಾನ ಅಥವಾ ದುಡಿಯಲು ಹೋಗುವ ಮಕ್ಕಳ ಸ್ನೇಹ ಬಳಗ ಹೇಗಿದೆ, ಅವರ ಹವ್ಯಾಸ, ಅಭ್ಯಾಸ ಹೇಗಿದೆ ಎಂದು ಪಾಲಕರು ಕಣ್ಣಿಡಬೇಕು. ದುಶ್ಚಟಗಳ ಅಭ್ಯಾಸ ಕಂಡು ಬಂದರೆ ಬುದ್ಧಿಹೇಳಿ ಸರಿಪಡಿಸಬೇಕು ಎಂದರು.</p>.<p>ಮಾದಕ ವಸ್ತುಗಳ ಮಾರಾಟ ಜಾಲ ಸುತ್ತಲಿನ ಪರಿಸರದಲ್ಲಿ ಸಕ್ರಿಯವಾಗಿದೆ. ಪೊಲೀಸರು ಕಠಿಣ ಕ್ರಮ ಜರುಗಿಸುತ್ತಿದ್ದು, ಪಾಲಕರು, ಹಿರಿಯರು, ವಿದ್ಯಾಸಂಸ್ಥೆಯವರು ನಿಗಾ ವಹಿಸುವ ಅಗತ್ಯವಿದೆ ಎಂದು ವಿವರಿಸಿದರು.</p>.<p>‘ವಿದ್ಯಾರ್ಥಿಗಳು ಓದುವ, ಯುವಕರು ದುಡಿಯುವ ಹಾಗೂ ವಿವಾಹಿತರು ಕುಟುಂಬವನ್ನು ಸಲಹುವುದರ ನಶೆ ಹೊಂದಿರಬೇಕು. ಕ್ಷಣಿಕ ಸುಖಕ್ಕೆ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು’ ಎಂದು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಇಲಾಖೆಯ ಅಧಿಕಾರಿ ಕೆ.ಕೆ.ಪ್ರಕಾಶ್ ಹೇಳಿದರು.</p>.<p>ಶಶಿಕುಮಾರ್ ವಿ. ಮೆಹರ್ವಾಡೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಬಿಎಎಂಎಸ್ ಕಾಲೇಜು ಪ್ರಾಚಾರ್ಯೆ ಡಾ.ಅಶ್ವಿನಿ ಕೆ.ಆರ್. ಸ್ವಾಗತಿಸಿದರು, ಮೆಡಿಕಲ್ ಡೈರೆಕ್ಟರ್ ಡಾ.ಪರಮೇಶ್ವರ ವಂದಿಸಿದರು. ವಿದ್ಯಾರ್ಥಿನಿ ಭೂಮಿಕ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>