<p>ಹರಿಹರ: ನಟ, ನಿರ್ಮಾಪಕ ದ್ವಾರಕೀಶ್ ಅವರಿಗೆ ಹರಿಹರದ ಜೊತೆಗೆ ಗಾಢವಾದ ನಂಟಿತ್ತು. ಅವರ ಪತ್ನಿ ಅಂಬುಜಾ ಅವರ ಇಬ್ಬರು ಚಿಕ್ಕಮ್ಮಂದಿರು ಹರಿಹರದಲ್ಲಿದ್ದರು. ಅವರಲ್ಲಿ ಒಬ್ಬರು ಇಂದಿರಾಬಾಯಿ ಅಣ್ಣಿಗೇರಿ ನರಸಿಂಹ ಮೂರ್ತಿ ಹರಿಹರದ ಜೆ.ಸಿ.ಬಡಾವಣೆ 5ಮೇನ್, 7ನೇ ಕ್ರಾಸ್ನಲ್ಲಿ ವಾಸವಿದ್ದರು.</p>.<p>ಅವರ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದರು, ಜೊತೆಗೆ 1981ರಲ್ಲಿ ‘ಮನೆ ಮನೆ ಕಥೆ’ ಚಲನಚಿತ್ರದ ಶೂಟಿಂಗ್ಗೆ ಏಳೆಂಟು ದಿನ ಹರಿಹರದಲ್ಲೆ ಅವರು ವಾಸ್ತವ್ಯ ಹೂಡಿದ್ದರು.</p>.<p>‘ಮನೆ ಮನೆ ಕಥೆ’ ಸಿನಿಮಾ ತಯಾರಾಗಿದ್ದು ಕಲಾಕ್ರತಿ ಕ್ರಿಯೇಷನ್ಸ್ನಿಂದ, ಈ ಸಿನಿಮಾಗೆ ದ್ವಾರಕೀಶ್ ಅವರ ಜೊತೆಗೆ ಭಾರ್ಗವ, ಹರಿಹರದ ಅಂದಿನ ಉದ್ಯಮಿ ದಿ.ಎಂ.ಪಿ.ಕುಮಾರ್ ಸಹ ನಿರ್ಮಾಪಕರಾಗಿದ್ದರು. ಹರಿಹರದ ಆಗಿನ ಮೈಸೂರು ಕಿರ್ಲೋಸ್ಕರ್ ಕಾರ್ಖಾನೆಯ ಗೆಸ್ಟ್ ಹೌಸ್, ಅದರ ಮುಂದಿನ ಉದ್ಯಾನ ಹಾಗೂ ದಿ.ಎಂ.ಪಿ.ಕುಮಾರ್ ಅವರ ಮನೆಯಲ್ಲಿ ಈ ಸಿನಿಮಾದ ಶೂಟಿಂಗ್ ಏಳೆಂಟು ದಿನ ನಡೆದಿತ್ತು ಎಂದು ಹರಿಹರ ಕೈಗಾರಿಕಾ ಸಂಘದ ಅಧ್ಯಕ್ಷ ಪಿ.ಆರ್.ನಾಯ್ಡು, ಹಾಗೂ ದ್ವಾರಕೀಶ್ ಅವರ ಹತ್ತಿರದ ಸಂಬಂಧಿಯಾದ ವಕೀಲ ಎ.ವಾಮನಮೂರ್ತಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹರಿಹರ: ನಟ, ನಿರ್ಮಾಪಕ ದ್ವಾರಕೀಶ್ ಅವರಿಗೆ ಹರಿಹರದ ಜೊತೆಗೆ ಗಾಢವಾದ ನಂಟಿತ್ತು. ಅವರ ಪತ್ನಿ ಅಂಬುಜಾ ಅವರ ಇಬ್ಬರು ಚಿಕ್ಕಮ್ಮಂದಿರು ಹರಿಹರದಲ್ಲಿದ್ದರು. ಅವರಲ್ಲಿ ಒಬ್ಬರು ಇಂದಿರಾಬಾಯಿ ಅಣ್ಣಿಗೇರಿ ನರಸಿಂಹ ಮೂರ್ತಿ ಹರಿಹರದ ಜೆ.ಸಿ.ಬಡಾವಣೆ 5ಮೇನ್, 7ನೇ ಕ್ರಾಸ್ನಲ್ಲಿ ವಾಸವಿದ್ದರು.</p>.<p>ಅವರ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದರು, ಜೊತೆಗೆ 1981ರಲ್ಲಿ ‘ಮನೆ ಮನೆ ಕಥೆ’ ಚಲನಚಿತ್ರದ ಶೂಟಿಂಗ್ಗೆ ಏಳೆಂಟು ದಿನ ಹರಿಹರದಲ್ಲೆ ಅವರು ವಾಸ್ತವ್ಯ ಹೂಡಿದ್ದರು.</p>.<p>‘ಮನೆ ಮನೆ ಕಥೆ’ ಸಿನಿಮಾ ತಯಾರಾಗಿದ್ದು ಕಲಾಕ್ರತಿ ಕ್ರಿಯೇಷನ್ಸ್ನಿಂದ, ಈ ಸಿನಿಮಾಗೆ ದ್ವಾರಕೀಶ್ ಅವರ ಜೊತೆಗೆ ಭಾರ್ಗವ, ಹರಿಹರದ ಅಂದಿನ ಉದ್ಯಮಿ ದಿ.ಎಂ.ಪಿ.ಕುಮಾರ್ ಸಹ ನಿರ್ಮಾಪಕರಾಗಿದ್ದರು. ಹರಿಹರದ ಆಗಿನ ಮೈಸೂರು ಕಿರ್ಲೋಸ್ಕರ್ ಕಾರ್ಖಾನೆಯ ಗೆಸ್ಟ್ ಹೌಸ್, ಅದರ ಮುಂದಿನ ಉದ್ಯಾನ ಹಾಗೂ ದಿ.ಎಂ.ಪಿ.ಕುಮಾರ್ ಅವರ ಮನೆಯಲ್ಲಿ ಈ ಸಿನಿಮಾದ ಶೂಟಿಂಗ್ ಏಳೆಂಟು ದಿನ ನಡೆದಿತ್ತು ಎಂದು ಹರಿಹರ ಕೈಗಾರಿಕಾ ಸಂಘದ ಅಧ್ಯಕ್ಷ ಪಿ.ಆರ್.ನಾಯ್ಡು, ಹಾಗೂ ದ್ವಾರಕೀಶ್ ಅವರ ಹತ್ತಿರದ ಸಂಬಂಧಿಯಾದ ವಕೀಲ ಎ.ವಾಮನಮೂರ್ತಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>