<p><strong>ಸಂತೇಬೆನ್ನೂರು:</strong> ಸೂಳೆಕೆರೆಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿ ನೀರಿನ ಸಂಗ್ರಹ ಕುಸಿದಿದ್ದು, ಹಿನ್ನೀರಿನ ಭಾಗದ ರೈತರು ಫಲವತ್ತಾದ ಹೂಳನ್ನು ತೆಗೆದು ತಮ್ಮ ಜಮೀನುಗಳಿಗೆ ಸಾಗಿಸುವ ಮೂಲಕ ಪರೋಕ್ಷವಾಗಿಕೆರೆಯ ಪುನಶ್ಚೇತನ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.</p>.<p>ಕೆರೆಯಲ್ಲಿ ತುಂಬ ಇರುವ ಹೂಳು ತೆರವುಗೊಳಿಸುವ ಯೋಜನೆ ರೂಪಿಸುವಂತೆ ಖಡ್ಗ ಸಂಘ ಸೇರಿದಂತೆ ಹಲವು ರೈತ ಮುಖಂಡರು ಸರ್ಕಾರದ ಗಮನ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ರೈತರೇ ಸ್ವಯಂ ಪ್ರೇರಣೆಯಿಂದ ಹೂಳನ್ನು ಅನುಕೂಲಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ ಕಾರ್ಯಗತರಾಗಿದ್ದಾರೆ.</p>.<p>ಅಂತೆಯೇ ಹಿನ್ನೀರಿನ ವ್ಯಾಪ್ತಿಯ 500 ಮೀಟರ್ ದೂರದಲ್ಲಿ ಕ್ರಮಿಸಿದರೆ ಹಿಟ್ಯಾಚಿ, ಜೆಸಿಬಿ ಯಂತ್ರಗಳು ಹೂಳು ತೆಗೆಯುತ್ತಿರುವುದು ಕಾಣಸಿಗುತ್ತಿದೆ. ಕೆರೆಬಿಳಚಿ, ಸೋಮಲಾಪುರ, ಜಕ್ಕಲಿ, ಚೆನ್ನಾಪುರ, ಕೊಂಡದಹಳ್ಳಿ ವ್ಯಾಪ್ತಿಯಲ್ಲಿ ಭರದಿಂದ ಮಣ್ಣು ಸಾಗಿಸಲಾಗುತ್ತಿದೆ. ನಿತ್ಯ 200ರಿಂದ 250 ಟ್ರ್ಯಾಕ್ಟರ್ಗಳು ಮಣ್ಣನ್ನು ತೋಟಗಳಿಗೆ ಸಾಗಿಸುತ್ತಿವೆ.</p>.<p>ಹಿಟ್ಯಾಚಿಗಳಿಗೆ ಪ್ರತಿ ಗಂಟೆಗೆ ₹ 2,200 ದರ ನಿಗದಿಗೊಳಿಸಲಾಗಿದೆ. ಟಿಪ್ಪರ್ಗಳಿಗೆ ದಿನಕ್ಕೆ ₹ 6,000 ಬಾಡಿಗೆ ನೀಡಿ, ಡೀಸೆಲ್ ಅನ್ನು ರೈತರೇ ತುಂಬಿಸುವ ಕರಾರಿನ ಮೂಲಕ ಜಮೀನುಗಳಿಗೆ ಮಣ್ಣು ಸಾಗಿಸಲಾಗುತ್ತಿದೆ.</p>.<p>ಜೆಸಿಬಿ ಯಂತ್ರಗಳ ಮಾಲೀಕರು ಪ್ರತಿ ಟ್ರ್ಯಾಕ್ಟರ್ ಲೋಡ್ ಮಣ್ಣು ತುಂಬಲು ₹ 100 ದರ ನಿಗದಿಗೊಳಿಸಿದ್ದಾರೆ. ಟ್ರ್ಯಾಕ್ಟರ್ ಬಾಡಿಗೆ ದೂರಕ್ಕೆ ಅನುಗುಣವಾಗಿ ನೀಡಲಾಗುತ್ತಿದೆ ಎಂದು ಜಕ್ಕಲಿಯ ರೈತ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಪುಡಿ ಹರಳಿನಿ ರೂಪದ ಕಪ್ಪು ಮಣ್ಣು ಪೋಷಕಾಂಶಗಳ ಗಣಿ. ತೋಟದ ಬೆಳೆಗಳಿಗೆ ಹೂಳು ಮಣ್ಣು ಹಾಕುವುದರಿಂದ ಇಳುವರಿ ವೃದ್ಧಿಸಲಿದೆ. 15 ದಿನಗಳಿಂದ 5ರಿಂದ 8 ಅಡಿ ಆಳದವರೆಗೆ ಅಗೆದು ಮಣ್ಣು ತುಂಬಿಸಲಾಗುತ್ತಿದೆ. ಹೂಳನ್ನು ವ್ಯವಸ್ಥಿತವಾಗಿ ತೆಗೆಯಲಾಗುತ್ತಿದೆ. ಇದರಿಂದ ಮಳೆ ಸುರಿದಾಗ ಕೆರೆಯಂಗಳದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ ಉದ್ದೇಶವೂ ಫಲಿಸಲಿದೆ ಎಂದು ರೈತ ಹಾಲೇಶ್ ವಿವರಿಸಿದರು.</p>.<p>‘ಪ್ರತಿ ಟ್ರ್ಯಾಕ್ಟರ್ ಲೋಡ್ ಮಣ್ಣು ತುಂಬಿಸಲು ₹ 100, ಸಾಗಣೆ ದರ ₹ 500ರಂತೆ 300 ಲೋಡ್ ತೋಟಕ್ಕೆ ಸಾಗಿಸಿದ್ದೇನೆ. ₹ 2 ಲಕ್ಷ ಖರ್ಚಾಗಿದೆ’ ಎನ್ನುತ್ತಾರೆ ಚೆನ್ನಾಪುರದ ರೈತ ಕರಿಯಪ್ಪ.</p>.<p>‘ಗ್ರಾಮ ಪಂಚಾಯಿತಿ ಮಾಡಬೇಕಾದ ಕೆಲಸವನ್ನು ರೈತರೇ ಮಾಡುತ್ತಿರುವುದು ಶ್ಲಾಘನೀಯ. ರೈತರು ಹೂಳನ್ನು ತೋಟಕ್ಕೆ ಹಾಕಲು ಅಡ್ಡಿಯಿಲ್ಲ. ಇದಕ್ಕೆ ಗ್ರಾಮ ಪಂಚಾಯಿತಿಯ ಒಪ್ಪಿಗೆ ಬೇಕಿಲ್ಲ’ ಎಂದು ಕೊಂಡದಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ವಾಣಿ ಕರಿಯಪ್ಪ ಹೇಳಿದರು.</p>.<p>‘ಸೂಳೆಕೆರೆ ನೀರು ಸಂಗ್ರಹಣಾ ವ್ಯಾಪ್ತಿ 6,500 ಎಕರೆ ಇದೆ. ಒಮ್ಮೆಲೇ ಹೂಳು ತೆಗೆಸಲು ಅಪಾರ ಪ್ರಮಾಣದ ಹಣ ಬೇಕು. ಪ್ರತಿ ವರ್ಷ 100 ಎಕರೆ ಹೂಳು ತೆಗೆದರೂ ನೀರಿನ ಸಂಗ್ರಹ ಸಾಂರ್ಥ್ಯ ವೃದ್ಧಿಸಲಿದೆ’ ಎಂದು ಅವರು ಒತ್ತಾಯಿಸಿದರು.</p>.<p>‘ಸೂಳೆಕೆರೆ ಹೂಳು ತೆರವಿಗೆ ಸಹಕರಿಸುವಂತೆ ಇನ್ಫೋಸಿಸ್ ಹಾಗೂ ಎರಿಕ್ಸನ್ ಫೌಂಡೇಷನ್ಗಳಿಗೆ ಮನವಿ ಮಾಡಲಾಗಿದೆ. ಕೆರೆ ಸಮೀಕ್ಷೆ ಕಾರ್ಯ ನಡೆದು ಗಡಿ ಗುರುತಿಸಿದ ನಂತರ ಹೂಳು ತೆರವಿಗೆ ಚಿಂತನೆ ನಡೆಸಲಾಗುವುದು ಎಂಬ ಪ್ರತಿಕ್ರಿಯೆ ದೊರೆತಿದೆ. ಶೀಘ್ರ ಸಮೀಕ್ಷೆ ನಡೆಯಬೇಕಿದೆ’ ಎಂದು ಅವರು ಕೋರಿದರು.</p>.<div><blockquote>ಕೆರೆ ಸಂಜೀವಿನಿ ಯೋಜನೆಯಲ್ಲಿ ಜಿಲ್ಲಾಧಿಕಾರಿ ಪ್ರತಿ ವರ್ಷ ಸಾಧ್ಯವಾದಷ್ಟು ಹೂಳು ತೆಗೆಸಲು ಚಿಂತಿಸಬೇಕು. ಇದರಿಂದ ಕೆರೆಯ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಲಿದೆ.</blockquote><span class="attribution"> ರಘು ಹೊನ್ನೆಮರದಹಳ್ಳಿ ಖಡ್ಗ ಸಂಘ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂತೇಬೆನ್ನೂರು:</strong> ಸೂಳೆಕೆರೆಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿ ನೀರಿನ ಸಂಗ್ರಹ ಕುಸಿದಿದ್ದು, ಹಿನ್ನೀರಿನ ಭಾಗದ ರೈತರು ಫಲವತ್ತಾದ ಹೂಳನ್ನು ತೆಗೆದು ತಮ್ಮ ಜಮೀನುಗಳಿಗೆ ಸಾಗಿಸುವ ಮೂಲಕ ಪರೋಕ್ಷವಾಗಿಕೆರೆಯ ಪುನಶ್ಚೇತನ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.</p>.<p>ಕೆರೆಯಲ್ಲಿ ತುಂಬ ಇರುವ ಹೂಳು ತೆರವುಗೊಳಿಸುವ ಯೋಜನೆ ರೂಪಿಸುವಂತೆ ಖಡ್ಗ ಸಂಘ ಸೇರಿದಂತೆ ಹಲವು ರೈತ ಮುಖಂಡರು ಸರ್ಕಾರದ ಗಮನ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ರೈತರೇ ಸ್ವಯಂ ಪ್ರೇರಣೆಯಿಂದ ಹೂಳನ್ನು ಅನುಕೂಲಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ ಕಾರ್ಯಗತರಾಗಿದ್ದಾರೆ.</p>.<p>ಅಂತೆಯೇ ಹಿನ್ನೀರಿನ ವ್ಯಾಪ್ತಿಯ 500 ಮೀಟರ್ ದೂರದಲ್ಲಿ ಕ್ರಮಿಸಿದರೆ ಹಿಟ್ಯಾಚಿ, ಜೆಸಿಬಿ ಯಂತ್ರಗಳು ಹೂಳು ತೆಗೆಯುತ್ತಿರುವುದು ಕಾಣಸಿಗುತ್ತಿದೆ. ಕೆರೆಬಿಳಚಿ, ಸೋಮಲಾಪುರ, ಜಕ್ಕಲಿ, ಚೆನ್ನಾಪುರ, ಕೊಂಡದಹಳ್ಳಿ ವ್ಯಾಪ್ತಿಯಲ್ಲಿ ಭರದಿಂದ ಮಣ್ಣು ಸಾಗಿಸಲಾಗುತ್ತಿದೆ. ನಿತ್ಯ 200ರಿಂದ 250 ಟ್ರ್ಯಾಕ್ಟರ್ಗಳು ಮಣ್ಣನ್ನು ತೋಟಗಳಿಗೆ ಸಾಗಿಸುತ್ತಿವೆ.</p>.<p>ಹಿಟ್ಯಾಚಿಗಳಿಗೆ ಪ್ರತಿ ಗಂಟೆಗೆ ₹ 2,200 ದರ ನಿಗದಿಗೊಳಿಸಲಾಗಿದೆ. ಟಿಪ್ಪರ್ಗಳಿಗೆ ದಿನಕ್ಕೆ ₹ 6,000 ಬಾಡಿಗೆ ನೀಡಿ, ಡೀಸೆಲ್ ಅನ್ನು ರೈತರೇ ತುಂಬಿಸುವ ಕರಾರಿನ ಮೂಲಕ ಜಮೀನುಗಳಿಗೆ ಮಣ್ಣು ಸಾಗಿಸಲಾಗುತ್ತಿದೆ.</p>.<p>ಜೆಸಿಬಿ ಯಂತ್ರಗಳ ಮಾಲೀಕರು ಪ್ರತಿ ಟ್ರ್ಯಾಕ್ಟರ್ ಲೋಡ್ ಮಣ್ಣು ತುಂಬಲು ₹ 100 ದರ ನಿಗದಿಗೊಳಿಸಿದ್ದಾರೆ. ಟ್ರ್ಯಾಕ್ಟರ್ ಬಾಡಿಗೆ ದೂರಕ್ಕೆ ಅನುಗುಣವಾಗಿ ನೀಡಲಾಗುತ್ತಿದೆ ಎಂದು ಜಕ್ಕಲಿಯ ರೈತ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಪುಡಿ ಹರಳಿನಿ ರೂಪದ ಕಪ್ಪು ಮಣ್ಣು ಪೋಷಕಾಂಶಗಳ ಗಣಿ. ತೋಟದ ಬೆಳೆಗಳಿಗೆ ಹೂಳು ಮಣ್ಣು ಹಾಕುವುದರಿಂದ ಇಳುವರಿ ವೃದ್ಧಿಸಲಿದೆ. 15 ದಿನಗಳಿಂದ 5ರಿಂದ 8 ಅಡಿ ಆಳದವರೆಗೆ ಅಗೆದು ಮಣ್ಣು ತುಂಬಿಸಲಾಗುತ್ತಿದೆ. ಹೂಳನ್ನು ವ್ಯವಸ್ಥಿತವಾಗಿ ತೆಗೆಯಲಾಗುತ್ತಿದೆ. ಇದರಿಂದ ಮಳೆ ಸುರಿದಾಗ ಕೆರೆಯಂಗಳದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ ಉದ್ದೇಶವೂ ಫಲಿಸಲಿದೆ ಎಂದು ರೈತ ಹಾಲೇಶ್ ವಿವರಿಸಿದರು.</p>.<p>‘ಪ್ರತಿ ಟ್ರ್ಯಾಕ್ಟರ್ ಲೋಡ್ ಮಣ್ಣು ತುಂಬಿಸಲು ₹ 100, ಸಾಗಣೆ ದರ ₹ 500ರಂತೆ 300 ಲೋಡ್ ತೋಟಕ್ಕೆ ಸಾಗಿಸಿದ್ದೇನೆ. ₹ 2 ಲಕ್ಷ ಖರ್ಚಾಗಿದೆ’ ಎನ್ನುತ್ತಾರೆ ಚೆನ್ನಾಪುರದ ರೈತ ಕರಿಯಪ್ಪ.</p>.<p>‘ಗ್ರಾಮ ಪಂಚಾಯಿತಿ ಮಾಡಬೇಕಾದ ಕೆಲಸವನ್ನು ರೈತರೇ ಮಾಡುತ್ತಿರುವುದು ಶ್ಲಾಘನೀಯ. ರೈತರು ಹೂಳನ್ನು ತೋಟಕ್ಕೆ ಹಾಕಲು ಅಡ್ಡಿಯಿಲ್ಲ. ಇದಕ್ಕೆ ಗ್ರಾಮ ಪಂಚಾಯಿತಿಯ ಒಪ್ಪಿಗೆ ಬೇಕಿಲ್ಲ’ ಎಂದು ಕೊಂಡದಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ವಾಣಿ ಕರಿಯಪ್ಪ ಹೇಳಿದರು.</p>.<p>‘ಸೂಳೆಕೆರೆ ನೀರು ಸಂಗ್ರಹಣಾ ವ್ಯಾಪ್ತಿ 6,500 ಎಕರೆ ಇದೆ. ಒಮ್ಮೆಲೇ ಹೂಳು ತೆಗೆಸಲು ಅಪಾರ ಪ್ರಮಾಣದ ಹಣ ಬೇಕು. ಪ್ರತಿ ವರ್ಷ 100 ಎಕರೆ ಹೂಳು ತೆಗೆದರೂ ನೀರಿನ ಸಂಗ್ರಹ ಸಾಂರ್ಥ್ಯ ವೃದ್ಧಿಸಲಿದೆ’ ಎಂದು ಅವರು ಒತ್ತಾಯಿಸಿದರು.</p>.<p>‘ಸೂಳೆಕೆರೆ ಹೂಳು ತೆರವಿಗೆ ಸಹಕರಿಸುವಂತೆ ಇನ್ಫೋಸಿಸ್ ಹಾಗೂ ಎರಿಕ್ಸನ್ ಫೌಂಡೇಷನ್ಗಳಿಗೆ ಮನವಿ ಮಾಡಲಾಗಿದೆ. ಕೆರೆ ಸಮೀಕ್ಷೆ ಕಾರ್ಯ ನಡೆದು ಗಡಿ ಗುರುತಿಸಿದ ನಂತರ ಹೂಳು ತೆರವಿಗೆ ಚಿಂತನೆ ನಡೆಸಲಾಗುವುದು ಎಂಬ ಪ್ರತಿಕ್ರಿಯೆ ದೊರೆತಿದೆ. ಶೀಘ್ರ ಸಮೀಕ್ಷೆ ನಡೆಯಬೇಕಿದೆ’ ಎಂದು ಅವರು ಕೋರಿದರು.</p>.<div><blockquote>ಕೆರೆ ಸಂಜೀವಿನಿ ಯೋಜನೆಯಲ್ಲಿ ಜಿಲ್ಲಾಧಿಕಾರಿ ಪ್ರತಿ ವರ್ಷ ಸಾಧ್ಯವಾದಷ್ಟು ಹೂಳು ತೆಗೆಸಲು ಚಿಂತಿಸಬೇಕು. ಇದರಿಂದ ಕೆರೆಯ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಲಿದೆ.</blockquote><span class="attribution"> ರಘು ಹೊನ್ನೆಮರದಹಳ್ಳಿ ಖಡ್ಗ ಸಂಘ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>