ನಾಲೆಗೆ ನೀರು ಬರುವ ಮೊದಲೇ ಕೆಲವರು ಕೊಳವೆಬಾವಿ ನೀರಿನಿಂದ ಸಸಿ ಮಾಡಿಕೊಂಡಿದ್ದರು. ಇನ್ನೂ ಕೆಲವರು ಇತರ ರೈತರ ಗದ್ದೆಗಳಲ್ಲಿ ಸಸಿ ಬೆಳೆಸಿಕೊಂಡಿದ್ದರು. ಇವರೆಲ್ಲಾ ಈಗ ನಾಟಿ ಆರಂಭಿಸಿದ್ದಾರೆ. ಆದರೆ ನಾಲೆಗಳಲ್ಲಿ ನೀರು ಬಂದ ಮೇಲೆ ಬೀಜ ಚೆಲ್ಲಿರುವ ರೈತರಿಗೆ, ಮುಂದೆ ನಾಲೆಗಳಲ್ಲಿ ನೀರು ಸ್ಥಗಿತಗೊಂಡರೆ ಏನು ಮಾಡುವುದು ಎಂಬ ಭೀತಿ ಕಾಡುತ್ತಿದೆ.