ಶಾಮನೂರಿನ ವಿಭಿನ್ನ ಜಾತಿಯ ಈ ಜೋಡಿಯಲ್ಲಿ ಹುಡುಗಿ ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಯುವಕ ಪರಮೇಶ್ವರಪ್ಪನಿಗೆ ಅನುಕಂಪದ ಆಧಾರದಲ್ಲಿ ಪಿಡಿಒ ಉದ್ಯೋಗ ಸಿಕ್ಕಿತ್ತು. ಉದ್ಯೋಗ ಸಿಕ್ಕಿದ ಮೇಲೆ ಕೈಕೊಟ್ಟಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿರುವ ಆರೋಪಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಯುವತಿ ಮಹಿಳಾ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಡಿವೈಎಸ್ಪಿ ನಾಗೇಶ್ ಐತಾಳ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.