<p><strong>ದಾವಣಗೆರೆ:</strong> ಬ್ರಿಟಿಷರಿಂದ ರಾಜಕೀಯ ಅಧಿಕಾರ, ಸ್ವಾತಂತ್ರ್ಯ ಪಡೆದರೂ ಅವರ ನೆರಳಿನಿಂದ ಹೊರಬರಲು ಸಾಧ್ಯವಾಗಿಲ್ಲ. ಬ್ರಿಟಿಷರ ಬಗೆಗಿನ ಮೇಲರಿಮೆ ತೊರೆದು ಭಾರತೀಯ ಸಾಹಿತ್ಯ ಸೃಷ್ಟಿಸುವ ಅಗತ್ಯವಿದೆ ಎಂದು ಸಾಹಿತಿ ರೋಹಿತ್ ಚಕ್ರತೀರ್ಥ ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಎರಡು ದಿನ ಹಮ್ಮಿಕೊಂಡಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ 4ನೇ ಅಧಿವೇಶನದಲ್ಲಿ ‘ಸಾಹಿತ್ಯದಲ್ಲಿ ‘ಸ್ವ’ತ್ವದ ಅಭಿವ್ಯಕ್ತಿ’ ಕುರಿತು ನಡೆದ ಚರ್ಚಾಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>‘ಮಾತೃ ಭಾಷೆಯಲ್ಲಿ ಸಾಹಿತ್ಯ ರಚಿಸಿದರೆ ‘ಸ್ವ’ತ್ವ ಉಳಿಯುತ್ತದೆ ಎಂಬ ಮಾತಿದೆ. ಮಾತೃ ಭಾಷೆ ಬೇರೆಯಾಗಿದ್ದರೂ ಕನ್ನಡದಲ್ಲಿ ಅತ್ಯುತ್ತಮ ಸಾಹಿತ್ಯ ರಚಿಸಿದ ಸಾಕಷ್ಟು ಲೇಖಕರು ರಾಜ್ಯದಲ್ಲಿದ್ದಾರೆ. ಸಾಹಿತ್ಯದ ಮೂಲತಾತ್ಪರ್ಯವನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.</p>.<p>‘ಸೃಜನಶೀಲ ಬರಹವು ಭಾವನೆಯನ್ನ ಪ್ರತಿನಿಧಿಸುತ್ತದೆ. ಅನುವಾದದಲ್ಲಿ ಭಾವ ಕಳೆದು ಹೋಗುವ ಸಾಧ್ಯತೆ ಇರುತ್ತದೆ. ಸಂಸ್ಕೃತಿಯನ್ನು ಕಟ್ಟುವ, ಒಡೆಯುವ ಕೆಲಸ ಅನುವಾದದಿಂದ ಆಗುತ್ತದೆ. ಅನುವಾದ ಮಾಡುವಾಗ ಎಚ್ಚರಿಕೆಯಿಂದ ಇರಬೇಕು’ ಎಂದು ಪತ್ರಕರ್ತ ಸೂರ್ಯಪ್ರಕಾಶ್ ಪಂಡಿತ್ ಸಲಹೆ ನೀಡಿದರು.</p>.<p>‘ಮನಸ್ಸಿನ ಭಾವನೆಗಳಿಗೆ ಗಡಿ ಇಲ್ಲ. ಮನುಷ್ಯನ ಮೂಲಗ್ರಹಿಕೆಗಳು ಒಂದೇ ಆಗಿವೆ. ಆದರೆ, ಸಾಂಸ್ಕೃತಿಕ ಭಿನ್ನತೆಗಳಿವೆ’ ಎಂದರು.</p>.<p>ಸಹನಾ ವಿಜಯಕುಮಾರ್, ನೀತಾ ರಾವ್, ದೀಪಾ ಜೋಷಿ, ಸುಧಾಕರ ಹೊಸಹಳ್ಳಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಬ್ರಿಟಿಷರಿಂದ ರಾಜಕೀಯ ಅಧಿಕಾರ, ಸ್ವಾತಂತ್ರ್ಯ ಪಡೆದರೂ ಅವರ ನೆರಳಿನಿಂದ ಹೊರಬರಲು ಸಾಧ್ಯವಾಗಿಲ್ಲ. ಬ್ರಿಟಿಷರ ಬಗೆಗಿನ ಮೇಲರಿಮೆ ತೊರೆದು ಭಾರತೀಯ ಸಾಹಿತ್ಯ ಸೃಷ್ಟಿಸುವ ಅಗತ್ಯವಿದೆ ಎಂದು ಸಾಹಿತಿ ರೋಹಿತ್ ಚಕ್ರತೀರ್ಥ ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಎರಡು ದಿನ ಹಮ್ಮಿಕೊಂಡಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ 4ನೇ ಅಧಿವೇಶನದಲ್ಲಿ ‘ಸಾಹಿತ್ಯದಲ್ಲಿ ‘ಸ್ವ’ತ್ವದ ಅಭಿವ್ಯಕ್ತಿ’ ಕುರಿತು ನಡೆದ ಚರ್ಚಾಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>‘ಮಾತೃ ಭಾಷೆಯಲ್ಲಿ ಸಾಹಿತ್ಯ ರಚಿಸಿದರೆ ‘ಸ್ವ’ತ್ವ ಉಳಿಯುತ್ತದೆ ಎಂಬ ಮಾತಿದೆ. ಮಾತೃ ಭಾಷೆ ಬೇರೆಯಾಗಿದ್ದರೂ ಕನ್ನಡದಲ್ಲಿ ಅತ್ಯುತ್ತಮ ಸಾಹಿತ್ಯ ರಚಿಸಿದ ಸಾಕಷ್ಟು ಲೇಖಕರು ರಾಜ್ಯದಲ್ಲಿದ್ದಾರೆ. ಸಾಹಿತ್ಯದ ಮೂಲತಾತ್ಪರ್ಯವನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.</p>.<p>‘ಸೃಜನಶೀಲ ಬರಹವು ಭಾವನೆಯನ್ನ ಪ್ರತಿನಿಧಿಸುತ್ತದೆ. ಅನುವಾದದಲ್ಲಿ ಭಾವ ಕಳೆದು ಹೋಗುವ ಸಾಧ್ಯತೆ ಇರುತ್ತದೆ. ಸಂಸ್ಕೃತಿಯನ್ನು ಕಟ್ಟುವ, ಒಡೆಯುವ ಕೆಲಸ ಅನುವಾದದಿಂದ ಆಗುತ್ತದೆ. ಅನುವಾದ ಮಾಡುವಾಗ ಎಚ್ಚರಿಕೆಯಿಂದ ಇರಬೇಕು’ ಎಂದು ಪತ್ರಕರ್ತ ಸೂರ್ಯಪ್ರಕಾಶ್ ಪಂಡಿತ್ ಸಲಹೆ ನೀಡಿದರು.</p>.<p>‘ಮನಸ್ಸಿನ ಭಾವನೆಗಳಿಗೆ ಗಡಿ ಇಲ್ಲ. ಮನುಷ್ಯನ ಮೂಲಗ್ರಹಿಕೆಗಳು ಒಂದೇ ಆಗಿವೆ. ಆದರೆ, ಸಾಂಸ್ಕೃತಿಕ ಭಿನ್ನತೆಗಳಿವೆ’ ಎಂದರು.</p>.<p>ಸಹನಾ ವಿಜಯಕುಮಾರ್, ನೀತಾ ರಾವ್, ದೀಪಾ ಜೋಷಿ, ಸುಧಾಕರ ಹೊಸಹಳ್ಳಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>