ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ,‘ಇಂದಿನ ಮಕ್ಕಳಲ್ಲಿ ಕ್ರೀಡೆಗಳ ಬಗ್ಗೆ ಜ್ಞಾನದ ಕೊರತೆ ಇದ್ದು, ಅವರು ಆಟ ಆಡುವುದೂ ಕಡಿಮೆ ಆಗಿದೆ. ಸದಾ ಓದು, ಕಂಪ್ಯೂಟರ್, ಮೊಬೈಲ್ ಮುಂದೆ ಯಾಂತ್ರೀಕೃತವಾಗಿರುತ್ತಾರೆ. ಅವರಿಗೂ ಪೋಷಕರು ಕ್ರೀಡೆಯಲ್ಲಿ ತೊಡಗುವಂತೆ ಪ್ರೇರೇಪಿಸಿ ತಾವೂ ಆಡಬೇಕು’ ಎಂದರು.