‘ಕಳೆದ ಬಾರಿ ಪ್ರತಿ ಕೆ.ಜಿ.ಗೆ ₹ 10 ರಂತೆ ಧಾರಣೆ ಸಿಕ್ಕಿತ್ತು. ಪ್ರತಿ ಕೆ.ಜಿ.ಗೆ ಕನಿಷ್ಠ ₹ 6 ಸಿಕ್ಕರೂ ಲಾಭ ಕಾಣಬಹುದು. ಎರಡು ಎಕರೆಗೆ ₹ 60,000 ಖರ್ಚು ತಗುಲಿದೆ. 3 ತಿಂಗಳಿನಿಂದ ಬೆಳೆ ಪೋಷಿಸಲು ಮಾಡಿದ ಶ್ರಮ ವ್ಯರ್ಥವಾಗಿದೆ. ಪ್ರತಿ ಎಕರೆಗೆ ಕನಿಷ್ಠ 20 ಟನ್ ಇಳುವರಿ ನಿರೀಕ್ಷೆ ಇತ್ತು. ಆದರೆ, ದರ ಕುಸಿತದಿಂದ ಬೇರೇನೂ ತೋಚುತ್ತಿಲ್ಲ. ಗ್ರಾಮದ ಕೆಲವರು ಬೂದುಗುಂಬಳ ಕಿತ್ತು ಜಾನುವಾರುಗಳ ಮೇವಿಗೆ ಕೊಯ್ದುಕೊಂಡು ಹೋಗಿದ್ದಾರೆ. ಹೊಲ ಉಳುಮೆ ಮಾಡಿ ಬೆಳೆ ನಾಶ ಮಾಡಲು ನಿರ್ಧರಿಸಿದ್ದೇನೆ’ ಎಂದು ಮಂಜುನಾಥ್ ಅವರು ಬೇಸರದಿಂದ ಹೇಳಿದರು.