<p><strong>ದಾವಣಗೆರೆ</strong>: ‘ರಾಜಕೀಯವು ಸೇವಾ ಕ್ಷೇತ್ರ ಎಂಬ ಭಾವ ಮೂಡಬೇಕಿದೆ. ಆದರೆ, ಅದು ಸೇವನೆಯ ಕ್ಷೇತ್ರ ಎಂಬಂತಾಗಿದೆ. ಹಣವಂತರು, ದರೋಡೆಕೋರರು, ವಂಚಕರಿಗೆ ರಾಜಕೀಯ ಹೆಚ್ಚು ತೆರೆದುಕೊಂಡಿದ್ದು, ಮೌಲ್ಯಾಧಾರಿತ ರಾಜಕಾರಣದ ಅವಶ್ಯವಿದೆ’ ಎಂದು ಪಾಂಡೋಮಟ್ಟಿ ಗುರುಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು. </p><p>ಇಲ್ಲಿನ ಎಂಸಿಸಿ ‘ಬಿ’ ಬ್ಲಾಕ್ನ ಕರುಣಾ ಜೀವ ಕಲ್ಯಾಣ ಟ್ರಸ್ಟ್ನ ಕಚೇರಿಯಲ್ಲಿ ಶನಿವಾರ ನಡೆದ ಸರ್ವೋದಯ ರಾಜಕೀಯ ಪುನರುತ್ಥಾನ ಚಿಂತನ ಸಭೆಯಲ್ಲಿ ಮಾತನಾಡಿದರು. </p><p>‘ಭೂ ಮಾಫಿಯಾ, ಹಣದ ರಾಜಕೀಯ, ಪಕ್ಷಾಂತರದಿಂದ ಮತದಾರರು ಕಂಗೆಟ್ಟಿದ್ದಾರೆ. ಚುನಾವಣೆ ವೇಳೆ ಯುವಕರು ಮದ್ಯದ ದಾಸರಾಗುತ್ತಿದ್ದಾರೆ. ರಾಜಕಾರಣವನ್ನು ಶುದ್ಧೀಕರಿಸಲು ಯುವಜನತೆ ಕುಡಿತದ ಚಟ ಬಿಡಬೇಕು’ ಎಂದು ಸಲಹೆ ನೀಡಿದರು. </p><p>‘ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರ ವಿಕೇಂದ್ರೀಕರಣ ಆಗಿದ್ದರೂ, ಅದರ ಆಶೋತ್ತರ ಈಡೇರುತ್ತಿಲ್ಲ. ಸಾತ್ವಿಕ ರಾಜಕಾರಣಿಗಳನ್ನು ಮತದಾರರು ಗುರುತಿಸಿ, ಬೆಂಬಲಿಸಬೇಕು. ಸಿದ್ಧಾಂತದ ಆಧಾರದ ಮೇಲೆ ಚರ್ಚೆ ನಡೆಯಬೇಕು. ಆದರೆ, ವೈಯಕ್ತಿಕ ದ್ವೇಷದ ಮೇಲೆ ಚರ್ಚೆ ನಡೆಯುತ್ತಿರುವುದು ವಿಷಾದನೀಯ’ ಎಂದು ಬೇಸರಿಸಿದರು. </p><p>‘ರೈತರು ನೆಮ್ಮದಿಯಿಂದ ಇರುವ ದೇಶ ಕಲ್ಯಾಣಮಯವಾಗಿರುತ್ತದೆ. ರಾಜಕಾರಣ ಅತ್ಯಂತ ಪರಿಶುದ್ಧವಾಗಿರಬೇಕು. ರಾಜಕೀಯದಿಂದ ಆಗುತ್ತಿರುವ ಅನಾಹುತಗಳನ್ನು ತಪ್ಪಿಸಬೇಕಿದೆ. ಕೆಲಸ ಮಾಡದ ಜನಪ್ರತಿನಿಧಿಯನ್ನು ವಾಪಸ್ ಕರೆಸಿಕೊಳ್ಳುವ ವ್ಯವಸ್ಥೆ ಬರಬೇಕು’ ಎಂದು ಹೇಳಿದರು. </p><p>‘ಗ್ರಾಮ ಪಂಚಾಯಿತಿಗಳಲ್ಲಿ ಕಾಟಾಚಾರಕ್ಕೆ ಗ್ರಾಮಸಭೆ ನಡೆಯುತ್ತಿವೆ. ಸಭೆಗಳಲ್ಲಿ ಗ್ರಾಮಸ್ಥರು ಪಾಲ್ಗೊಳ್ಳುತ್ತಿಲ್ಲ. ಕಾಯ್ದೆಗಳಿದ್ದರೂ, ಸಮರ್ಪಕವಾಗಿ ಜಾರಿಗೊಳ್ಳುತ್ತಿಲ್ಲ. ನೋಟಿಗಾಗಿ ವೋಟು ವ್ಯವಸ್ಥೆ ಬದಲಾಗಬೇಕಿದೆ’ ಎಂದು ನೆಲಮಂಗಲದ ಬೋರೇಗೌಡ ಹೇಳಿದರು. </p><p>‘ಗ್ರಾಮ ಪಂಚಾಯಿತಿಯ ಉಪಸಮಿತಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಗ್ರಾಮ ಸಭೆಗಳು ಆನ್ಲೈನ್ ಮೂಲಕವೂ ನಡೆಯಬೇಕು. ಜನರು ದೇವಾಲಯಕ್ಕೆ ತೆರಳಿದಂತೆ ಪಂಚಾಯಿತಿ ಕಚೇರಿಗೂ ತೆರಳಬೇಕು’ ಎಂದರು. </p><p>ಮುಖಂಡರಾದ ಮಹಿಮ ಪಟೇಲ್, ಶಿವನಕೆರೆ ಬಸವಲಿಂಗಪ್ಪ, ಪತ್ರಕರ್ತ ಬಿ.ಎನ್. ಮಲ್ಲೇಶ್, ಬೆಳಗಾವಿಯ ದಿಲೀಪ್ ಕಾಮತ್, ಅಜ್ಜಿಹಳ್ಳಿ ರವಿ, ಕುಸುಮಾ, ಮುರುಗೇಶ್ ಉರುವಕೊಂಡಿ ಮಾತನಾಡಿದರು. </p>.<h2>‘ಜನಾಂದೋಲನದಿಂದ ಬದಲಾವಣೆ’ </h2><p>‘ಎಲ್ಲಾ ವಲಯಗಳಲ್ಲಿ ಒಳ್ಳೆಯದನ್ನು ಬೆಂಬಲಿಸುವ ವಾತಾವರಣ ನಿರ್ಮಾಣವಾದರೆ, ರಾಜಕಾರಣದಲ್ಲೂ ಒಳ್ಳೆಯವರಿಗೆ ಅವಕಾಶ ಸಿಗುತ್ತದೆ’ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಅಭಿಪ್ರಾಯಪಟ್ಟರು. </p><p>‘ಜನಾಂದೋಲನದಿಂದ ಬದಲಾವಣೆ ತರಬಹುದು. ಆಂದೋಲನದ ವಿಷಯ ಎಷ್ಟು ಮುಖ್ಯವೋ, ನಾಯಕತ್ವ ವಹಿಸುವವರ ಪ್ರಾಮಾಣಿಕತೆಯೂ ಅಷ್ಟೇ ಮುಖ್ಯ’ ಎಂದರು. </p><p>‘ಶುದ್ಧ ರಾಜಕಾರಣ ಬಯಸುವವರು ಜನಸಾಮಾನ್ಯರೊಂದಿಗೆ ಬೆರೆತು ಜನರ ಕಷ್ಟಗಳಿಗೆ ಧ್ವನಿಯಾಗಬೇಕು. ಬರೀ ಭಾಷಣದಿಂದ ಪ್ರಯೋಜನವಾಗಲ್ಲ’ ಎಂದು ಹೇಳಿದರು. </p>.<div><blockquote>ಬಹುತೇಕ ಗ್ರಾಮಗಳಲ್ಲಿ ಮದ್ಯ ಅಕ್ರಮ ಮಾರಾಟ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಎಂತಹ ಹೋರಾಟಕ್ಕೂ ಸಿದ್ಧವಾಗಬೇಕಿದೆ </blockquote><span class="attribution"> ಆವರಗೆರೆ ರುದ್ರಮುನಿ, ಮುಖಂಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ‘ರಾಜಕೀಯವು ಸೇವಾ ಕ್ಷೇತ್ರ ಎಂಬ ಭಾವ ಮೂಡಬೇಕಿದೆ. ಆದರೆ, ಅದು ಸೇವನೆಯ ಕ್ಷೇತ್ರ ಎಂಬಂತಾಗಿದೆ. ಹಣವಂತರು, ದರೋಡೆಕೋರರು, ವಂಚಕರಿಗೆ ರಾಜಕೀಯ ಹೆಚ್ಚು ತೆರೆದುಕೊಂಡಿದ್ದು, ಮೌಲ್ಯಾಧಾರಿತ ರಾಜಕಾರಣದ ಅವಶ್ಯವಿದೆ’ ಎಂದು ಪಾಂಡೋಮಟ್ಟಿ ಗುರುಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು. </p><p>ಇಲ್ಲಿನ ಎಂಸಿಸಿ ‘ಬಿ’ ಬ್ಲಾಕ್ನ ಕರುಣಾ ಜೀವ ಕಲ್ಯಾಣ ಟ್ರಸ್ಟ್ನ ಕಚೇರಿಯಲ್ಲಿ ಶನಿವಾರ ನಡೆದ ಸರ್ವೋದಯ ರಾಜಕೀಯ ಪುನರುತ್ಥಾನ ಚಿಂತನ ಸಭೆಯಲ್ಲಿ ಮಾತನಾಡಿದರು. </p><p>‘ಭೂ ಮಾಫಿಯಾ, ಹಣದ ರಾಜಕೀಯ, ಪಕ್ಷಾಂತರದಿಂದ ಮತದಾರರು ಕಂಗೆಟ್ಟಿದ್ದಾರೆ. ಚುನಾವಣೆ ವೇಳೆ ಯುವಕರು ಮದ್ಯದ ದಾಸರಾಗುತ್ತಿದ್ದಾರೆ. ರಾಜಕಾರಣವನ್ನು ಶುದ್ಧೀಕರಿಸಲು ಯುವಜನತೆ ಕುಡಿತದ ಚಟ ಬಿಡಬೇಕು’ ಎಂದು ಸಲಹೆ ನೀಡಿದರು. </p><p>‘ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರ ವಿಕೇಂದ್ರೀಕರಣ ಆಗಿದ್ದರೂ, ಅದರ ಆಶೋತ್ತರ ಈಡೇರುತ್ತಿಲ್ಲ. ಸಾತ್ವಿಕ ರಾಜಕಾರಣಿಗಳನ್ನು ಮತದಾರರು ಗುರುತಿಸಿ, ಬೆಂಬಲಿಸಬೇಕು. ಸಿದ್ಧಾಂತದ ಆಧಾರದ ಮೇಲೆ ಚರ್ಚೆ ನಡೆಯಬೇಕು. ಆದರೆ, ವೈಯಕ್ತಿಕ ದ್ವೇಷದ ಮೇಲೆ ಚರ್ಚೆ ನಡೆಯುತ್ತಿರುವುದು ವಿಷಾದನೀಯ’ ಎಂದು ಬೇಸರಿಸಿದರು. </p><p>‘ರೈತರು ನೆಮ್ಮದಿಯಿಂದ ಇರುವ ದೇಶ ಕಲ್ಯಾಣಮಯವಾಗಿರುತ್ತದೆ. ರಾಜಕಾರಣ ಅತ್ಯಂತ ಪರಿಶುದ್ಧವಾಗಿರಬೇಕು. ರಾಜಕೀಯದಿಂದ ಆಗುತ್ತಿರುವ ಅನಾಹುತಗಳನ್ನು ತಪ್ಪಿಸಬೇಕಿದೆ. ಕೆಲಸ ಮಾಡದ ಜನಪ್ರತಿನಿಧಿಯನ್ನು ವಾಪಸ್ ಕರೆಸಿಕೊಳ್ಳುವ ವ್ಯವಸ್ಥೆ ಬರಬೇಕು’ ಎಂದು ಹೇಳಿದರು. </p><p>‘ಗ್ರಾಮ ಪಂಚಾಯಿತಿಗಳಲ್ಲಿ ಕಾಟಾಚಾರಕ್ಕೆ ಗ್ರಾಮಸಭೆ ನಡೆಯುತ್ತಿವೆ. ಸಭೆಗಳಲ್ಲಿ ಗ್ರಾಮಸ್ಥರು ಪಾಲ್ಗೊಳ್ಳುತ್ತಿಲ್ಲ. ಕಾಯ್ದೆಗಳಿದ್ದರೂ, ಸಮರ್ಪಕವಾಗಿ ಜಾರಿಗೊಳ್ಳುತ್ತಿಲ್ಲ. ನೋಟಿಗಾಗಿ ವೋಟು ವ್ಯವಸ್ಥೆ ಬದಲಾಗಬೇಕಿದೆ’ ಎಂದು ನೆಲಮಂಗಲದ ಬೋರೇಗೌಡ ಹೇಳಿದರು. </p><p>‘ಗ್ರಾಮ ಪಂಚಾಯಿತಿಯ ಉಪಸಮಿತಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಗ್ರಾಮ ಸಭೆಗಳು ಆನ್ಲೈನ್ ಮೂಲಕವೂ ನಡೆಯಬೇಕು. ಜನರು ದೇವಾಲಯಕ್ಕೆ ತೆರಳಿದಂತೆ ಪಂಚಾಯಿತಿ ಕಚೇರಿಗೂ ತೆರಳಬೇಕು’ ಎಂದರು. </p><p>ಮುಖಂಡರಾದ ಮಹಿಮ ಪಟೇಲ್, ಶಿವನಕೆರೆ ಬಸವಲಿಂಗಪ್ಪ, ಪತ್ರಕರ್ತ ಬಿ.ಎನ್. ಮಲ್ಲೇಶ್, ಬೆಳಗಾವಿಯ ದಿಲೀಪ್ ಕಾಮತ್, ಅಜ್ಜಿಹಳ್ಳಿ ರವಿ, ಕುಸುಮಾ, ಮುರುಗೇಶ್ ಉರುವಕೊಂಡಿ ಮಾತನಾಡಿದರು. </p>.<h2>‘ಜನಾಂದೋಲನದಿಂದ ಬದಲಾವಣೆ’ </h2><p>‘ಎಲ್ಲಾ ವಲಯಗಳಲ್ಲಿ ಒಳ್ಳೆಯದನ್ನು ಬೆಂಬಲಿಸುವ ವಾತಾವರಣ ನಿರ್ಮಾಣವಾದರೆ, ರಾಜಕಾರಣದಲ್ಲೂ ಒಳ್ಳೆಯವರಿಗೆ ಅವಕಾಶ ಸಿಗುತ್ತದೆ’ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಅಭಿಪ್ರಾಯಪಟ್ಟರು. </p><p>‘ಜನಾಂದೋಲನದಿಂದ ಬದಲಾವಣೆ ತರಬಹುದು. ಆಂದೋಲನದ ವಿಷಯ ಎಷ್ಟು ಮುಖ್ಯವೋ, ನಾಯಕತ್ವ ವಹಿಸುವವರ ಪ್ರಾಮಾಣಿಕತೆಯೂ ಅಷ್ಟೇ ಮುಖ್ಯ’ ಎಂದರು. </p><p>‘ಶುದ್ಧ ರಾಜಕಾರಣ ಬಯಸುವವರು ಜನಸಾಮಾನ್ಯರೊಂದಿಗೆ ಬೆರೆತು ಜನರ ಕಷ್ಟಗಳಿಗೆ ಧ್ವನಿಯಾಗಬೇಕು. ಬರೀ ಭಾಷಣದಿಂದ ಪ್ರಯೋಜನವಾಗಲ್ಲ’ ಎಂದು ಹೇಳಿದರು. </p>.<div><blockquote>ಬಹುತೇಕ ಗ್ರಾಮಗಳಲ್ಲಿ ಮದ್ಯ ಅಕ್ರಮ ಮಾರಾಟ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಎಂತಹ ಹೋರಾಟಕ್ಕೂ ಸಿದ್ಧವಾಗಬೇಕಿದೆ </blockquote><span class="attribution"> ಆವರಗೆರೆ ರುದ್ರಮುನಿ, ಮುಖಂಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>