ಬಸಾಪುರದ ವೀರೇಶ್ (38) ಮೃತಪಟ್ಟವರರು. ಹಲಗೇರಿ ಗುರಣ್ಣ ಅಂಡ್ ಸನ್ಸ್ ಅಂಗಡಿ ಮಾಲೀಕ ಮೃತ್ಯುಂಜಯ ಹಾಗೂ ಬಸವೇಶ ಎಂಬುವರು ಸೇರಿ ಕೊಲೆ ಮಾಡಿ ಕಾರಿನಲ್ಲಿ ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿದ ಹಮಾಲಿಗಳು ಎಪಿಎಂಸಿಯಲ್ಲಿರುವ ಅಂಗಡಿಯ ಮೇಲೆ ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಪುಡಿ ಪುಡಿ ಮಾಡಿದರು. ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು.